ವಿಜಯಪುರ : ಮುಸ್ಲಿಂ ಯುವತಿಯರನ್ನು ಮದುವೆಯಾದರೆ 5 ಲಕ್ಷ ಬಹುಮಾನ ನೀಡಲಾಗುತ್ತೆ ಎಂದು ಹಿಂದೂ ಯುವಕರಿಗೆ ವಿಜಯಪುರ ಶಾಸಕ ಯತ್ನಲ್ ಕರೆ ನೀಡಿದ ವಿಚಾರವಾಗಿ, ಇದೀಗ ವಿಜಯಪುರದಲ್ಲಿ ಮುಸ್ಲಿಂ ಮುಖಂಡ ಮತ್ತು ವಕೀಲ ಎಸ್ ಎಸ್ ಖಾದ್ರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಯತ್ನಾಳ್ ತನ್ನ ಪತ್ನಿಯನ್ನು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡಿಸಲಿ ಕಾನೂನು ಬದ್ಧವಾಗಿ ತನ್ನ ಪತ್ನಿಯನ್ನು ವಿವಾಹ ಮಾಡಿಸಿದರೆ ಯಾವುದೇ ಚುನಾವಣೆಯಲ್ಲಿ ಯತ್ನಾಳ ವಿರುದ್ಧ ಮುಸ್ಲಿಮರು ಸ್ಪರ್ಧಿಸಲ್ಲ ಎಂದು ವಿಜಯಪುರದಲ್ಲಿ ಮುಸ್ಲಿಂ ಮುಖಂಡ ಎಸ್ ಎಸ್ ಖಾದ್ರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.




