Ad imageAd image

ಮೋದಿ ಹೇಳಿದ್ರೆ ಇಂದೇ ಪಾಕಿಸ್ತಾನಕ್ಕೆ ಸೂಸೈಡ್‌ ಬಾಂಬ್‌ ಹಾಕೊಂಡು ಹೋಗೋಕೆ ಸಿದ್ಧ : ಜಮೀರ್ ಅಹ್ಮದ್ ಖಾನ್

Bharath Vaibhav
ಮೋದಿ ಹೇಳಿದ್ರೆ ಇಂದೇ ಪಾಕಿಸ್ತಾನಕ್ಕೆ ಸೂಸೈಡ್‌ ಬಾಂಬ್‌ ಹಾಕೊಂಡು ಹೋಗೋಕೆ ಸಿದ್ಧ : ಜಮೀರ್ ಅಹ್ಮದ್ ಖಾನ್
WhatsApp Group Join Now
Telegram Group Join Now
ಕಲಬುರ್ಗಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಪರಿಸ್ಥಿತಿ ಉದ್ವಿಗ್ನ ವಾಗಿದ್ದು, ಈಗಾಗಲೇ ಭಾರತ ಪಾಕಿಸ್ತಾನಕ್ಕೆ ಆಪರೇಷನ್ ಸಿಂಧೂರ್ ಮೂಲಕ ತಿರುಗೇಟು ನೀಡಿದ. ಅಲ್ಲದ ಈಗಾಗಲೇ ನೂರಕ್ಕೂ ಹೆಚ್ಚು ಉಗ್ರರು ಸಾವನಪ್ಪಿದ್ದು ಭಾರತಕ್ಕೆ ಬೇಕಾಗಿದ್ದ ಐವರು ಮೋಸ್ಟ್ ವಾಂಟೆಡ್ ಉಗ್ರರನ್ನು ಸಹ ಆಪರೇಷನ್ ಸಿಂಧೂರ ದಾಳಿಯಲ್ಲಿ ಭಾರತೀಯ ಸೇನೆ ಹತ್ಯೆಗೈದಿದೆ.
ಇನ್ನು ನರೇಂದ್ರ ಮೋದಿ ಹೇಳಿದರೆ ಪಾಕಿಸ್ತಾನಕ್ಕೆ ಸುಯಿಸೈಡ್ ಬಾಂಬ್ ಹಾಕೊಂಡು ಹೋಗಲು ಸಿದ್ಧ ಎಂದು ಸಚಿವ ಜಮೀರ್ ಅಹ್ಮದ್‌ ಮತ್ತೊಮ್ಮೆ ಪುನರುಚ್ಚಿಸಿದ್ದಾರೆ.
ಕಲ್ಬುರ್ಗಿಯಲ್ಲಿ ವಕ್ಷ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕ ನೀಡಿದ್ದು, ಆಪರೇಷನ್ ಸಿಂಧೂ‌ ಯಶಸ್ವಿಗಾಗಿ ನಿನ್ನ ಪ್ರಾರ್ಥನೆ ಮಾಡಿದ್ದೇವೆ. ಪಾಕಿಸ್ತಾನದ ವಿರುದ್ಧ ಭಾರತ ಸರ್ಕಾರ ಉತ್ತಮ ನಿರ್ಧಾರ ಕೈಗೊಂಡಿದೆ. ನನ್ನ ದೇಶಕ್ಕಾಗಿ ಏನು ಬೇಕಾದರೂ ಮಾಡಲು ನಾನು ಸಿದ್ಧನಿದ್ದೇನೆ ಎಂದು ಕಲಬುರ್ಗಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದರು.
ಪ್ರಧಾನಿ ನರೇಂದ್ರ ಮೋದಿಯವರು ಹೇಳಿದರೆ ತಕ್ಷಣ ಸುಸೈಡ್ ಬಾಂಬ್ ಹಾಕಿಕೊಂಡು ಪಾಕಿಸ್ತಾನಕ್ಕೆ ಹೋಗಲು ನಾನು ಸಿದ್ಧನಿದ್ದೇನೆ. ಪಾಕಿಸ್ತಾನ ಒಂದು ಖಾಲಿ ಡಬ್ಬ ಇದ್ದಂತೆ ಹೊಸ ಪಟಾಕಿ ಅಂತಿದೆ ನಾವು ಮನಸ್ಸು ಮಾಡಿದರೆ ಎರಡೇ ದಿನಕ್ಕೆ ಪಾಕಿಸ್ತಾನವನ್ನು ನಿರ್ನಾಮ ಮಾಡಬಹುದು ಎಂದು ಕಲ್ಬುರ್ಗಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿಕೆ ನೀಡಿದರು.
WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!