Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸವದತ್ತಿ ಪೋಲಿಸ್ ಠಾಣೆಯಲ್ಲಿ ದಾಖಲಾದ ಪ್ರಕರಣ್

Advertisement
ಬೆಳಗಾವಿ: ಜಿಲ್ಲೆಯ ಸವದತ್ತಿ ಪೋಲಿಸ್ ಠಾಣೆಯಲ್ಲಿ ದಾಖಲಾದ ಪ್ರಕರಣ 164/24 ರಲ್ಲಿ ನಮೊದಿತ 7ಜನ ಅಪಾದಿತರನ್ನು ಕೂಡಲೆ ಬಂಧಿಸುವ ಹಾಗೂ ಈ ಪ್ರಕರಣದಲ್ಲಿ ಭಾಗಿಯಾದವರ ಮೇಲೆ‌ ಕಠಿಣ ಶಿಕ್ಷೆ ಆಗುವ ರೀತಿಯಲ್ಲಿ ಮೊಕದ್ದಮೆ ದಾಖಲಿಸುವಂತೆ ಆಗ್ರಹಿಸಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ್ ಪಾಟೀಲ ನೇತೃತ್ವದಲ್ಲಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮನವಿ ಪತ್ರ ನೀಡಿ ಆಗ್ರಹಿಸಿದ್ದಾರೆ.



ನಗರದಲ್ಲಿರುವ ಪೋಲಿಸ್ ಭವನಕ್ಕೆ ಬುಧವಾರ ಬಿಜೆಪಿ ನಿಯೋಗ ತೆರಳಿ ಮನವಿ ನೀಡಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುಭಾಷ್ ಪಾಟೀಲ ಪತ್ರಿಕೆಯೊಂದಿಗೆ ಮಾತನಾಡಿ,  ಸವದತ್ತಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುವ ಮುನವಳ್ಳಿ ಪಟ್ಟಣದಲ್ಲಿ ನಡೆದ ಲವ್ ಜೀಹಾದ ಪ್ರಕರಣದಲ್ಲಿ ದಲಿತ ಮಹಿಳೆಗೆ ಎಸಗಿರುವ ಗುರುತರವಾದ ಪ್ರಕರಣವನ್ನು ಪೋಲಿಸ್ ಇಲಾಖೆಯಿಂದ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ಲವ್ ಜೀಹಾದ್ ಮತಾತಂರ, ಲೈಂಗಿಕ ದೌರ್ಜನ್ಯ, ಅತ್ಯಾಚಾರ, ಮೊಸ, ವಂಚನೆ, ಜಾತಿ ನಿಂದನೆ, ಗೂಂಡಾಗಿರಿ ಹಾಗೂ ಇನ್ನು ಅನೇಕ ತೆರನಾದ ಅಪರಾಧವನ್ನು ಎಸಗಿದ ಅಪರಾಧಿ ರಫೀಕ್ ಭೇಪಾರಿಯ ಮೇಲೆ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು.

ಕೊಮು ಸೌಹಾರ್ದತೆಗೆ ದಕ್ಕೆ ತರುವದಲ್ಲದೆ ಸಮಾಜದ ಸ್ವಸ್ಥ ಹಾಳು ಮಾಡಿದ್ದು ಕೊಮುಗಲಭೆಗಳಿಗೆ ಪ್ರಚೋದನೆ ನೀಡುವ ರೀತಿಯಲ್ಲಿ ಅಪರಾಧಿಗಳಿದ್ದರು ಎಫ್.ಐ.ಆರ್ ದಲ್ಲಿ ನಮೊದಿಸಿದ 7 ಜನರಲ್ಲಿ ಕೇವಲ ಇಬ್ಬರನ್ನು ಬಂಧಿಸಿದ್ದು ಉಳಿದವರು ಬೇಕಾ ಬಿಟ್ಟಿಯಾಗಿ ಸಾರ್ವಜನಿಕವಾಗಿ ಮಾತನಾಡುತ್ತಾ ಕಾನೂನನ್ನೆ ಪ್ರಶ್ನಿಸುವ ಮಟ್ಟದಲ್ಲಿದ್ದಾರೆ. ಇವರ ಬಂಧನ ಯಾವಾಗ ಎಂದು ಪ್ರಶ್ನಿಸಿದರು.

ಇವರನ್ನು ತಕ್ಷಣ ಬಂಧಿಸಬೇಕು. ಈ ಪ್ರಕರಣದಲ್ಲಿ ಬೆಳಗಾವಿ ನಗರದಲ್ಲಿರುವ ಕೆಲ‌ ಸ್ವಯಂ ಘೋಷಿತ ನಾಯಕರ ವ್ಯವಸ್ಥಿತವಾದ ಜಾಲ,‌ ಅಪರಾಧಿಗೆ ಇಂತಹ ಕುಕೃತ್ಯಕ್ಕೆ ಸಂಪೂರ್ಣವಾಗಿ ಸಹಾಯಮಾಡಿ ಅಪರಾಧಿಗಳ ರಕ್ಷಣೆಯಲ್ಲಿ ತೊಡಗಿದ್ದಾರೆ. ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದರು.

ರಾಜ್ಯ ಬಿಜೆಪಿ ಮಾಧ್ಯಮ ಸಮಿತಿ ಸದಸ್ಯ ಎಫ್.ಎಸ್.ಸಿದ್ದನಗೌಡರ ಮಾತನಾಡಿ, ಇದೊಂದು ಆಧುನಿಕ ಕಾಲದಲ್ಲಿ ನಾಗರಿಕ ಸಮಾಜ ತಲೆ ತಗ್ಗಿಸುವಂತಾಹ ಪ್ರಕರಣವಾಗಿದ್ದು,
ಮುನವಳ್ಳಿ ಪಟ್ಟಣದಲ್ಲಿ ಈ ಪ್ರಕರಣದಲ್ಲಿರುವ ಅಪರಾಧಿ ಇನ್ನು ಇಂತಹ ಹೀನ ಕೆಲಸಗಳಲ್ಲಿ ಭಾಗಿಯಾಗಿರುವ ಶಂಕೆಇದ್ದು ಅಲ್ಲದೆ ಕಾನುನು ಬಾಹಿರ ಅಕ್ರಮ ಚಟುವಟಿಕೆಗಳಲ್ಲಿ ಈ ಗ್ಯಾಂಗ್ ಭಾಗಿಯಾಗಿದ್ದು ಮಟ್ಕಾ ದಂಧೆ, ದೇಶಿ ಸರಾಯಿ ಮಾರಾಟ, ಗೂಂಡಾಗಿರಿ, ಹಿಂದೂ ಹೆಣ್ಣುಮಕ್ಕಳನ್ನ ಲೈಂಗಿಕವಾಗಿ ಬಳಸಿಕೊಂಡು ಅವರ ಮನೆಯವರಿಗೆ ಧಮಕ್ಕಿ ನೀಡಿ ಕೊಲೆ ಬೆದರಿಕೆ ಹಾಕೂವ ಕ್ರೂರಿತನದ ವರ್ತನೆ ಬೆಳೆಸಿಕೊಂಡಿದ್ದು ಗೂಂಡಾಗಳ ಗ್ಯಾಂಗ್ ಹೊಂದಿದ್ದಾನೆ ಎಂಬ ಆಪಾದನೆ‌ ರಫೀಕ್ ಬೇಫಾರಿ ಇತನ ಹಾಗೂ ಇತನ ಗ್ಯಾಂಗ್ ಮೇಲೆ‌ಇದ್ದು ಇದರ ಹಿಂದೆ ಜೀಹಾದಿ ಮನಸ್ಥಿತಿಯ ಜನರು ಕಾರ್ಯನಿರ್ವಹಿಸುತಿದ್ದಾರೆ ಎಂಬ ಭಯ ಜನಸಾಮಾನ್ಯರಲ್ಲಿದ್ದು, ಇದರ ಬೇರು ಸಮೇತ ಕಿತ್ತುಹಾಕಲು ಮತ್ತು ಇವರ ಚಟುವಟಿಕೆ ತಿಳಿಯಲು ಉನ್ನತ ತನಿಖೆ ಅತ್ಯವಶ್ಯಕವಾಗಿದೆ. ಆದ್ದರಿಂದ ಈ ಅಪರಾಧವನ್ನು ಹಗುರವಾಗಿ ಪರಿಗಣಿಸದೆ ಇದರ ಜಾಲವನ್ನು ಕಂಡು ಹಿಡಿದು ಸಮಾಜಘಾತುಕ ಶಕ್ತಿಯನ್ನು ಮಟ್ಟಾಹಾಕವಂತೆ ಭಾರತೀಯ ಜನತಾ ಪಾರ್ಟಿ ತಮ್ಮಲ್ಲಿ ಆಗ್ರಹಮಾಡುತ್ತೆವೆ ಎಂದು ತಿಳಿಸಿದರು.

ಈ ವಿಷಯವನ್ನು ಗೃಹಮಂತ್ರಿಗಳು ಕರ್ನಾಟಕ ಸರ್ಕಾರ
ಪೋಲಿಸ್ ಮಹಾನಿರಿಕ್ಷಕರು ಕರ್ನಾಟಕ ಸರ್ಕಾರ ಇವರ ಗಮನಕ್ಕೆ ತರುವದಾಗಿ ಜಿಲ್ಲಾ ಬಿಜೆಪಿ ಎಸ್ಸಿ ಮೊರ್ಚಾ ಅಧ್ಯಕ್ಷ ಯಲ್ಲೇಶ ಕೊಲಕಾರ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಜಿಲ್ಲಾ ಮಾದ್ಯಮ ಸಹ ಸಂಚಾಲಕರು ಬಾಳೇಶ ಚವ್ವನ್ನವರ ಜಿಲ್ಲಾ ಕೋಶಾಧ್ಯಕ್ಷ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ಸಾಮಾಜಿಕ ಜಾಲತಾಣದ ಸಂಚಾಲಕ‌ ಸಂತೋಷ ದೇಶನೂರ, ಬಿಜೆಪಿ ಮುಖಂಡರಾದ ಮಂಜುನಾಥ ಪಮ್ಮಾರ ಉಪಸ್ಥಿತರಿದ್ದರು.

ವರದಿ ಪ್ರತೀಕ ಚಿಟಗಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ