Ad imageAd image
- Advertisement -  - Advertisement -  - Advertisement - 

6 ಲಕ್ಷ ರೂ.ಪರಿಹಾರ : ಆದೇಶ ಪತ್ರ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Bharath Vaibhav
6 ಲಕ್ಷ ರೂ.ಪರಿಹಾರ : ಆದೇಶ ಪತ್ರ ನೀಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
WhatsApp Group Join Now
Telegram Group Join Now

ಬೆಳಗಾವಿ: -ವಿದ್ಯುತ್ ಪ್ರವಹಿಸಿ ಮೂವರು ಮೃತಪಟ್ಟಿದ್ದ ಶಾಹುನಗರದ ಕುಟುಂಬಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 6 ಲಕ್ಷ ರೂ. ಪರಿಹಾರ ಬಿಡುಗಡೆ ಮಾಡಿಸಿದ್ದಾರೆ.

ಕುಟುಂಬದ ಸದಸ್ಯರಿಗೆ ಮಂಗಳವಾರ ಸಚಿವರು ಹಣ ಬಿಡುಗಡೆಯಾದ ಆದೇಶ ಪತ್ರ ನೀಡಿದರು.ಬೆಳಗಾವಿಯ ಶಾಹುನಗರದಲ್ಲಿ ಕಳೆದ ವರ್ಷ ಮನೆಯಲ್ಲಿ‌ ನೀರು ಕಾಯಿಸುವ ಯಂತ್ರದಿಂದ ವಿದ್ಯುತ್ ಪ್ರವಹಿಸಿ ಮೂವರು ಮೃತಪಟ್ಟಿದ್ದರು.

ಈರಪ್ಪ ಗ ರಾಠೋಡ್, ಶಾಂತವ್ವ ಈ ರಾಠೋಡ್ ಹಾಗೂ ಅನ್ನಪೂರ್ಣ ಅ ರಾಠೋಡ್ ಸ್ಥಳದಲ್ಲಿಯೇ ಮೃತಪಟ್ಟ ಹಿನ್ನೆಲೆಯಲ್ಲಿ, ಮೃತರ ಕುಟುಂಬದವರು ಬಡವರಾಗಿರುವ ಕಾರಣ ಆ ಕುಟುಂಬದವರಿಗೆ ಸಚಿವರು ವಿಶೇಷ ಪ್ರಯತ್ನದ ಮೂಲಕ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ 6 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಿದ್ದಾರೆ.ಅವರಿಗೆ ಈ ಕುರಿತ ಆದೇಶ ಪತ್ರ ಹಸ್ತಾಂತರಿಸಲಾಯಿತು.

ವರದಿ :-ಪ್ರತೀಕ ಚಿಟಗಿ

WhatsApp Group Join Now
Telegram Group Join Now
Share This Article
error: Content is protected !!