Ad imageAd image

ಭೈರಪ್ಪನಹಳ್ಳಿ ರಸ್ತೆಗೆ ₹1.5 ಕೋಟಿ ಚಾಲನೆ ಹೆಲ್ಮೆಟ್, ವಿಮೆ ಕಡ್ಡಾಯಕ್ಕೆ ಶಾಸಕರ ಕರೆ

Bharath Vaibhav
ಭೈರಪ್ಪನಹಳ್ಳಿ ರಸ್ತೆಗೆ ₹1.5 ಕೋಟಿ ಚಾಲನೆ ಹೆಲ್ಮೆಟ್, ವಿಮೆ ಕಡ್ಡಾಯಕ್ಕೆ ಶಾಸಕರ ಕರೆ
WhatsApp Group Join Now
Telegram Group Join Now

ಚೇಳೂರು : ತಾಲ್ಲೂಕಿನ ಭೈರಪ್ಪನಹಳ್ಳಿ ಗ್ರಾಮದಲ್ಲಿ ಶನಿವಾರ ಶಾಸಕ ಎಸ್.ಎನ್. ಸುಬ್ಬಾರೆಡ್ಡಿ ಅವರು ಸುಮಾರು ₹1.5 ಕೋಟಿ ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.

₹60 ಲಕ್ಷ, ₹40 ಲಕ್ಷ ಹಾಗೂ ₹40 ಲಕ್ಷ ಸೇರಿದಂತೆ ಒಟ್ಟು ಒಂದೂವರೆ ಕೋಟಿ ಅನುದಾನದಲ್ಲಿ ಪುಲಗಲ್ ಕ್ರಾಸ್‌ನಿಂದ ಭೈರಪ್ಪನಹಳ್ಳಿ ಮತ್ತು ದರವಾರಪಲ್ಲಿ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ಶಾಸಕರು ತಿಳಿಸಿದರು.

ಇದೇ ವೇಳೆ ಮಾತನಾಡಿದ ಶಾಸಕರು, ವಾಹನ ಸವಾರರು ಕಡ್ಡಾಯವಾಗಿ ಐಎಸ್‌ಐ ಮಾರ್ಕ್ ಹೆಲ್ಮೆಟ್ ಧರಿಸಿ ಪ್ರಾಣ ರಕ್ಷಿಸಿಕೊಳ್ಳಬೇಕು ಮತ್ತು ವಾಹನಗಳಿಗೆ ವಿಮೆ ಮಾಡಿಸುವ ಮೂಲಕ ಕುಟುಂಬಕ್ಕೆ ಆರ್ಥಿಕ ಭದ್ರತೆ ಒದಗಿಸಬೇಕು ಎಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ತಹಸೀಲ್ದಾರ್ ಶ್ವೇತ ಬಿ.ಕೆ., ಆರ್.ಐ ಈಶ್ವರ್, ಶಿರಸ್ತೆದಾರ್ ಸತೀಶ್, ಸುರೇಂದ್ರ, ಜಾಲಾರಿ, ಸಹದೇವರೆಡ್ಡಿ, HV ನಾರಾಯಣಸ್ವಾಮಿ,ಜಿಲ್ಲಾ ಸಂಚಾಲಕ ಕಡ್ಡಿಲು ವೆಂಕಟರವಣಪ್ಪ, ಪಿಎಸ್ಐ ಹರೀಶ್ ಸೇರಿದಂತೆ ಹಲವು ಅಧಿಕಾರಿಗಳು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ : ಯಾರಬ್. ಎಂ.

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!