Ad imageAd image

ಮುಖ್ಯದ್ವಾರ ಸುಂದರವಾಗಿ ನಿರ್ಮಾಣವಾಗಲಿ ಬಿ ಒ ಗಾಯತ್ರಿ ಸಜ್ಜನ್

Bharath Vaibhav
ಮುಖ್ಯದ್ವಾರ ಸುಂದರವಾಗಿ ನಿರ್ಮಾಣವಾಗಲಿ ಬಿ ಒ ಗಾಯತ್ರಿ ಸಜ್ಜನ್
WhatsApp Group Join Now
Telegram Group Join Now

ಕಲಘಟಗಿ: ತಾಲೂಕಿನ ಕಾಮಧೇನು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ದ್ವಾರದ ಗುದ್ದಲಿ ಪೂಜೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀಮತಿ ಗಾಯತ್ರಿ ಧೇವಿ ಸಜ್ಜನ್ ಅವರು ಗುದ್ದಲಿ ಪೂಜೆ ನೆರವೇರಿಸಿದರು

ಈ ಸಂದರ್ಭದಲ್ಲಿ ಮಾತನಾಡಿದ ಅವರು ಶಾಲೆಯು ಅಚ್ಚುಕಟ್ಟಾಗಿ ಕಾಣಬೇಕೆಂದರೆ ಮುಖ್ಯದ್ವಾರ ಕೂಡಾ ಆಕರ್ಷಿಸುವಂತೆ ಇರಬೇಕು ಮುಖ್ಯದ್ವಾರವು ಬೇಗನೆ ನಿರ್ಮಾಣವಾಗಿ ಸುಂದರವಾಗಿ ಕಾಣಲಿ ಎಂದು ಅನಿಸಿಕೆ ವ್ಯಕ್ತಪಡಿಸಿದರು. ಹಾಗೂ ಗ್ರಾಮದ ವತಿಯಿಂದ ಮತ್ತು ಶಾಲಾ ವೃಂದದ ವತಿಯಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಚೆನ್ನಯ್ಯ ಹಿರೇಮಠ್ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಬಸವರಾಜ್ ಕಟ್ಟಿ ಮುಖ್ಯ ಶಿಕ್ಷಕರಾದ ಶ್ರೀಮತಿ ಕಾಂಚನ ರಾಯ್ಕರ್ ಶಿಕ್ಷಕರಾದ ಶ್ರೀ ಚಂದ್ರಶೇಖರ್ ಕುಂಬಾರ ಶ್ರೀ ಈಶ್ವರ ಜವಳಿ ಸುಮಾ ರೇವಣಕರ್ ವಿಜಯಲಕ್ಷ್ಮಿ ಹಿರೇಮಠ ಬಿ ಜೆ ಪಠಾಣ್ ಸುಜಾತ ಸುನಗಾರ ಅತಿಥಿ ಶಿಕ್ಷಕರಾದ ಬಸಮ್ಮ ಛಬ್ಬಿ ಪ್ರ ಶಿಕ್ಷಣಾರ್ಥಿಗಳಾದ ಪವಿತ್ರ ಯಡಳ್ಳಿ ಅಗಸಿಮನಿ ಅಡುಗೆ ಸಹಾಯಕರು ಗ್ರಾಮದ ಹಿರಿಯರು ಯುವಕರು ಸರ್ವ ಶಿಕ್ಷಕರು ಹಾಗೂ ಸೇವಾದಳ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಮತ್ತು ಮಕ್ಕಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ವರದಿ : ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!