ಹುಬ್ಬಳ್ಳಿ : ಮಹಾತ್ಮ ಎಂದರೆ ತಪ್ಪಾಗುತ್ತದೆ.. ಬರೀ ಗಾಂಧಿ ಮತ್ತು ನೆಹರು ಈ ದೇಶವನ್ನು ಹಾಳು ಮಾಡಿದವರು ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.
ವಕ್ಫ್ ಆಸ್ತಿ ಅವರಪ್ಪಂದಾ ಎಂಬ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ಕುರಿತಾಗಿ ಯತ್ನಾಳ್ ಮಾತನಾಡುವಾಗ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಕ್ಫ್ ಆಸ್ತಿ ಅಪರಪ್ಪಂದಾ…? ಎಂದ ಯತ್ನಾಳ್, ಅವರು ಮೊಘಲರು… ಕಳ್ಳ ಸೂ..ಮಕ್ಕಳು. ಅಫ್ಘಾನಿಸ್ತಾನದಿಂದ ಬಂದವರು, ಅಯೋಗ್ಯ ನನ್ ಮಕ್ಳು. ನಮ್ಮ ದೇಶದಲ್ಲಿ ರಾಮ, ಪಾಂಡವರು, ಅಲ್ಲಿಂದ ಈವರೆಗೂ ನಮ್ಮ ಇತಿಹಾಸವಿದೆ.
ಆಗಿನ್ನೂ ಇಸ್ಲಾಂ ಧರ್ಮವೇ ಹುಟ್ಟಿರಲಿಲ್ಲ. ಮೊನ್ ಮೊನ್ನೆ ಅವರು ನಮ್ಮ ಮುಂದೆ ಕಣ್ಣಬಿಟ್ಟಿದ್ದಾರೆ. ಟಿಪ್ಪು, ಆದಿಲ್ ಶಾಹಿ, ಔರಂಗಜೇಬ್ ಗೆ ಅಂಜಿ ಜಮೀರ್ ಅಹಮ್ಮದ್ ಖಾನ್ ಅವರ ಪೂರ್ವಜರು ಮತಾಂತರ ಆದವರು. ಇವು ಇಲ್ಲಿ ಬಿತ್ತಿದ ಬೀಜಗಳು ಅಲ್ಲ. ಎಲ್ಲರನ್ನು ಹೆದರಿಸಿ ಮತಾಂತರ ಮಾಡಿದವರು. ಇನ್ನು ಗಾಂಧಿ ಮತ್ತು ನೆಹರು ಈ ದೇಶ ಹಾಳಾಗಲು ಕಾರಣ ಎಂದು ಯತ್ನಾಳ್ ಕಿಡಿಕಾರಿದ್ದಾರೆ.