Ad imageAd image

ಮೈಲಾರ ರೆಡ್ಡಿಯವರ 46ನೇ ಹುಟ್ದಬ್ಬದಾಚರಣೆ

Bharath Vaibhav
ಮೈಲಾರ ರೆಡ್ಡಿಯವರ 46ನೇ ಹುಟ್ದಬ್ಬದಾಚರಣೆ
WhatsApp Group Join Now
Telegram Group Join Now

ಪಾವಗಡ : ತುಮಕೂರು ಜಿಲ್ಲೆ ಪಾವಗಡ ತಾಲ್ಲೂಕಿನ ಗೊಲ್ಲ ಸಮುದಾಯದ ಪ್ರಭಾವಿ ನಾಯಕರು, ಜನಹಿತದ ಧ್ಯೇಯದೊಂದಿಗೆ ಬದುಕು ನಡೆಸುತ್ತಿರುವ, ಮಾಜಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮೈಲಾರ ರೆಡ್ಡಿಯವರು ತಮ್ಮ 46ನೇ ಜನ್ಮದಿನವನ್ನು ಮಂಗಳವಾರ ಅಭಿಮಾನ ಪೂರ್ವಕವಾಗಿ ಪಟ್ಟಣದ ತಮ್ಮ ನಿವಾಸದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ಆಚರಿಸಿದರು.

ಈ ವಿಶೇಷ ದಿನದ ಅಂಗವಾಗಿ ಮೈಲಾರ ರೆಡ್ಡಿ ಅಭಿಮಾನಿ ಬಳಗ”ದವರು ಪ್ರೀತಿಯಿಂದ ಸಿಹಿ ಹಂಚಿ, ತಮ್ಮ ನಾಯಕನಿಗೆ ಗೌರವ ಸಲ್ಲಿಸಿದರು. ಸ್ನೇಹಜೀವಿ, ಸರಳ ಸ್ವಭಾವಿ, ಶಿಸ್ತುಬದ್ಧ ನಡವಳಿಕೆಯ ಮೂಲಕ ಜನರ ಮನ ಗೆದ್ದಿರುವ ಮೈಲಾರ ರೆಡ್ಡಿಯವರು, ಈ ಹೊತ್ತಿಗೆ ತಾಲ್ಲೂಕಿನ ಯುವಜನತೆಯ ನೈಜ ಪ್ರೇರಣೆಯಾಗಿದ್ದಾರೆ.

ಕಾರ್ಯಕ್ರಮದ ಸಂದರ್ಭದಲ್ಲಿ ಮೈಲಾರ ರೆಡ್ಡಿಯವರು ಮಾತನಾಡುತ್ತಾ, “ನನ್ನನ್ನು ನೆನೆಯುವ ಪ್ರೀತಿ ತುಂಬಿದ ಹೃದಯಗಳು ನನ್ನ ಪಕ್ಕದಲ್ಲಿದ್ದರೆ, ಈ ಜನ್ಮ ಸಾರ್ಥಕವಾಗಿದೆ. ನನ್ನ ಮೇಲೆ ಅಪಾರ ವಿಶ್ವಾಸವಿಟ್ಟ ಎಲ್ಲಾ ಹಿತೈಷಿಗಳಿಗೆ ಹೃತ್ಪೂರ್ವಕ ಧನ್ಯವಾದಗಳು,” ಎಂದರು.

ಈ ಕ್ಷಣದಲ್ಲಿ ಯೋಗೇಶ್ ಗುಂಡಾರ್ಲಹಳ್ಳಿ, ಭರತ್ ಯಾದವ್, ಪಾಂಡು ಯಾದವ್, ನವೀನ್ ಕಿಲಾರ್ಲಹಳ್ಳಿ, ನಾಗರಾಜು ದೇವರಹಟ್ಟಿ, ದಿವ್ಯ ತೇಜ್ ಯಾದವ್, ಚಂದ್ರಮೌಳಿ, ಗೋಪಾಲ್ ಕೃಷ್ಣ, ಹನುಮಂತು, ಉಮೇಶ್, ಕೃಷಿ ಇಲಾಖೆಯ ಈರಣ್ಣ ಕೃಷ್ಣಗಿರಿ, ಸೇರಿದಂತೆ ಅನೇಕ ಹೃದಯದ ಅಭಿಮಾನಿಗಳು ಉಪಸ್ಥಿತರಿದ್ದರು.

ವರದಿ : ಶಿವಾನಂದ ಪಾವಗಡ

WhatsApp Group Join Now
Telegram Group Join Now
Share This Article
error: Content is protected !!