ಬೈಲಹೊಂಗಲ : ತಾಲೂಕಿನ ಬುಡರಕಟ್ಟಿ ಗ್ರಾಮದಲ್ಲಿ 2025-26 ಸಾಲಿನಲ್ಲಿ ಪುನಶ್ಚೇತನ ಗೊಳಿಸಲಾದ ಹಕಾರಿ ಕೆರೆಯಲ್ಲಿ ಗಿಡ ನಾಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಈ ಕಾರ್ಯಕ್ರಮವನ್ನು ಮಾನ್ಯ ಜಿಲ್ಲಾ ನಿರ್ದೇಶಕರಾದ ಸತೀಶ್ ನಾಯಕ ಸರ್ ರವರು ಗಿಡ ನಾಟಿ ಮಾಡುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು ಈ ಸಂದರ್ಭದಲ್ಲಿ ತಾಲೂಕಿನ ಮಾನ್ಯ ಯೋಜನಾಧಿಕಾರಿಗಳು ಮತ್ತು ಜಿಲ್ಲಾ ಜನಜಾಗೃತಿ ಸದಸ್ಯರು ಹಾಗೂ ಕರ್ನಾಟಕ ರೈತ ಸಂಘದ ಅಧ್ಯಕ್ಷರು, ಕೆರೆ ಸಮಿತಿಯ ಅಧ್ಯಕ್ಷರು ಆಗಿರುವ ಮಾಂತೇಶ್ ಕಾಮತ್ ರವರು ಮತ್ತು ಬುಡರಕಟ್ಟಿ ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಾದ ಲಕ್ಶ್ಮಣ ಸರ್ ರವರು ಮತ್ತು ಧಾರವಾಡ ಪ್ರಾದೇಶಿಕ ವ್ಯಾಪ್ತಿಯ ನಿಂಗರಾಜ್ ಸರ್ ಅವರು ಮತ್ತು ತಾಲೂಕಿನ ಕೃಷಿ ಮೇಲ್ವಿಚಾರಕರಾದ ರವಿ ಆರ್ ಜಿ ರವರು ಹಾಗೂ ಕೆರೆ ಸಮಿತಿಯ ಸದಸ್ಯರು ಮತ್ತು ಪಂಚಾಯತ್ ಸರ್ವ ಸದಸ್ಯರು ಹಾಗೂ ಊರಿನ ಗುರುಹಿರಿಯರು ಮತ್ತು ಸ್ಥಳೀಯ ಸೇವಾ ಪ್ರತಿನಿಧಿಗಳು ಉಪಸ್ಥಿತರಿದ್ದರು
ವರದಿ : ದುಂಡಪ್ಪ ಹೂಲಿ


