
*ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ. ಎಚ್ ಸಿ ಮಹದೇವಪ್ಪನವರು ಹೆಚ್.ಡಿ.ತಾಲ್ಲೂಕಿನ ಮುಳ್ಳೂರಿನ ಬಳಿ ಹುಳಿ ದಾಳಿಯಿಂದ ಮೃತಪಟ್ಟ ಬೆಣ್ಣೆಗೆರೆ ಗ್ರಾಮದ ನಿವಾಸಿ ರಾಜಶೇಖರ್ ಅವರ ಮೃತದೇಹದ ಅಂತಿಮ ದರ್ಶನವನ್ನು ಕೆ.ಆರ್.ಆಸ್ಪತ್ರೆಯ ಶವಗಾರದಲ್ಲಿ ಅಂತಿಮ ದರ್ಶನ ಪಡೆದರು. ನಂತರ ಕುಟುಂಬದವರಿಗೆ ಸರ್ಕಾರದಿಂದ ಪರಿಹಾರವನ್ನು ಒದಗಿಸಿಕೊಡುವ ಭರವಸೆ ಕೊಟ್ಟರು ನಂತರ ಸಾಂತ್ವಾನ ಹೇಳಿದರು.
ಈ ವೇಳೆ ಸ್ಥಳದಲ್ಲಿದ್ದ ಪ್ರತಿಭಟನಾನಿರತ ರೈತಸಂಘದ ಸದಸ್ಯರ ಅಹವಾಲು ಆಲಿಸಿ, ಮಾನವ, ಪ್ರಾಣಿ ಸಂಘರ್ಷ ತಡೆಗಟ್ಟುವ ಬಗ್ಗೆ ಅಧಿಕಾರಿಗಳು ಹಾಗೂ ರೈತರ ಉಪಸ್ಥಿತಿಯಲ್ಲಿ ಉನ್ನತ ಮಟ್ಟದ ಸಭೆ ಕರೆದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ವರದಿ:ಆನಂದ್ ಕುಮಾರ್ ವಡಗೆರೆ




