LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureRecipes
State News

ಹೆಂಡತಿಯಿಂದಲೇ ತಾಳಿ ಕಟ್ಟಿಸಿಕೊಂಡು ಗೃಹಲಕ್ಷ್ಮಣನಾದ ಉದ್ಯಮಿ ಗಂಡ 

Advertisement

ವಧುಗಳೇ ತಮ್ಮ ವರರ ಕೊರಳಿಗೆ ಮಾಂಗಲ್ಯ ಕಟ್ಟಿದ್ದಾರೆ. ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತ್ವಾಡ್ ಗ್ರಾಮದಲ್ಲಿ ನಡೆದ ಎರಡು ಮದುವೆಗಳು ಇದೀಗ ವಿಶೇಷ ಕಾರಣಕ್ಕಾಗಿ ಗಮನ ಸೆಳೆದಿವೆ.

ಎರಡೂ ಮದುವೆಗಳಲ್ಲಿ ವಧುಗಳೇ ವರರಿಗೆ ಪವಿತ್ರ ಮಾಂಗಲ್ಯಸೂತ್ರವನ್ನು ಕಟ್ಟಿದ್ದಾರೆ. ಈ ಮೂಲಕ ಲಿಂಗ ಸಮಾನತೆ, ವರದಕ್ಷಿಣೆ ವಿರೋಧ ಮತ್ತು ಸಾಮಾಜಿಕ ಅನಿಷ್ಟ ಪದ್ಧತಿಗಳ ವಿರುದ್ಧ ವಿಭಿನ್ನ ಸಂದೇಶ ನೀಡಲಾಗಿದೆ.

ಸಾಮಾನ್ಯವಾಗಿ ಮದುವೆ ಸಮಾರಂಭದಲ್ಲಿ ವರನು ವಧುವಿನ ಕೊರಳಿಗೆ ಮಾಂಗಲ್ಯ ಕಟ್ಟುತ್ತಾನೆ. ಆದರೆ ನಾಲತ್ವಾಡ್‌ನಲ್ಲಿ ನಡೆದ ಈ ಮದುವೆಯಲ್ಲಿ ವಧುಗಳು ಆ ಪಾತ್ರವನ್ನು ವಹಿಸಿಕೊಂಡಿದ್ದಾರೆ.

ಇದು ಕೇವಲ ವಿಭಿನ್ನವಾಗಿ ಕಾಣಿಸಿಕೊಳ್ಳಲು ಮಾಡಿದ ಆಚರಣೆಯಲ್ಲ. ಪುರುಷ ಮತ್ತು ಮಹಿಳೆ ಇಬ್ಬರೂ ಸಮಾನರು ಎಂಬ ಸಂದೇಶವನ್ನು ಸಮಾಜಕ್ಕೆ ಸಾರುವ ಉದ್ದೇಶದಿಂದ ಈ ರೀತಿಯ ವಿವಾಹ ನಡೆಸಲಾಯಿತು ಎಂದು ವರದಿ ತಿಳಿಸಿದೆ.

ಇಬ್ಬರು ಸಹೋದರರ ಮಕ್ಕಳ ಮದುವೆಈ ಮದುವೆಯ ಮತ್ತೊಂದು ವಿಶೇಷವೆಂದರೆ, ಎರಡೂ ವರರು ಸಹೋದರರ ಮಕ್ಕಳಾಗಿದ್ದಾರೆ. ಅವರು ಬಸವಣ್ಣನವರ ಬೋಧನೆಗಳನ್ನು ಗಾಢವಾಗಿ ನಂಬುವ ಕುಟುಂಬಕ್ಕೆ ಸೇರಿದವರು.

 12ನೇ ಶತಮಾನದಲ್ಲಿ ಬಸವಣ್ಣನವರು ಪ್ರತಿಪಾದಿಸಿದ್ದ ಸಮಾನತೆ ಮತ್ತು ಸಾಮಾಜಿಕ ಸುಧಾರಣೆಯ ವಿಚಾರಗಳನ್ನು ಮುಂದಿಟ್ಟುಕೊಂಡು ಈ ಸರಳ ವಿವಾಹವನ್ನು ನಡೆಸಲಾಯಿತು.

Advertisement
Advertisement

Author
Bharath Vaibhav
is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ISRO ಮತ್ತೊಂದು ಅಭೂತಪೂರ್ವ ಸಾಧನೆ : ಇಒಎಸ್-05 ಯಶಸ್ವಿ ಉಡಾವಣೆ ಕೆಪಿಎಸ್‌ಸಿ ನೇಮಕಾತಿ ಹಗರಣ : ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ಅಮಾನತು ಗೌರಿ-ಗಣೇಶ ಹಬ್ಬ : 2,400 ವಿಶೇಷ ಹೆಚ್ಚುವರಿ ಬಸ್‌ಗಳನ್ನ ಓಡಿಸಲು ಸಕಲ ಸಿದ್ಧತೆಸ್ಮೃತಿ ಮಂದಾನಾ ಹೊಸ ವಿಕ್ರಮಸ್ಮೃತಿ ಮಂದಾನಾ ಭರ್ಜರಿ ಶತಕಅಮೆರಿಕದಲ್ಲಿ ಹಲ್ಲು ಕೀಳಿಸಲು ₹2.37 ಲಕ್ಷ ಬಿಲ್ : ಭಾರತವೇ ಬೆಸ್ಟ್ ಎಂದ ವ್ಯಕ್ತಿ ಶೈಕ್ಷಣಿಕ ವ್ಯವಸ್ಥೆ, ನೇಮಕಾತಿ ಪರೀಕ್ಷೆಯಲ್ಲಿ ಬದಲಾವಣೆ: ಸಂಪುಟ ಉಪಸಮಿತಿ ಮಹತ್ವದ ಚರ್ಚೆ20 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಕಾನ್ಸ್‌ಟೇಬಲ್ಬೈಕ್ ಸವಾರನ ಹೆಲ್ಮೆಟ್ ಒಡೆದು ಅಟ್ಟಹಾಸ: ಮಾಜಿ ಶಾಸಕ ತೆಲ್ಕೂರ ಸೇರಿ ಇಬ್ಬರ ವಿರುದ್ಧ FIR ಜಪಾನ್ ಏಶಿಯನ್ ಗೇಮ್ಸ್ ಗೇ ವಿವಿಎಸ್ ಲಕ್ಶ್ಮ ಣ್ ಟೀಮ್ ಇಂಡಿಯಾಗೇ ಹೆಡ್ ಕೋಚ್ ಸಾಧ್ಯತೆ