Ad imageAd image

ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ನಕ್ಕುಸ ಗದಾಡಿ ಆಗ್ರಹ

Bharath Vaibhav
ಗ್ರಾಮಕ್ಕೆ ಸಾರಿಗೆ ವ್ಯವಸ್ಥೆ ಕಲ್ಪಿಸಲು ನಕ್ಕುಸ ಗದಾಡಿ ಆಗ್ರಹ
WhatsApp Group Join Now
Telegram Group Join Now

 ಐಗಳಿ: -ಅಥಣಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷ ಸಿಧ್ದಾರ್ಥ ಸಿಂಗೆ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಜರುಗಿತು. ತಾಲೂಕಿನ ಐಗಳಿ ಗ್ರಾಮಕ್ಕೆ ಸಾರಿಗೆ ಬಸ್ ಸಂಚಾರ ವ್ಯವಸ್ಥೆ ಇಲ್ಲದೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ ಸರ್ಕಾರ ಸಾರ್ವಜನಿಕರ ಅನೂಕೂಲವಾಗಲಿ ಎಂದು ಮಹಿಳೆಯರಿಗೆ ಶಕ್ತಿ ಯೋಜನೆಯಲ್ಲಿ ಉಚಿತ ಬಸ್ ಸಂಚಾರ ಮಾಡಿದೆ ಆದರೆ ಐಗಳಿ ಗ್ರಾಮಕ್ಕೆ ಪ್ರತಿನಿತ್ಯ ಒಂದು ಬಸ್ ಮಾತ್ರ. ಬರುತ್ತದೆ

ಇದರಿಂದ ಸರ್ಕಾರದ ಯೋಜನೆ ಐಗಳಿ ಗ್ರಾಮದ ಮಹಿಳೆಯರಿಗೆ ಶಾಲಾ ವಿಧ್ಯಾರ್ಥಿಗಳಿಗೆ ಸಿಗುತ್ತಿಲ್ಲ ಐಗಳಿ ಗ್ರಾಮಕ್ಕೆ ಗಂಟೆಗೆ ಒಂದು ಬಸ್ ಬಿಡಲು ಇಂದು ನಡೆದ ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಅನುಸ್ಠಾನ ಸಮಿತಿ ಸದಸ್ಯರಾದ ನಕ್ಕುಸ ಗದಾಡೆ ಅವರು ಅಧಿಕಾರಿಗಳಿಗೆ ತಿಳಿಸಿದರು. ಹೌದು ಅಥಣಿ ತಾಲೂಕಿನ ಪೂರ್ವ ಭಾಗದಲ್ಲಿ 10 ಸಾವಿರ ಕ್ಕಿಂತ ಅಧಿಕ ಜನಸಂಖ್ಯೆ ಹೊಂದಿರು ಐಗಳಿ ಗ್ರಾಮಕ್ಕೆ ಬಸ್ ಸಂಚಾರ ವ್ಯವಸ್ಥೆ ಇಲ್ಲದರಿವುದು ಅತ್ಯoತ್ಯ ನೋವಿನ ಸಂಗತಿಯಾಗಿದೆ . ಐಗಳಿಯಿಂದ ದಿನ ನಿತ್ಯ ನೂರಾರು ಶಾಲಾ ವಿಧ್ಯಾರ್ಥಿಗಳು ಕೂಲಿ ಕಾರ್ಮಿಕರು ಅಥಣಿ ಪಟ್ಟಣಕ್ಕೆ ಸಂಚಾರ ಮಾಡುತ್ತಾರೆ.

ಆದರೆ ಐಗಳಿ ಗ್ರಾಮಕ್ಕೆ ಕಳೆದ 30 ವರ್ಷಗಳಿಂದ ಒಂದೇ ಒಂದು ಬಸ್ ದಿನದಲ್ಲಿ ಎರಡು ಭಾರಿ ಮಾತ್ರ ಸಂಚಾರ ಮಾಡುತ್ತದೆ. ಐಗಳಿ ಗ್ರಾಮದಲ್ಲಿ ಸಾರ್ವಜನಿಕ ಪ್ರಾಥಮಿಕ ಆರೋಗ್ಯ ಕೇಂದ್ರ. ಪೋಲಿಸ್ ಠಾಣೆ, ಡಿ ಸಿ ಸಿ ಬ್ಯಾಂಕ, ನಾಡ ಕಛೇರಿ, ಪೋಸ್ಟ ಆಪೀಸ್ ಎರಡು ಪ್ರೌಡ ಶಾಲೆಗಳು ಪ್ರಾಥಮಿಕ ಶಾಲೆಗಳು ಕೆನರಾ ಬ್ಯಾಂಕ ಗ್ರಾಮ ಪಂಚಾಯತಿ ವಿವಿಧ ಸರ್ಕಾರಿ ಕಛೇರಿಗಳು ಇದ್ದು ದಿನ ನಿತ್ಯ ನೂರಾರು ಸಿಬ್ಬಂದಿಗಳು ಗ್ರಾಮಕ್ಕೆ ಆಗಮಿಸುತ್ತಾರೆ ಇವರಿಗೆ ಸಾರಿಗೆ ವ್ಯವಸ್ಥೆ ಇಲ್ಲದೇ ಇರುವುದರಿಂದ ಸಾರ್ವಜನಿಕರ ಕೆಲಸಗಳ ಮೇಲೆ ಹಾಗೂ ಇಲ್ಲಿನ ವಿಧ್ಯಾರ್ಥಿಗಳ ಶಿಕ್ಷಣದ ಮೇಲೆಯೂ ಪರಿಣಾಮ ಬೀರುತ್ತಿದೆ.

ಗ್ರಾಮಕ್ಕೆ ಬರುವ ಪೋಸ್ಟ ಆಫೀಸ್ ಪತ್ರಗಳು ಸರಿಯಾದ ಸಮಯಕ್ಕೆ ತಲುಪುತ್ತಿಲ್ಲ ಮೂಲ ಭೂತ ಸೌಕರ್ಯಗಳು ಇದ್ದರೂ ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಸಾರಿಗೆ ಅಧಿಕಾರಿಗಳು ವಿಫಲವಾಗಿದ್ದಾರೆ. ಆದರಿಂದ ಅಥಣಿ ಯಿಂದ ಯಲಹಡಗಿ, ಅಡಹಳ್ಳಿ ಕೋಹಳ್ಳಿ ಮಾರ್ಗದಿಂದ ಐಗಳಿ ಕ್ರಾಸ್ ವರಿಗೆ ಪ್ರತಿ ನಿತ್ಯ ಗಂಟೆಗೆ ಒಂದು ಬಸ್ ಸಂಚಾರ ಮಾಡಬೇಕು . ಅದರಂತೆ ಈ ಹಿಂದೆ ಜಮಖಂಡಿಯಿಂದ ಐಗಳಿಗೆ ಗ್ರಾಮಕ್ಕೆ ವಸತಿ ಬಸ್ ಸಂಚಾರ ಇತ್ತು ಅದು ಕೂಡಾ ಕಳೆದ ಎರಡು ವರ್ಷಗಳಿಂದ ಕರೋನಾ ಸಂಧರ್ಭದಲ್ಲಿ ಬಂದ ಆಗಿದೆ

ಈ ಕುರಿತು ಹಲವಾರು ಬಾರಿ ಜಮಖಂಡಿ ಸಾರಿಗೆ ಆಧಿಕಾರಿಗಳಿ ಮನವಿ ಸಲ್ಲಿಸಿದರು ಪ್ರಯೋಜನೆಯಾಗಿಲ್ಲ. ಪ್ರತಿ ನಿತ್ಯ ಗ್ರಾಮಕ್ಕೆ ಆಗಮಿಸುವ ಅಧಿಕಾರಿಗಳು ಸಿಬ್ಬಂದಿಗಳು ಶಾಲಾ ವಿಧ್ಯಾರ್ಥಿಗಳು ಪಿಂಚಿಣಿ ಪಡೆಯುತ್ತಿರುವ ವಯಸ್ಕರು ಐಗಳಿ ಕ್ರಾಸ್ ದಿಂದ ಐಗಳಿ ಗ್ರಾಮದವರಿಗೆ ಮೂರು ಕೀ.ಮಿ. ಕಾಲನ್ನಡೆಗೆ ಮೂಲಕ ಆಗಮಿಸುತ್ತಾರೆ ಆದರಿಂದ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್ ಬಿಡಲು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ತಾಲೂಕು ಪಂಚಾಯತಿ ಅಥಣಿ. ಸಾರಿಗೆ ಇಲಾಖೆ ಅಧಿಕಾರಿಗಳು ಶಿಸು ಅಭಿವೃದ್ದಿ ಅಧಿಕಾರಿಗಳು ಆಹಾರ ನೀರಿಕ್ಷಕರು ಹೆಸ್ಕಾಂ ಅಧಿಕಾರಿಗಳು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಎಲ್ಲ ಸದಸ್ಯರು ಉಪಸ್ಥಿತಿ ಇದ್ದರು. ಬಾಕ್ಸನಲ್ಲಿ ಐಗಳಿ ಗ್ರಾಮಕ್ಕೆ ಅಡಹಳ್ಳಿ ಕೋಹಳ್ಳಿ ಮಾರ್ಗವಾಗಿ ಐಗಳಿ ಕ್ರಾಸ್ ವರಿಗೆ ಸಾರಿಗೆ ಬಸ್ ಹೆಚ್ಚಿಸಲು ಅಥಣಿ ಘಟಕ ವ್ಯವಸ್ಥಾಪಕರಿಗೆ ತಿಳಿಸಿದ್ದೇನೆ. ಎರಡು ಮೂರು ದಿನಗಳಲ್ಲಿ ವ್ಯವಸ್ಥೆ ಮಾಡುತ್ತಾರೆ. ಸಿಧ್ದಾರ್ಥ ಸಿಂಗೆ ಅಧ್ಯಕ್ಷರು ಅಥಣಿ ತಾಲೂಕ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ .

ವರದಿ:-  ಆಕಾಶ ಎಮ್

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!