Ad imageAd image
- Advertisement -  - Advertisement -  - Advertisement - 

ಮಾರುತೇಶ್ವರ ಜಾತ್ರೆ ಸಂಭ್ರಮ…

Bharath Vaibhav
ಮಾರುತೇಶ್ವರ ಜಾತ್ರೆ ಸಂಭ್ರಮ…
WhatsApp Group Join Now
Telegram Group Join Now

ಮುದಗಲ್ಲ :-ವೆಂಕಟರಾಯನಪೇಟೆಯ ಮಾರುತೇಶ್ವರ ಜಾತ್ರಾ ಮಹೋತ್ಸವವು ಶ್ರಾವಣ ಮಾಸದ ಕೊನೆ ಸೋಮವಾರ ದಂದು ಸಂಪನ್ನಗೊಂಡಿತು.ಬೆಳಗ್ಗೆ ದೇಗುಲದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನೆರವೇರಿದವು. ಮಹಿಳೆ ಯರಿಂದ ಕಳಶದ ಮೆರವಣಿಗೆ ನಡೆಯಿತು.

ಸಂಜೆ ಕಳಸಾರೋಹಣ ಕಾರ್ಯಕ್ರಮ ಜರುಗಿತು. ನಾನಾ ಸಾಂಸ್ಕೃತಿಕ ತಂಡಗಳು ಮೆರವಣಿಗೆಗೆ ಮೆರಗು ತಂದವು. ಅಲಂಕೃತ ವಾಹನದಲ್ಲಿ ಆಂಜನೇಯನ ಭಾವಚಿತ್ರ ಪ್ರತಿಷ್ಠಾಪಿಸಿ, ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಕಲ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಲಾಯಿತು.

ಈ ಸಂದರ್ಭದಲ್ಲಿ ,, ಪುರಸಭೆ ಸದಸ್ಯರಾದ ದುರುಗಪ್ಪ ಕಟ್ಟಿಮನಿ,ಆನಂದ ಪೇಂಟರ್, ಬಸವರಾಜ ಬಂಕದಮನಿ, ಪರಶುರಾಮ್‌ ಕಟ್ಟಿಮನಿ ಜೆ.ಇ , ಶರಣಪ್ಪ ಕಟ್ಟಿಮನಿ, ವೆಂಕಟೇಶ, ರವಿ ಕಟ್ಟಿಮನಿ, ವೆಂಕಟೇಶ ಹಿರೇಮನಿ, ರಾಘ ಕುದುರಿ, ಮೌನೇಶ ಭಂಡಾರಿ ,ಹುಲೇಶ ,ಅಮರೇಶ ಪೇಂಟರ್ ,ಹನುಮಂತ ಬಡಿಗೇರ್ ,ರಾಮಪ್ಪ ಬಂಕದ ಮನಿ ಸಮಾಜದ ಇತರರು ಇದ್ದರು.

ವರದಿ: ಮಂಜುನಾಥ ಕುಂಬಾರ

WhatsApp Group Join Now
Telegram Group Join Now
Share This Article
error: Content is protected !!