Ad imageAd image

ಮುಗಳಖೋಡದ ಜಿಡಗಾ ಮಠಕ್ಕೆ ಸಂಸದ ಅಣ್ಣಾಸಾಹೇಬ್ ಜೊಲ್ಲೆ ಇವರ ಭೇಟಿ

Bharath Vaibhav
WhatsApp Group Join Now
Telegram Group Join Now

ರಾಯಬಾಗ್ : ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಯವರು ಭೇಟಿ ನೀಡಿ,ಶ್ರೀ ಯಲ್ಲಾಲಿಂಗೇಶ್ವರ ಮಹಾಪ್ರಭುಗಳ ಗದ್ದುಗೆಯ ಆಶೀರ್ವಾದ ಪಡೆದು ಬಳಿಕ ಷಡಕ್ಷರಿ ಶಿವಯೋಗಿ ಡಾ. ಮುರುಘರಾಜೇಂದ್ರ ಮಹಾಸ್ವಾಮಿಜಿ ಅವರ ದಿವ್ಯಾಶ್ರೀವಾದ ಪಡೆದು, ಸತ್ಕಾರ ಸ್ವೀಕರಿಸಲಾಯಿತು.

ಹಸಿದ ಭಕ್ತರಿಗೆ ಅನ್ನಪೂರ್ಣೇಶ್ವರಿಯಾಗಿ, ವಿದ್ಯೆಯನ್ನು ಬಯಸಿ ಬಂದವರಿಗೆ ಸರಸ್ವತಿಯಾಗಿ, ನೊಂದು-ಬೆಂದು ಬಂದವರಿಗೆ ತಾಯಿಯಾಗಿ ಅನುಗ್ರಹಿಸಿದ ಯಲ್ಲಾಲಿಂಗ ಮಹಾಪ್ರಭುಗಳ ಪರಂಪರೆಯಲ್ಲಿ ಮುರುಘರಾಜೇಂದ್ರ ಮಹಾಸ್ವಾಮೀಜಿಗಳು ನಡೆಯುತ್ತಿದ್ದು, ಶ್ರೀಗಳ ಸೇವಾಕಾರ್ಯ ನಮಗೆ ಸ್ಫೂರ್ತಿದಾಯಕ ಎಂದರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಜಗದೀಶ ಶೆಟ್ಟರ ಜಿ, ಮಾಜಿ ಶಾಸಕರಾದ ಶ್ರೀ ಪಿ.
ರಾಜೀವ್, ಶ್ರೀ ಸಂಕಲ್ಪ ಶೆಟ್ಟರ, ಸೌ.ಶ್ರದ್ದಾ ಶೆಟ್ಟರ ಇತರೆ ಗಣ್ಯರು ಉಪಸ್ಥಿತರಿದ್ದರು.

ವರದಿ : ರಾಜು ಮುಂಡೆ

WhatsApp Group Join Now
Telegram Group Join Now
Share This Article
error: Content is protected !!