ಬಾಗಲಕೋಟೆ : ಜಿಲ್ಲೆಯಲ್ಲಿ ಎದುರಾಗಿರುವ ಭೀಕರ ಒನಹವೆ ಹಾಗೂ ಮಳೆಯ ಅಭಾವದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ ಇಂದು ಬರಪೀಡಿತ ಪ್ರದೇಶಗಳ ಸ್ಥಿತಿಗತಿ ಅರಿಯಲು ವೈಮಾಲಿಕ ವೀಕ್ಷಣೆ ನಡೆಸಿದರು ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯಲ್ಲಿ ಪ್ರಯಾಣಿಸಿದ ಸಿಎಂ ಒಣಗಿ ಹೋಗಿರುವ ಬೆಳೆಗಳು ಮತ್ತು ಕುಡಿಯುವ ನೀರಿನ ಅಭಾವ ತೀವ್ರತೆಯನ್ನು ಖುದ್ದಾಗಿ ಪರಿಶೀಲಿಸಿದರು
ಅನ್ನದಾತರಿಗೆ ಭರವಸೆ ನೀಡಿದ ಸಿಎಂ ಪರಿಶೀಲನೆ ನಡೆಸಿದ ನಂತರ ಮಾಧ್ಯಮಗಳಿಗೆ ಮಾಹಿತಿ ನೀಡಿ ರಾಜ್ಯದ್ಯಂತ ತಲೆದೋರಿರುವ ಆತಂಕಕಾರಿ ಬರ ಪರಿಸ್ಥಿತಿಯನ್ನು ಸರ್ಕಾರ ಜಾಗರೂಕತೆಯಿಂದ ಗಮನಿಸಿದೆ ಎಂದರು ಬೆಳೆ ನಷ್ಟದಿಂದ ಕಂಗಾಲಾಗಿರುವ ಅನ್ನದಾತರು ಹಾಗೂ ನೀರಿನ ಅಭಾವ ಎದುರಿಸುತ್ತಿರುವ ಸಾರ್ವಜನಿಕರಿಗೆ ಸಾಂತ್ವಾನ ಹೇಳಿದ ಮುಖ್ಯಮಂತ್ರಿಗಳು ಸಂಕಷ್ಟದಲ್ಲಿರುವ ಪ್ರತಿಯೊಬ್ಬರಿಗೂ ನೆರವಾಗಲು ಸರ್ಕಾರ ಬದ್ಧವಾಗಿದೆ ಎಂದು ಸ್ಪಷ್ಟಪಡಿಸಿದರು ಜೊತೆಗೆ ಬರ ಪರಿಹಾರ ಸಂಬಂಧಿತ ಅಗತ್ಯ ಎಲ್ಲಾ ತುರ್ತು ಕಾರ್ಯ ಸೂಚಿಗಳನ್ನು ತಕ್ಷಣವೇ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದರು. ಈ ವೈಮಾನಿಕ ಪರಿಶೀಲನ ಪಯಣದಲ್ಲಿ ವಿಧಾನಸಭೆಯ ಉಪಸಭಾಪತಿಯಾದ ಮಂಕಾಳ ವೈದ್ಯ ಹಾಗೂ ರಾಜ್ಯಸಭಾ ಸಂಸದ ಡಾ. ಜಿ ಸಿ ಚಂದ್ರಶೇಖರ ಸಿಎಂ ಜೊತೆಗೂಡಿ ಸ್ಥಳೀಯ ಮಟ್ಟದ ಸಮಸ್ಯೆಯ ವಿವರಗಳನ್ನು ಹಂಚಿಕೊಂಡರು ಶೀಘ್ರದಲ್ಲಿಯೇ ಸಂತ್ರಸ್ತ ಪ್ರದೇಶಗಳಿಗೆ ಪರಿಹಾರ ಹಾಗೂ ಕುಡಿಯುವ ನೀರಿನ ಪೂರೈಕೆ ಕಾಮಗಾರಿಗಳು ವೇಗವಾಗಿ ಪಡೆದುಕೊಳ್ಳುವ ನಿರೀಕ್ಷೆಯಿದೆ.
ವರದಿ : ಬಸವರಾಜ ಪೂಜಾರಿ


