Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಿಟ್ಟೂರು ಗ್ರಾಮದಲ್ಲಿ ಶ್ರೀ ಮಾರಿಕಾಂಬೆ ದೇವಿಯ ಅದ್ದೂರಿ ಮೆರವಣಿಗೆ.

Advertisement
ಸಿರುಗುಪ್ಪ : -ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ಶ್ರಾವಣ ಮಾಸದ ನಿಮಿತ್ತ ಶ್ರೀ ಮಾರಿಕಾಂಬೆ ದೇವಿಯ ಗಂಗೆಪೂಜೆ, ವಿವಿಧ ವಾದ್ಯಗಳೊಂದಿಗೆ ಅದ್ದೂರಿ ಮೆರವಣಿಗೆ ನಡೆಯಿತು.



 

ಹಲವಾರು ವರ್ಷಗಳಿಂದಲೂ ಈ ಹಬ್ಬವನ್ನು ಆಚರಿಸುತ್ತಾ ಬಂದಿದ್ದು ಗ್ರಾಮದ ಎಲ್ಲಾ ಸಮುದಾಯವು ದೇವಿಯ ಮೆರವಣಿಗೆಯಲ್ಲಿ ಪಾಲ್ಗೊಳುತ್ತಾರೆ.ಹಬ್ಬದ ನಿಮಿತ್ತ ದೇವಸ್ಥಾನದಲ್ಲಿ ಎಲೆಪೂಜೆ, ಉಡಿತುಂಬುವುದು, ಕಾಯಿ ಕರ್ಪೂರ ಎಡೆಯ ನೈವೇದ್ಯ ಸಲ್ಲಿಸಿ ಮಹಾಮಂಗಳಾರತಿ ಸಲ್ಲಿಸಲಾಯಿತು. ಹರಕೆ ಹೊತ್ತ ಭಕ್ತರಿಂದ ದೀಡ್ ನಮಸ್ಕಾರ, ಜವಳ ಕಾರ್ಯಕ್ರಮಗಳು ಜರುಗಿದವು.



ಉತ್ತಮ ಮಳೆಯಿಂದಾಗಿ ಗ್ರಾಮದಲ್ಲಿ ಹರಿಯುವ ತುಂಗಾಭದ್ರೆ ನದಿಯು ಪ್ರತಿವರ್ಷ ತುಂಬಿ ಹರಿದು ಸಮೃದ್ದ ಬೆಳೆ ದೊರೆಯಲಿ, ಸುಖ, ಶಾಂತಿ, ನೆಮ್ಮದಿಯ ವಾತಾವರಣವು ಸಿಗಲೆಂದು ಹಬ್ಬವನ್ನು ಆಚರಿಸಿಕೊಂಡು ಬರಲಾಗುತ್ತಿದೆ. ಬೇಡಿದ ವರಗಳನ್ನು ನೀಡುವ ತಾಯಿಯೆಂಬ ನಂಬಿಕೆಯು ಭಕ್ತರ ಮನದಲ್ಲಿ ತುಂಬಿದೆ.ದೇವಸ್ಥಾನದಿಂದ ಸಾಯಂಕಾಲ ದೇವಿಯ ಮೂರ್ತಿಗಳನ್ನು ನದಿತಟದಲ್ಲಿ ಕರೆದೊಯ್ದು ಗಂಗೆಯ ಪೂಜೆಯನ್ನು ಮಾಡಿ ನಂತರ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ಕರೆತಂದು ಶ್ರದ್ದಾಭಕ್ತಿಯಿಂದ ಹಬ್ಬವನ್ನು ಆಚರಿಸಲಾಯಿತು.

ಗ್ರಾಮದಲ್ಲಿ ಹರಿಯುವ ತುಂಗಾಭದ್ರ ನದಿತಟಕ್ಕೆ ಶ್ರಾವಣ ಮಾಸದ ನಿಮಿತ್ತ ಪಕ್ಕದ ಉಪ್ಪಾರ ಹೊಸಳ್ಳಿಯ ಆಂಜನೇಯ್ಯಸ್ವಾಮಿ, ತೆಕ್ಕಲಕೋಟೆ ಪಟ್ಟಣದ ವರವಿನ ಮಲ್ಲೇಶ್ವರ ಸ್ವಾಮಿ ಮೂರ್ತಿಯನ್ನು ಕರೆತಂದು ಗಂಗೆ ಪೂಜೆಗೈದು ಪಲ್ಲಕ್ಕಿ ಮೂಲಕ ದೇವಸ್ಥಾನಕ್ಕೆ ಭಕ್ತರು ಹೊತ್ತುಕೊಂಡು ಹೋಗುತ್ತಾರೆ.ಶ್ರೀ ಹುಲಿಗೆಮ್ಮ, ಶ್ರೀ ಎಲ್ಲಾ ಯಲ್ಲಮ್ಮ ದೇವಿಯರ ಗಂಗೆಪೂಜೆಯು ಇದೇ ಗ್ರಾಮದ ನದಿತಟದಲ್ಲಿ ಜರುಗುವುದು ವಿಶೇಷವಾಗಿದೆ.

ವರದಿ : ಶ್ರೀನಿವಾಸ ನಾಯ್ಕ.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ