Ad imageAd image

ಮೋದಿ ಗುಜರಾತ್ ನ ಅವಿದ್ಯಾವಂತರನ್ನ ಮರಳು ಮಾಡಬಹುದು, ಕೇರಳದವರನ್ನಲ್ಲ : ಖರ್ಗೆ

Bharath Vaibhav
ಮೋದಿ ಗುಜರಾತ್ ನ ಅವಿದ್ಯಾವಂತರನ್ನ ಮರಳು ಮಾಡಬಹುದು, ಕೇರಳದವರನ್ನಲ್ಲ : ಖರ್ಗೆ
mallikarjun kharge
WhatsApp Group Join Now
Telegram Group Join Now

ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ವಾಗ್ದಾಳಿ ನಡೆಸುವ ಭರದಲ್ಲಿ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆಯೊಂದು ಈಗ ರಾಜಕೀಯ ಕಿಚ್ಚು ಹಚ್ಚಿದೆ. ಗುಜರಾತ್ ಮತ್ತು ಕೇರಳದ ಜನರ ಸಾಕ್ಷರತೆಯನ್ನು ಹೋಲಿಸಿ ಅವರು ಮಾಡಿದ ಕಾಮೆಂಟ್ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.

​ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಖರ್ಗೆ ಅವರು, ಪ್ರಧಾನಿ ಮೋದಿಯವರ ಚುನಾವಣಾ ತಂತ್ರಗಳು ಎಲ್ಲ ರಾಜ್ಯಗಳಲ್ಲಿ ಕೆಲಸ ಮಾಡುವುದಿಲ್ಲ ಎಂಬ ಅರ್ಥದಲ್ಲಿ ಮಾತನಾಡುತ್ತಾ :​”ಪ್ರಧಾನಿ ಮೋದಿ ಅವರು ಗುಜರಾತ್‌ನಂತಹ ರಾಜ್ಯಗಳಲ್ಲಿರುವ ಅವಿದ್ಯಾವಂತ ಜನರನ್ನು ಸುಲಭವಾಗಿ ಮರುಳು ಮಾಡಬಹುದು.

ಆದರೆ ಹೆಚ್ಚು ಸಾಕ್ಷರತೆ ಹೊಂದಿರುವ ಮತ್ತು ಬುದ್ಧಿವಂತರೇ ತುಂಬಿರುವ ಕೇರಳದ ಜನರ ಮುಂದೆ ಅವರ ಆಟ ನಡೆಯುವುದಿಲ್ಲ. ಕೇರಳದವರು ವಿಷಯಗಳನ್ನು ವಿಶ್ಲೇಷಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೆ.” ಎಂದಿದ್ದಾರೆ.

​ಬಿಜೆಪಿಯ ತಿರುಗೇಟು: ‘ವಿಭಜಕ ರಾಜಕಾರಣ’

​ಖರ್ಗೆ ಅವರ ಈ ಹೇಳಿಕೆಗೆ ತೀವ್ರ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕರು, ಇದು ಕಾಂಗ್ರೆಸ್ ಪಕ್ಷದ “ಒಡೆದು ಆಳುವ ನೀತಿ” ಮತ್ತು “ಉತ್ತರ-ದಕ್ಷಿಣ ಭಾರತದ ನಡುವೆ ಕಂದಕ ಸೃಷ್ಟಿಸುವ ಸಂಚು” ಎಂದು ಟೀಕಿಸಿದ್ದಾರೆ.

WhatsApp Group Join Now
Telegram Group Join Now
- Advertisement -  - Advertisement -  https://www.youtube.com/@BVNEWS5/videos
Share This Article
error: Content is protected !!