ಕಲಘಟಗಿ: -ಅವೈಜ್ಞಾನಿಕ ಒಳ ಮೀಸಲಾತಿ ಜಾರಿಗೆ ತರಲು ಹೊರಟ ರಾಜ್ಯ ಸರ್ಕಾರದ ನಡೆಗೆ ವಿರುದ್ಧಿಸಿ ಬಂಜಾರ ಭೋವಿ ವಡ್ಡರ ಕೊರಚ ಕೊರಮ ಮೀಸಲಾತಿ ಸಂರಕ್ಷಣಾ ಹೋರಾಟ ಸಮಿತಿ ವತಿಯಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಕೊರಚ ಕೊರಮ ಭೋವಿ ವಡ್ಡರ ಹಾಗೂ ಬಂಜಾರ ಸಮುದಾಯದ ಮುಖಂಡರು,ಸಮುದಾಯ ಬಾಂಧವರು ದಿ.೨೫ ರಂದು ಶುಕ್ರವಾರ ೧೦ ಘಂಟೆಗೆ ಧಾರವಾಡ ಜಿಲ್ಲೆಯ ಜೂಬ್ಲಿ ಸರ್ಕಲ್ನಿಂದ ಜಿಲ್ಲಾಧಿಕಾರಿ ಕಛೇರಿವರೆಗೆ ಪ್ರತಿಭಟನೆ ಮೂಲಕ ರಾಜ್ಯ ಸರ್ಕಾರ ಅವೈಜ್ಞಾನಿಕ ಒಳ ಮೀಸಲಾತಿಯನ್ನು ಜಾರಿಮಾಡದಂತೆ ಅಗ್ರಹಿಸಿ ಮನವಿ ಸಲ್ಲಿಸಲಾಗುವುದೆಂದು ಆಲ್ ಇಂಡಿಯಾ ಬಂಜಾರ ಸೇವಾ ಸಂಘ (ರಿ) ಜಿಲ್ಲಾಧ್ಯಕ್ಷ ಮಂಗಲಪ್ಪ ಲಮಾಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ:-ನಿತೀಶ