Ad imageAd image

ಗಾಂಧಿ ಹತ್ಯೆಯಲ್ಲಿ ನೆಹರು ಪಾತ್ರವಿದೆ : ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ 

Bharath Vaibhav
ಗಾಂಧಿ ಹತ್ಯೆಯಲ್ಲಿ ನೆಹರು ಪಾತ್ರವಿದೆ : ಶಾಸಕ ಯತ್ನಾಳ್ ವಿವಾದಾತ್ಮಕ ಹೇಳಿಕೆ 
MLA yatnal
WhatsApp Group Join Now
Telegram Group Join Now

ಹುಬ್ಬಳ್ಳಿ: ಮಹಾತ್ಮಾ ಗಾಂಧಿ ಹತ್ಯೆಯಲ್ಲಿ ಜವಹರಲಾಲ್ ನೆಹರು ಪಾತ್ರವಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಈ ಕುರಿತು ನಗರದಲ್ಲಿ ಮಾತನಾಡಿದ ಶಾಸಕ ಯತ್ನಾಳ್ , ಗೋಡ್ಸೆ ಹೊಡೆದಿದ್ದು ಕೇವಲ ಒಂದು ಗುಂಡು ಮಾತ್ರ. ಆದರೆ ಉಳಿದ ಎರಡು ಗುಂಡುಗಳು ಯಾರವು..?ಆ ಎರಡು ಗುಂಡುಗಳನ್ನು ಹೊಡೆಸಿದ್ದು ಜವಹರಲಾಲ್ ನೆಹರು ಎಂದು ಹೇಳಿದರು.

ಕಾಂಗ್ರೆಸ್​ ಡಾ. ಬಿ.ಆರ್ ಅಂಬೇಡ್ಕರ್ ಗೆ ಸಾಕಷ್ಟು ಅಪಮಾನ ಮಾಡಿದೆ. ಈಗ ಕಾಂಗ್ರೆಸ್​ ಅಂಬೇಡ್ಕರ್ ಹೆಸರನಲ್ಲಿ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇವರಿಗೆ ಜೈ ಭೀಮ್​ ಎನ್ನುವ ಯಾವುದೇ ಅರ್ಹತೆ ಇಲ್ಲ ಎಂದರು.

ನನ್ನ ಮೇಲೆ ಮತ್ತು ಸಿಟಿ ರವಿಯನ್ನು ಟಾರ್ಗೆಟ್ ಮಾಡಿಕೊಂಡಿದ್ದಾರೆ. ಹಿಂದೂಗಳ ಬಗ್ಗೆ ನಾವು ಮಾತನಾಡಿದರೆ ಕೇಸ್​ ಹಾಕುತ್ತಾರೆ. ಆದರೆ ವಿಜಯೇಂದ್ರನ ಮೇಲೆ ಮಾತ್ರ ಕೇಸ್​ ಹಾಕಲ್ಲ. ಹಿಂದೂಗಳ ಭಾವನೆ ಕೇರಳಿಸಿ, ರಾಜ್ಯದಲ್ಲಿ ದಂಗೆ ಏಳಿಸಲು ಕಾಂಗ್ರೆಸ್ ಪ್ರಯತ್ನ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದರು.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!