Ad imageAd image

ಲೋಕಾಯುಕ್ತವೇ ತನಿಖೆ ನಡೆಸಲಿ : ಸಿದ್ದರಾಮಯ್ಯ ಬಿಗ್‌ ರಿಲೀಫ್‌

Bharath Vaibhav
ಲೋಕಾಯುಕ್ತವೇ ತನಿಖೆ ನಡೆಸಲಿ : ಸಿದ್ದರಾಮಯ್ಯ ಬಿಗ್‌ ರಿಲೀಫ್‌
siddaramaiah
WhatsApp Group Join Now
Telegram Group Join Now

ಧಾರವಾಡ / ಬೆಂಗಳೂರು : ಸಿಎಂ ಸಿದ್ದರಾಮ್ಯಯ ಅವರ ಮುಡಾ ಹಗರಣದ ತನಿಖೆಯನ್ನು ಸಿಬಿಐ ಗೆ ವಹಿಸಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್‌ ವಜಾಗೊಳಿಸಿದೆ. ಲೋಕಾಯುಕ್ತವೆ ತನಿಖೆ ನಡೆಸಲಿ ಎಂದು ಧಾರವಾಡ ಕೋರ್ಟ್‌ ಸೂಚಿಸಿದ್ದು ಸಿಎಂ ಸಿದ್ದರಾಮಯ್ಯ ಅವರಿಗೆ ಬಿಗ್‌ ರಿಲೀಫ್‌ ಸಿಕ್ಕಂತಾಗಿದೆ.

ಲೋಕಾಯುಕ್ತ ರಾಜ್ಯ ಸರ್ಕಾರದ ಅಧೀನದಲ್ಲಿದೆ. ಅಲ್ಲದೇ ಪ್ರಕರಣದ ಆರೋಪಿಯಾಗಿರುವ ಸಿಎಂ ಸಿದ್ದರಾಮಯ್ಯ ಅತ್ಯಂತ ಪ್ರಭಾವಿ ಸ್ಥಾನದಲ್ಲಿದ್ದಾರೆ.

ಹೀಗಾಗಿ ಪ್ರಕರಣದ ಮೇಲೆ ಅವರು ಪ್ರಭಾವ ಬೀರುವ ಸಾಧ್ಯತೆಯಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕೆಂದು ದೂರುದಾರರಾದ ಸ್ನೇಹಮಯಿ ಕೃಷ್ಣ ಅವರು ಮನವಿ ಮಾಡಿಕೊಂಡಿದ್ದರು.

ಎರಡೂ ಬದಿಯ ಕಕ್ಷಿದಾರ ವಾದವನ್ನು ಆಲಿಸಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಆದೇಶವನ್ನು ಇಂದಿಗೆ ಕಾಯ್ದಿರಿಸಿತ್ತು. ಸಿಎಂ ಸಿದ್ದರಾಮಯ್ಯ ಅವರ ಪರವಾಗಿ ಹಾಗೂ ರಾಜ್ಯ ಸರ್ಕಾರದ ಪರವಾಗಿ ವಾದಿಸಿದ್ದ ವಕೀಲರು ಸ್ನೇಹಮಯಿ ಕೃಷ್ಣ ಅವರ ವಾದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ಈ ಹಿಂದೆ ಲೋಕಾಯುಕ್ತವನ್ನು ಸಮರ್ಥಿಸುತ್ತಿದ್ದ ದೂರುದಾರರು ಈಗ ಸಿಬಿಐ ತನಿಖೆ ಆಗ್ರಹಿಸುತ್ತಿದ್ದಾರೆ. ಲೋಕಾಯುಕ್ತ ರಾಜ್ಯ ಸರ್ಕಾರದ ಅಧೀನದಲ್ಲಿದ್ದರೂ ಸ್ವತಂತ್ರ್ಯ ತನಿಖಾ ಸಂಸ್ಥೆಯಾಗಿದೆ. ಕೇಂದ್ರ ಸರ್ಕಾರದ ಸಿಬಿಐ ತನಿಖೆಗೆ ಆಗ್ರಹಿಸುವುದು ಸರಿಯಲ್ಲ ಎಂದು ಹೇಳಿದ್ದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!