Ad imageAd image

ಮಗಳ ಸಾವಿನ ದು:ಖವನ್ನು ಮರೆಸಿ ನನ್ನ ಬದುಕಿಸಿದ್ದು ಸಂಗೀತ: ಕೆ.ಎಸ್. ಚಿತ್ರಾ

Bharath Vaibhav
ಮಗಳ ಸಾವಿನ ದು:ಖವನ್ನು ಮರೆಸಿ ನನ್ನ ಬದುಕಿಸಿದ್ದು ಸಂಗೀತ: ಕೆ.ಎಸ್. ಚಿತ್ರಾ
WhatsApp Group Join Now
Telegram Group Join Now

ಖ್ಯಾತ ಗಾಯಕಿ ಕೆ.ಎಸ್. ಚಿತ್ರಾ ಅವರ ಹಾಡುಗಾರಿಕೆಯನ್ನು ಯಾರು ಕೇಳಿಲ್ಲ ಹೇಳಿ? ಅವರ ಮಂತ್ರ ಮುಗ್ದವಾಗಿಸುವ ಹಾಡುಗಾರಿಕೆಗೆ ಮನಸೋಲದವರಿಲ್ಲ. ತೆಲಗು ತಮಿಳು, ಕನ್ನಡ ಸೇರಿ ವಿವಿಧ ಭಾಷೆಗಳಲ್ಲಿ ಹಾಡಿರುವ ಅವರು ಕನ್ನಡಲ್ಲಿಯೂ ಹಾಡಿದ್ದಾರೆ.

ಕನ್ನಡದಲ್ಲಿ ಬೆಳ್ಳಿ ಕಾಲುಂಗುರ (1992) ಚಿತ್ರದ ಕೇಳಿಸದೆ ಕಲ್ಲು ಕಲ್ಲಿನಲಿ, ಅಮೃತವರ್ಷಿಣಿ (1997) ಚಿತ್ರದ ತುಂತುರು ಅಲ್ಲಿ ನೀರ ಹಾಡ, ಗಾಳಿಪಟ (2008) ದ ನದೀಮ್ ದೀಮ್ ಥನಾ ಮುಂತಾದ ಅವರ ಹಿನ್ನೆಲೆ ಸಂಗೀತ ಹಿಟ್ ಆಗಿದ್ದು, ಕನ್ನಡ ಭಾಷಿಕರಿಗೆ ಬಹಳ ಅಚ್ಚುಮೆಚ್ಚು ಮತ್ತು ಚಿರಪರಿಚಿತ. ಅವರು ಕನ್ನಡದವರಲ್ಲ ಎಂದರೆ ಹಲವರಿಗೆ ಅಚ್ಚರಿಯಾಗಬಹುದು.

ಇಂದು ಶನಿವಾರ ಅವರ ಕಚೇರಿ ಬೆಂಗಳೂರಿನಲ್ಲಿದ್ದು, ಈ ಸಂದರ್ಭದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ್ದಾರೆ. ಅವರು ಮಾತನಾಡದ ಭಾಷೆಗಳಲ್ಲಿನ ಹಾಡುಗಳ ಭಾವನಾತ್ಮಕ ಸಾರವನ್ನು ಸೆರೆಹಿಡಿದು ಹಾಡುವುದು ಹೇಗೆ ಎಂದು ಕೇಳಿದಾಗ, ಹಾಡಿನ ಸಾಹಿತ್ಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳುವುದು ಎನ್ನುತ್ತಾರೆ.

ನಾನು ಸಂಗೀತ ಸಂಯೋಜಕರು/ನಿರ್ದೇಶಕರನ್ನು ಹಾಡಿನ ಪರಿಸ್ಥಿತಿ, ಕೆಲವು ಪದಗಳ ಅರ್ಥವನ್ನು ಕೇಳುತ್ತೇನೆ, ಹಾಡಿನ ಸಂದರ್ಭ, ಪರಿಸ್ಥಿತಿ ಮತ್ತು ಅದನ್ನು ಹೇಗೆ ಚಿತ್ರೀಕರಣ ಮಾಡಲಿದ್ದಾರೆ ಎಂದು ನನಗೆ ಹೇಳುತ್ತಾರೆ. ಇದರಿಂದ ಹಾಡಿನ ಸಾಲುಗಳನ್ನು ಅರ್ಥ ಮಾಡಿಕೊಂಡು ಭಾವನೆ ನೀಡಿ ಸಾಧ್ಯವಾದಷ್ಟು ಹೊಂದಿಕೊಳ್ಳಲು ಪ್ರಯತ್ನಿಸುತ್ತೇನೆ ಎಂದರು.

ಪದ್ಮಭೂಷಣ, ಪದ್ಮಶ್ರೀ, ಆರು ರಾಷ್ಟ್ರೀಯ ಪ್ರಶಸ್ತಿಗಳು ಮತ್ತು ಇನ್ನೂ ಹಲವು ಪ್ರಶಸ್ತಿಗಳನ್ನು ಗಳಿಸಿರುವ ಚಿತ್ರಾ ಸಂಗೀತ ಕಚೇರಿಗಳನ್ನು ನಡೆಸುತ್ತಾರೆ. ಸ್ಪಾಟಿಫೈನಲ್ಲಿ ಮಾಸಿಕ ಸುಮಾರು 1.3 ಕೋಟಿ ಕೇಳುಗರ ಸಂಖ್ಯೆಯನ್ನು ಹೊಂದಿದ್ದಾರೆ.

ಅಂದು ನನ್ನ ಜೀವನದ ಬಹಳ ದುಃಖದ ದಿನ

2011 ರಲ್ಲಿ ನನ್ನ ಜೀವನದ ಅತ್ಯಂತ ವಿನಾಶಕಾರಿ ಘಟನೆ ನಡೆದಾಗ ಸಂಗೀತವೇ ನನ್ನ ದುಃಖವನ್ನು ಮರೆಯಲು ಸಹಾಯ ಮಾಡಿದ್ದು, 2011ರಲ್ಲಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ ಅವರ 8 ವರ್ಷದ ಮಗಳು ಮೃತಪಟ್ಟಿದ್ದರು. “ನನ್ನ ಮಗಳನ್ನು ಕಳೆದುಕೊಂಡಾಗ, ಜೀವನದಲ್ಲಿ ದೊಡ್ಡ ಹೊಡೆತ ಉಂಟಾಯಿತು. ಅಂತಹ ದುಃಖದ ಗಳಿಗೆಯಿಂದ ನನ್ನನ್ನು ಹೊರತಂದು ಎತ್ತಿದ್ದು ಸಂಗೀತವೇ. ಅದು ನನ್ನ ಪ್ರೇರಕ ಶಕ್ತಿ ಎನ್ನುತ್ತಾರೆ.

ಸಂಗೀತ ಕಚೇರಿ ಕೊಡುವಾಸೆ

ಇಷ್ಟೆಲ್ಲಾ ಸಾಧನೆ ಮಾಡಿದ ನಂತರ, ಶಾಸ್ತ್ರೀಯವಾಗಿ ಸಂಗೀತ ತರಬೇತಿ ಪಡೆದ 61 ವರ್ಷದ ಗಾಯಕಿ ಚಿತ್ರಾ ಇನ್ನೂ ಅನ್ವೇಷಿಸದ ಒಂದು ಮಹತ್ವಾಕಾಂಕ್ಷೆಯನ್ನು ಹೊಂದಿದ್ದಾರೆ: ಕರ್ನಾಟಕ ಸಂಗೀತ ಕಚೇರಿಯನ್ನು ಜನರ ಮುಂದೆ ಪ್ರದರ್ಶಿಸುವುದು. ನಾನು ಕರ್ನಾಟಕ ಸಂಗೀತವನ್ನು ಕಲಿತಿದ್ದೇನೆ, ಆದರೆ ನಾನು ಕಲಿತದ್ದೆಲ್ಲವೂ ಸಂಗೀತ ಕಚೇರಿಯನ್ನು ಮಾಡಲು ಸಾಕಾಗುವುದಿಲ್ಲ ಎಂಬ ಭಾವನೆ ನನಗಿದ್ದ ಕಾರಣ ಕರ್ನಾಟಕ ಸಂಗೀತ ಕಚೇರಿ ನಡೆಸುವ ಧೈರ್ಯ ಇರಲಿಲ್ಲ. ನಾನು ಇನ್ನೂ ಹೆಚ್ಚಿನದನ್ನು ಮಾಡಲು ಬಯಸಿದ್ದೆ, ಆದರೆ ಚಿತ್ರರಂಗದಲ್ಲಿ ಹಾಡುಗಳಲ್ಲಿ ಬ್ಯುಸಿಯಿದ್ದ ಕಾರಣ ಶಾಸ್ತ್ರೀಯ ಸಂಗೀತ ಕಡೆಗೆ ಗಮನ ಹರಿಸಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಗುರುವಿನೊಂದಿಗೆ ಕಲಿಯಲು ನನಗೆ ಸಮಯ ಸಿಗಲಿಲ್ಲ. ಅದು ಇನ್ನೂ ಬಾಕಿ ಇದೆ, ಅದನ್ನು ಮಾಡಬೇಕಾಗಿದೆ ಎನ್ನುತ್ತಾರೆ.

WhatsApp Group Join Now
Telegram Group Join Now
Share This Article
error: Content is protected !!