ಚಿಂಚೋಳಿ : ಪಟ್ಟಣದ ಪೂಲ್ಕಪಳ್ಳಿ ಗ್ರಾಮದ ಸಾಲು ಮರ ತಿಮ್ಮಕ್ಕ ಉದ್ಯಾನವನಕ್ಕೆ ಡಾ. ಅವಿನಾಶ ಜಾಧವ್ ಶಾಸಕ ಚಿಂಚೋಳಿ ರವರು ಬೇಟಿ ನೀಡಿದರು ಉದ್ಯಾನವನದಲ್ಲಿ ಅನೇಕ ಜಾತಿಯ ಸಸ್ಯಗಳನ್ನು ಹಾಗೂ ಮರಗಳು ಹಾಗೂ 50 ವಿವಿಧ ಜಾತಿಯ ಗಿಡಮೂಲಿಕೆಗಳು ಹಾಗೂ ಅನೇಕ ಜಾತಿಯ ಪುಷ್ಪವನಗಳು ಬೆಳೆಸುತ್ತಿದ್ದಾರೆ ಹಾಗೂ ಉದ್ಯಾನವನಕ್ಕೆ ಇನ್ನೂ ಕೂಡ ಹೆಚ್ಚಿನ ಅನುದಾನವನ್ನು ನೀಡಬೇಕಾಗಿದೆ ಎಂದು ಶಾಸಕರಿಗೆ ಮನವಿ ಮಾಡಿಕೊಂಡಿದ್ದರು. ಉದ್ಯಾನವನಕ್ಕೆ ಸುಮಾರು ಎರಡು ಕೋಟಿ 19 ಲಕ್ಷ ವರೆಗೆ ಅನುದಾನವನ್ನು ಖರ್ಚು ಮಾಡಲಾಗಿದೆ ಎಂದು ವಲಯ ಅರಣ್ಯ ಅಧಿಕಾರಿಗಳಾದ ಜಗನ್ನಾಥ ಕೊರಳ್ಳಿ ಹೇಳಿದ್ದರು ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಗೋಪಾಲರಾವ ಕಟ್ಟಿಮನಿ. ಕೆ.ಎಮ್.ಬಾರಿ. ಶ್ರೀಮಂತ ಕಟ್ಟಿಮನಿ. ಭೀಮಶಟ್ಟಿ ಮುರುಡ. ಗಿರಿರಾಜ್ ನಾಟಿಕರ್. ಅಮರ್ ಲೋಡ್ನೂರ್. ಅಶೋಕ್ ಚವ್ಹಾಣ. ರಾಜು ಪವಾರ್. ಲೋಕೇಶ್ ಶಳಗಿ. ವೀರೇಶ್ ಯಂಪಳ್ಳಿ. ಶ್ರೀನಿವಾಸ್ ಗುತ್ತೇದಾರ್ ರಾಜು ಯಲ್ಕಪಳ್ಳಿ.

ವರದಿ : ಸುನಿಲ್ ಸಲಗರ




