Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಅದ್ದೂರಿಯಾಗಿ ಶ್ರೀರಾಮನವಮಿ ಅಚರಣೆ

Advertisement
ಪೀಣ್ಯ :-2ನೇ ಹಂತದಲ್ಲಿ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ರಾಜ್ಯಾಧ್ಯಕ್ಷ ವಿ.ಆನಂದ ಅವರ ನೇತೃತ್ವದಲ್ಲಿ ಅದ್ದೂರಿಯಾಗಿ ಶ್ರೀರಾಮನವಮಿ ಅಚರಣೆ

ಪೀಣ್ಯ ದಾಸರಹಳ್ಳಿ ಕ್ಷೇತ್ರದ ಪೀಣ್ಯ 2ನೇ ಹಂತ ಬಸ್ ನಿಲ್ದಾಣ ಹತ್ತಿರ ಇರುವ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಪ್ರದಾನ ಕಚೇರಿ ಮುಂಭಾಗದಲ್ಲಿ ಅದ್ದೂರಿಯಾಗಿ ಶ್ರೀರಾಮ ನವಮಿ ಆಚರಣೆಯನ್ನು ರಾಜ್ಯಾಧ್ಯಕ್ಷ ವಿ.ಆನಂದ್ ಅವರ ನೇತೃತ್ವದಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾ ಮತ್ತು ಆಂಜನೇಯ ಪ್ರತಿಮೆಗಳಿಗೆ ವಿಶೇಷ ಅಲಂಕಾರ, ವಿಶೇಷ ಪೂಜೆ ಪುನಸ್ಕಾರ ಆಯೋಜಿಸಿ

ಕಾರ್ಯಕ್ರಮದಲ್ಲಿ ಭಾಗವಹಿಸಿದ ಹೆರೋಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ ನಾಗರಾಜ್ ರವರು ಮಾತನಾಡಿ ಶ್ರೀ ರಾಮನವಮಿ ಪ್ರಯುಕ್ತ ಶ್ರೀರಾಮನಿಗೆ ಸುವರ್ಣ ವಜ್ರಾಂಗಿ ಕವಚ, ಪುಷ್ಪಲಂಕಾರ, ವಸ್ತ್ರಾಲಂಕಾರ, ನವನೀತ ಅಲಂಕಾರ, ಸೀತಾ ಕಲ್ಯಾಣ ಅಲಂಕಾರ, ದ್ರಾಕ್ಷಿ ಗೋಡಂಬಿ ಅಲಂಕಾರ, ಧ್ಯಾನಲಂಕಾರ, ಶ್ರೀರಾಮ ಪಟ್ಟಾಭಿಷೇಕ , ಶಯನೋತ್ಸವ ಪ್ರತಿದಿನ ಒಂದೊಂದು ಅಲಂಕಾರದಲ್ಲಿ ಶ್ರೀರಾಮನನ್ನು ಶೃಂಗಾರಿಸಿ ಶ್ರೀರಾಮನಾ ಜನ್ಮದಿನದಂದು ಬರುವ ಭಕ್ತರಿಗೆ ಕೊಸಂಬರಿ, ಪಾನಕ ವಿತರಣೆ ಆಯೋಜಿಸಿದ್ದು ತುಂಬಾ ಖುಷಿ ತಂದಿದೆ ಎಂದು ಅನ್ನ ಸಂತರ್ಪಣೆಗೆ ಚಾಲನೆ ನೀಡಿ ವಿ.ನಾಗರಾಜ್ ಮಾತನಾಡಿದರು.

ರಾಜ್ಯಾಧ್ಯಕ್ಷ ವಿ.ಆನಂದ್ ಮಾತನಾಡಿ ನಮ್ಮ ಭಾರತೀಯರಿಗೆ ಹಿಂದೆಂದಿಗಿಂತಲೂ ಈ ವರ್ಷದ ರಾಮನವಮಿ ಭಾರತೀಯರಿಗೆ ಅತ್ಯಂತ ವಿಶೇಷವಾದದ್ದು. ರಾಮಲಲ್ಲಾ ಪುನಃ ಅಯೋಧ್ಯೆಯಲ್ಲಿ ವಿರಾಜಮಾನನಾದ ವರ್ಷವಿದು.ಐದು ಶತಮಾನಗಳ ಹೋರಾಟ ನನಸಾದ ವರ್ಷವಿದು. ಸರ್ವರೂ ಸುಖ, ಶಾಂತಿ, ಸಮೃದ್ಧಿಯಿಂದ ಬದುಕುವಂತಹ ರಾಮರಾಜ್ಯ ನಮ್ಮದಾಗಲಿ  ಮತ್ತು ಪ್ರತಿಯೋಬ್ಬರ ಹಿಂದುಗಳು ಶ್ರೀರಾಮನ ಮಹಿಮೆಯ ಪುಸ್ತಕಗಳು ಓದಿ ತಮ್ಮ ತಮ್ಮ ಮಕ್ಕಳಿಗೆ ಶ್ರೀರಾಮನ ಬಗ್ಗೆ ತಿಳಿಸಿರಿ ಎಂದು ರಾಜ್ಯಾಧ್ಯಕ್ಷ ವಿ.ಆನಂದ್ ನೆರೆದಿದ್ದ ಸಾವಿರಾರು ಜನರಿಗೆ ಸಲಹೆ ನೀಡಿ ಅವರು ಮಾತನಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಸುಂಧರ್ ರಾಜನ್, ರವೀಂದ್ರ ಕುಮಾರ್ ಜಿಕೆಡಬ್ಲೂ ಲೇಔಟ್, ಗೋವಿಂದರಾಜು, ಕಾಂಗ್ರೆಸ್ ಮುಖಂಡ ಆನಂದ್, ಶಂಕರ್ ಫ್ರೆಂಡ್ಸ್ ಕಾಲೊನಿ, ಶ್ರೀಕಾಂತ್,ವಿಜಿ, ರವಿಕುಮಾರ್, ಗುಂಡಾ,ನಾಗಾ, ಶಿವಾ, ಮಹಿಳಾ ಮುಖ್ಯಸ್ಥೆ ಲತಾ ಕೆ.ಎಸ್. ಸೇರಿದಂತೆ ಅಂತಾರಾಷ್ಟ್ರೀಯ ಹಿಂದೂ ಪರಿಷತ್ ರಾಷ್ಟ್ರೀಯ ಬಜರಂಗದಳದ ಸಂಘದ ಪದಾಧಿಕಾರಿಗಳು ಸದಸ್ಯರು ಕಾರ್ಯಕರ್ತರು ಮತ್ತು ಶ್ರೀರಾಮನ ಭಕ್ತಾದಿಗಳು ಇದ್ದರು.

ವರದಿ:- ಅಯ್ಯಣ್ಣ ಮಾಸ್ಟರ್
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ