Ad imageAd image

ರಾಜಗೋಪಾಲನಗರ ವಾರ್ಡಿನಲ್ಲಿ ವಿವಿಧ ಕಡೆ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿಗೆ ಚಾಲನೆ – ಶಾಸಕ ಎಸ್ ಮುನಿರಾಜು”

Bharath Vaibhav
ರಾಜಗೋಪಾಲನಗರ ವಾರ್ಡಿನಲ್ಲಿ ವಿವಿಧ ಕಡೆ ರಸ್ತೆಗಳಿಗೆ ಡಾಂಬರೀಕರಣ ಕಾಮಗಾರಿಗೆ ಚಾಲನೆ – ಶಾಸಕ ಎಸ್ ಮುನಿರಾಜು”
WhatsApp Group Join Now
Telegram Group Join Now

ಬೆಂಗಳೂರು: –ಪೀಣ್ಯ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ರಾಜಗೋಪಾಲ ನಗರ ವಾರ್ಡಿನ ದೊಡ್ಡಣ್ಣ ಕೈಗಾರಿಕಾ ಪ್ರದೇಶದ ಮತ್ತು ರಾಜಗೋಪಾಲನಗರದ ಕೆಲವು ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಶಾಸಕ ಎಸ್ ಮುನಿರಾಜು ಚಾಲನೆ ನೀಡಿದರು.ನಂತರ ಅವರು ಸಾರ್ವಜನಿಕರ ಹವಾಲುಗಳನ್ನು ಸ್ವೀಕರಿಸಿದರು ನಂತರ ಹಲಾಲುಗಳನ್ನು ಆಲಿಸಿದರು ತಮ್ಮ ಸಮಸ್ಯೆಗಳು ಆದಷ್ಟು ಶೀಘ್ರದಲ್ಲಿ ಬಗಿ ಹರಿಸುವುದಾಗಿ ಶಾಸಕ ಎಸ್ ಮುನಿರಾಜು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಪಾಲಿಕೆ ಸದಸ್ಯ ಹಾಗೂ ತೋಟಗಾರಿಕೆ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಎಚ್ ಎನ್ ಗಂಗಾಧರ್, ಮಾಜಿ ಪಾಲಿಕೆ ಸದಸ್ಯ ತಿಮ್ಮನಂಜಯ್ಯ, ರಾಜಗೋಪಾಲನಗರ ವಾರ್ಡಿನ ಬಿಜೆಪಿ ಅಧ್ಯಕ್ಷ ನರಸಿಂಹಮೂರ್ತಿ ಮಂಗಳ ವಾಟರ್, ಮಾಜಿ ಅಧ್ಯಕ್ಷರಾದ ನಾಗೇಶ್, ಹರೀಶ್, ಕೈಗಾರಿಕಾ ಉದ್ಯಮಿ ಬಿಜೆಪಿ ಮುಖಂಡ ದಿನೇಶ್, ಬಿಜೆಪಿ ಮುಖಂಡ ಮೋಹನ್ ಟಿವಿ ಶೋ ರೂಂ ಮಾಲೀಕ ಮೋಹನ್ ಕುಮಾರ್, ರಾಧಾಕೃಷ್ಣನ್ ಶೆಟ್ಟಿ, ರಾಮಚಂದ್ರಪ್ಪ, ಡಬಲ್ ರಾಮಣ್ಣ, ದೊಡ್ಡಣ್ಣ ಕೈಗಾರಿಕಾ ಪ್ರದೇಶ ಮತ್ತು ರಾಜಗೋಪಾಲನಗರದ ಸಮಸ್ತ ನಾಗರಿಕರು ಮಹಿಳೆಯರು ಕಾರ್ಯಕರ್ತರು ಮುಂತಾದವರು ಇದ್ದರು.

ವರದಿ:- ಅಯ್ಯಣ್ಣ ಮಾಸ್ಟರ್

 

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!