
ಗುರುರಾಯರ ಮಧ್ಯಾರಾಧನೆಯ ಅಂಗವಾಗಿ ಇಂದು ಬೆಳಿಗ್ಗೆ 7 ಗಂಟೆಗೆ ಸುಪ್ರಭಾತ, ಪುಣ್ಯಾಹ, ಗಣಪತಿ ಪೂಜೆ, ಆಂಜನೇಯ ಸಹಿತ ಸೀತಾರಾಮ ಮತ್ತು ಗುರು ರಾಘವೇಂದ್ರರ ಬೃಂದಾವನಕ್ಕೆ ಪಂಚಾಮೃತ ಅಭಿಷೇಕ, ಕ್ಷೀರಾಭಿಷೇಕ, ಪವಮಾನ ಸೂಕ್ತಾಭಿಷೇಕ ನಡೆಸಿ ವಿಶೇಷ ಅಲಂಕಾರ ಮಾಡಲಾಗಿತ್ತು. ಮಧ್ಯಾಹ್ನ 12 ಗಂಟೆಗೆ ಮಹಾಮಂಗಳಾರತಿ ನೆರವೇರಿಸಿ ಸಾರ್ವಜನಿಕರಿಗೆ ಪ್ರಸಾದ ವಿನಿಯೋಗ ವಿತರಿಸಲಾಯಿತು.

ಗುರುರಾಘವೇಂದ್ರ ಸೇವಾ ಸಮಿತಿ , ರಾಘವೇಂದ್ರ ಯುವಕ ಸಂಘದ ಪದಾಧಿಕಾರಿಗಳು, ರಾಘವೇಂದ್ರ ನಗರ, ಕೊಟ್ಟೂರನಕೊಟ್ಟಿಗೆ, ಸೂಳೆಕೆರೆ, ಮರಸರಕೊಟ್ಟಿಗೆ, ವೀರಭದ್ರೇಶ್ವರ ನಗರ ಸೇರಿದಂತೆ ಅಕ್ಕಪಕ್ಕದ ಗ್ರಾಮಸ್ಥರು ಸೇರಿದಂತೆ ನೂರಾರು ಭಕ್ತರು ರಾಯರ ಮಧ್ಯಾರಾಧನೆಯಲ್ಲಿ ಪಾಲ್ಗೊಂಡು ರಾಯರ ಕೃಪೆಗೆ ಪಾತ್ರರಾದರು.
ವರದಿ: ಗಿರೀಶ್ ಕೆ ಭಟ್

