Ad imageAd image
- Advertisement -  - Advertisement -  - Advertisement - 

ಸೀತಾಳಗೇರಾ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ಹೇಳಿದ ಶಾಸಕ ಸಿದ್ದು ಪಾಟೀಲ

Bharath Vaibhav
ಸೀತಾಳಗೇರಾ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಧೈರ್ಯ ಹೇಳಿದ ಶಾಸಕ ಸಿದ್ದು ಪಾಟೀಲ
WhatsApp Group Join Now
Telegram Group Join Now

ಹುಮನಾಬಾದ :-ವಿಧಾನಸಭಾ ಮತಕ್ಷೇತ್ರದ ಸೀತಾಳಗೇರ ಗ್ರಾಮದಲ್ಲಿ ಶನಿವಾರ ಸಂಜೆ ಆರು ಗಂಟೆಗೆ ಭೂಮಿ ಕಂಪಿಸಿರುವ ಅನುಭವದ ಹಿನ್ನಲೆಯಲ್ಲಿ ಸೋಮುವಾರ ಕ್ಷೇತ್ರದ ಶಾಸಕರಾದ ಡಾ.ಸಿದ್ದಲಿಂಗಪ್ಪ ಪಾಟೀಲ ಸೀತಾಳಗೆರಾ ಗ್ರಾಮಕ್ಕೆ ಭೇಟಿ ನೀಡಿ ಜನರ ಜೊತೆ ಸಮಾಲೋಚನೆ ನಡೆಸಿ ಭೂಕಂಪನದಿಂದ ಆಗಿದ ಅನುಭವದ ಕುರಿತು ಮಾಹಿತಿ ಪಡೆದರು.

ಬಳಿಕ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರವಾಣಿ ಮೂಲಕ ಮಾತನಾಡಿ ಗ್ರಾಮದ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಹೇಳಿದರು.ಇನ್ನೂ ಗ್ರಾಮಸ್ದರು ಯಾವುದೇ ಆತಂಕಕ್ಕೆ ಒಳಗಾಗದೆ ಧೈರ್ಯವಾಗಿರಬೇಕು.ಇದು ನೈಸರ್ಗಿಕವಾಗಿ ಆಗುವಂತಹ ಘಟನೆಗಳಾಗಿವೆ.ಮುಂಜಾಗ್ರತ ಕ್ರಮವಾಗಿ ಸ್ವಲ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಈ ಸಂಧರ್ಬದಲ್ಲಿ ಉಪ ತಹಸಿಲ್ದಾರ ಹಾವಗೇರಾವ್ ಮುದ್ದಾ,ಕಂದಾಯ ನೀರಕ್ಷಕರಾದ ರಾಹುಲ್ ದೇವಪ್ರಸಾದ,ಪಿಡಿಒ ರಮೇಶ, ಮುಖಂಡರಾದ ಸಂತೋಷ ಪಾಟೀಲ, ಮಲ್ಲಿಕಾರ್ಜುನ ಪಾಟೀಲ,ವಿಶ್ವನಾಥ ಪಾಟೀಲ ಮಾಡಗುಳ ಸೇರಿದಂತೆ ಗ್ರಾಮಸ್ಧರು ಉಪಸ್ಥಿತರಿದ್ದರು.

ವರದಿ:-ಸಜೀಶ

WhatsApp Group Join Now
Telegram Group Join Now
Share This Article
error: Content is protected !!