Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

94ನೇ ಜನ್ಮ ದಿನದಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಆಚರಿಸಲಾಯಿತು.

Advertisement
ಕಂದಗಲ್ಲ : -ಇಲಕಲ್ಲಿನ ಡಾ ಮಹಾಂತ ಶ್ರೀಗಳ ಕಾರ್ಯ ನಿಷ್ಠೆ ಸಮಾಜ ಮುಖಿ ಕಾರ್ಯಗಳು ನಮಗೆಲ್ಲ ದಾರಿದೀಪಗಳಾಗಿವೆ ಡಾ ಮಹಾಂತ ಅಪ್ಪಗಳ ದಿವ್ಯ ಸಂದೇಶದಂತೆ ದುಶ್ಚಟ ದುರಾಸೆಗಳಿಂದ ದೂರ ಇರುವದು ಹಾಗೂ ಮತ್ತೊಬ್ಬರನ್ನು ದುಶ್ಚಟದಿಂದ ಮುಕ್ತ ಮಾಡುವದಾಗಿ ಸಂಕಲ್ಪ ಮಾಡಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ನಾವೆಲ್ಲ ಶ್ರಮಿಸಿ ಶ್ರೀಗಳ ಮಹಾನ ಕಾರ್ಯ ಮುಂದುವರಿಸಿಕೊಂಡು ಹೋಗೋಣ ಎಂದು ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗೂ ಪತ್ರಕರ್ತರಾದ ವೀರೇಶ ಶಿಂಪಿ ಹೇಳಿದರು.

ಕಂದಗಲ್ಲದ ನಿಹಾರಿಕಾ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ವತಿಯಿಂದ ಸಂಘದ ಕಾರ್ಯಾಲಯದಲ್ಲಿ ನೆಡೆದ ಡಾ ಮಹಾಂತ ಶ್ರೀಗಳ 94 ನೇ ಜನ್ಮ ದಿನದ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಸಂಸ್ತಾಪಕರಾದ ಡಾ ಸಂತೋಷ ಪೂಜಾರ ಮಾತನಾಡಿ ಚಿತ್ತರಗಿ ಸಂಸ್ತಾನ ಮಠದ ಡಾ ಮಹಾಂತಪ್ಪಗಳು ಅಪರೂಪದ ಸ್ವಾಮಿಗಳಗಿದ್ದವರು ಶ್ರೀಗಳು ಶರಣ ಸಂಸ್ಕೃತಿಯಲ್ಲಿ ಮಠ ಕಟ್ಟುವ ಮೂಲಕ ಬಸವಣ್ಣನವರ ಪ್ರತಿರೂಪ ಎನಿಸಿದ್ದರು. ಮಠದಲ್ಲಿ ಕೂಡದೆ ಜೋಳಿಗೆ ಹಿಡಿದು ನಗರ, ಪಟ್ಟಣ, ಗ್ರಾಮಗಳಲ್ಲಿ ಸಂಚರಿಸಿ ಜನರ ದುಶ್ಚಟ ಬೇಡಿ ವ್ಯಸನ ಮುಕ್ತ ಸಮಾಜ ನಿರ್ಮಿಸುವಲ್ಲಿ ಶ್ರಮಿಸಿದ್ದಾರೆ, ಅವರ ದಿವ್ಯ ಸಂದೇಶ ನಾವೆಲ್ಲರೂ ಪಾಲಿಸುವದರ ಜೊತೆಗೆ ಇತರರಿಗೂ ವ್ಯಸನಗಳಿಂದಾಗುವ ದುಷ್ಟಪರಿಣಾಮದ ಬಗ್ಗೆ ಮನದಟ್ಟು ಮಾಡಿ ದುಶ್ಚಟಗಳಿಂದ ದೂರ ಇರುವಂತೆ ತಿಳಿಸೋಣ ಎಂದು ಹೇಳಿದರು.

ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಚನ್ನಪ್ಪ ಜಾಲಿಹಾಳ ಉದ್ಘಾಟಿಸಿದರು,ಮಾಜಿ ತಾಲೂಕ ಪಂಚಾಯತ್ ಅಧ್ಯಕ್ಷ ಮಹಾಂತೇಶ ಕಡಿವಾಲ ಶ್ರೀಗಳ ಭಾವಚಿತ್ರಕ್ಕೆ ಪುಷ್ಟ ಸಮರ್ಪಿಸಿದರು, ಬಸವೇಶ್ವರ ಬ್ಯಾಂಕ್ ಮಾಜಿ ಅಧ್ಯಕ್ಷ ಮಲ್ಲಪ್ಪ ಪೋತನಾಳ, ಮಹಾಂತೇಶ ಮಠ, ಸಂತೋಷ ಗುರುವಿನಮಠ, ಇಬ್ರಾಹಿಂ ಬೆಣ್ಣೋರ,ಯುವ ಮುಖಂಡ ಚಂದ್ರಶೇಖರ ಬಸರಗಿಡದ, ಲಿಂಗರಾಜ ಶಿರಗುಂಪಿ, ಪ್ರಶಾಂತ ಬನ್ನಿಗೋಳ, ಮು ಅಥಿತಿಗಳಾಗಿ ಆಗಮಿಸಿದ್ದರು, ಯಂಕಣ್ಣ ಮಳ್ಳಿ ಸ್ವಾಗತಿಸಿದರು ಅಬ್ದುಲಸಾಬ ಮುಲ್ಲಾ ನಿರೂಪಿಸಿದರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ:-ದಾವಲಸಾಬ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ