Ad imageAd image
- Advertisement -  - Advertisement -  - Advertisement - 

ಹೆಸರು ,ಉದ್ದು ಬೆಳೆಗಳಿಗೆ ಬೆಂಬಲ ಬೆಲೆ ಪ್ರತಿ ಕ್ವಿಂಟಲ್ ಗೆ 10ಸಾವಿರ ಕೊಡುವಂತೆ ಕರವೇ ಸೈನಿಕರಿಂದ ಕಚೇರಿ ಎದುರು ಪ್ರತಿಭಟನೆ.

Bharath Vaibhav
ಹೆಸರು ,ಉದ್ದು ಬೆಳೆಗಳಿಗೆ ಬೆಂಬಲ ಬೆಲೆ ಪ್ರತಿ ಕ್ವಿಂಟಲ್ ಗೆ 10ಸಾವಿರ ಕೊಡುವಂತೆ ಕರವೇ ಸೈನಿಕರಿಂದ ಕಚೇರಿ ಎದುರು ಪ್ರತಿಭಟನೆ.
WhatsApp Group Join Now
Telegram Group Join Now

ಸೇಡಂ:- ಪಟ್ಟಣದ ತಾಲೂಕು ಆಡಳಿತ ಕಚೇರಿ ಎದುರು ಇಂದು ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಹೆಸರು ಮತ್ತು ಉದ್ದು ಬೆಳೆಗಳಿಗೆ ಬೆಂಬಲ ಬೆಲೆ 10ಸಾವಿರ ರೂಪಾಯಿ ನಿಗದಿ ಮಾಡಬೇಕೆಂದು ರೈತರ ಪರವಾಗಿ ಕರವೇ ತಾಲೂಕ ಅಧ್ಯಕ್ಷರಾದ ಡಾ.ರಾಮಚಂದ್ರ ಗುತ್ತೇದಾರ್ ನೇತೃತ್ವದಲ್ಲಿ ತಾಲೂಕ ಉಪತಹಸೀಲ್ದಾರರಾದ ರಾಜಕುಮಾರ ಮುಖಾಂತರ ಮಾನ್ಯ ಮುಖ್ಯಮಂತ್ರಿಗಳಿಗೆ ಅವರಿಗೆ ಮನವಿ ಸಲ್ಲಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ರಾಮಚಂದ್ರ ಗುತ್ತೇದಾರ್ ಅವರು ಹೆಸರು ಮತ್ತು ಉದ್ದು ಬೆಲೆ 10000ಸಾವಿರ ರೂಪಾಯಿ ನಿಗದಿ ಪಡಿಸಬೇಕು ಮತ್ತು ಸರಕಾರದಿಂದ ಮಾರುಕಟ್ಟೆ ಕೇಂದ್ರಗಳನ್ನು ಪ್ರಾರಂಭಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಹೇಶ್ ರೆಡ್ಡಿ, ಚಂದ್ರಶೇಖರ್ ಪೂಜಾರಿ, ದೇವು ಕುಮಾರ್ ನಾಟಿಕರ್, ಶ್ರೀನಿವಾಸ್ ರೆಡ್ಡಿ, ಭೀಮಯ್ಯ ಗುತ್ತೇದಾರ್, ಗುಂಡಪ್ಪ ಪೂಜಾರಿ, ಮಲ್ಲಿಕಾರ್ಜುನ್ ಬೆನಕನಹಳ್ಳಿ ಸೇರಿದಂತೆ ಇನ್ನಿತರರು ಪಾಲ್ಗೊಂಡಿದ್ದರು.

ವರದಿ :-ವೆಂಕಟಪ್ಪ ಕೆ ಸುಗ್ಗಾಲ್.

WhatsApp Group Join Now
Telegram Group Join Now
Share This Article
error: Content is protected !!