ಸಿಂಧನೂರು : ಫೆ,೨೨ ರಂದು ನಗರದ ಕಾರುಣ್ಯ ಆಶ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ವಿ -ಒನ್ ರೆಸ್ಟೋರೆಂಟ್ ಸಿಂಧನೂರು ಇವರುಗಳ ಸಂಯೋಗದಲ್ಲಿ ಎಂಎಲ್ಸಿ ಬಸನಗೌಡ ಬಾದರ್ಲಿ ಅವರ ೪೨ ನೇ ವರ್ಷದ ಹುಟ್ಟುಹಬ್ಬವನ್ನು ಕಾರುಣ್ಯ ಆಶ್ರಮದ ವೃದ್ಧ ಹಾಗೂ ಬುದ್ಧಿಮಾಂದ್ಯರ ಸಮ್ಮುಖದಲ್ಲಿ ಆಚರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ನೂತನವಾಗಿ ಆಯ್ಕೆಯಾದ ಯುವ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಯಾಸೂಪ್ ಎತ್ಮರಿ, ಹನುಮಂತ ಕರ್ನಿ, ಶಾಹಬಾಜ, ಶಮಿದ್ ಗುಂಜಳ್ಳಿ, ಇವರುಗಳನ್ನು ಕಾರುಣ್ಯ ಆಶ್ರಮದ ಕರುಣಾಮಯಿ ಡಾ. ಚನ್ನಬಸವ ಸ್ವಾಮಿ ಹಿರೇಮಠ ಇವರಿಂದ ಸನ್ಮಾನಿಸಲಾಯಿತು.
ಈ ವೇಳೆ ಉಪಸ್ಥಿತಿ ಇದ್ದವರು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವಕುಮಾರ್ ಜವಳಿ, ವೆಂಕಟೇಶ್ ನಾಯಕ್ ರಾಗಲಪರ್ವಿ, ಅಂಬರೀಷ್ ಗಿರಿಜಾಲಿ, ವೀರೇಶ್ ಉಪಲದಡ್ಡಿ, ಖಾಜಾ ಸಾಬ್ ರೌಡುಕುಂದ, ಆಲಂಭಾಷ್ ಬೂದಿಹಾಳ, ವೆಂಕಟ್ ರೆಡ್ಡಿ, ಭಾಷಾ ಸಾಬ್ ಬಳಗನೂರು, ಹಂಪಮ್ಮ ವಲ್ಕಂದಿನ್ನಿ, ವೆಂಕನಗೌಡ ಗಿಣಿವರ್, ರಮೇಶ್ ಬಸಾಪುರ, ಪಕೀರಮ್ಮ ರಾಮತ್ನಾಳ, ಪ್ರಶಾಂತ್ ರೆಡ್ಡಿ, ಪ್ರಶಾಂತ್ ನಾಯಕ, ಅಶೋಕ್ ನಲ್ಲ, ಇದ್ದರು
ವರದಿ : ಬಸವರಾಜ ಬುಕ್ಕನಹಟ್ಟಿ




