Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ದಕ್ಷಿಣ ಕಾಶಿ ತಿಂಥಣಿ ಮೌನೇಶ್ವರ ಜಾತ್ರಾ ಮಹೋತ್ಸವ

Advertisement
ಸುರಪುರ: ಯಾದಗಿರಿ ಜಿಲ್ಲೆಯ ಸುರಪೂರ ತಾಲೂಕಿನ ಕೃಷ್ಣಾ ನದಿ ತೀರದಲ್ಲಿರುವ ತಿಂಥಣಿ ಮೌನೇಶ್ವರ ದೇವಸ್ಥಾನ ಪ್ರಸಿದ್ಧ ಹಿಂದೂ ಮುಸ್ಲಿಂ ಭಾವೈಕ್ಯತ ಕೇಂದ್ರವಾಗಿದೆ ೧೨ನೇ ಶತಮಾನದ ಸಂತ ಮೌನೇಶ್ವರರು ಇಲ್ಲಿ ಗುಹಾಪ್ರವೇಶ ಮಾಡಿದ್ದರು ಎನ್ನಲಾಗಿದ್ದು ಇದನ್ನು ದಕ್ಷಿಣ ಕಾಶಿ ಎಂದು ಕರೆಯುತ್ತಾರೆ ಪ್ರತಿ ವರ್ಷ ಭಾರತ ಹುಣ್ಣಿಮೆಯಂದು ೫ ದಿನಗಳ ಕಾಲ ಇಲ್ಲಿ ಭವ್ಯ ಜಾತ್ರೆ ನಡೆಯುತ್ತದೆ
ಅಲ್ಲಮಪ್ರಭುಗಳಂತೆ ಮಹಾನ್ ತಪಸ್ವಿಯಾಗಿದ್ದ ಮೌನೇಶ್ವರರ ತತ್ವಗಳು ಎಂದಿಗೂ ಹಿಂದೂ ಮುಸ್ಲಿಂ ಸಾಮರಸ್ಯದ ದಾರಿ ದೀಪವಾಗಿದೆ.
ಮೌನೇಶ್ವರರನ್ನು ಹಿಂದುಗಳು ಮೌನೇಶ್ವರ ಎಂದು ಮತ್ತು ಮುಸಲ್ಮಾನರು ಮೌನೊದ್ದೀನ್ ಎಂದು ಪೂಜಿಸುತ್ತಾರೆ.


ಪ್ರತಿ ವರ್ಷದಂತೆ ಈ ವರ್ಷವ ಮುನೇಶ್ವರ ಪಲ್ಲಕ್ಕಿ ಹೊರಬಂದು ಪುರವಂತರ ಹಾಗೂ ವಿವಿಧ ವಾದ್ಯಗಳೊಂದಿಗೆ ಗಂಗಾ ಸ್ಥಳಕ್ಕೆ ತೆರಳಿ ರಾತ್ರಿ ೧೧ ಗಂಟೆಗೆ ದೇವಸ್ಥಾನ ಪ್ರವೇಶಗೊಳ್ಳುತ್ತದೆ . ಜ ೩೦ ರಂದು ದ್ವಾದಶಿ ಪಲ್ಲಕ್ಕಿ ಸೇವೆ ಜ ೩೧ ರಂದು ತ್ರಯೋದಶಿ ಧಾರ್ಮಿಕ ಕಾರ್ಯಕ್ರಮ ಜವಳ ಸಾಮೂಹಿಕ ಉಪನಯನ ಮತ್ತು ಸಂಜೆ ಸಂಗೀತ ಕಾರ್ಯಕ್ರಮ ನಡೆಯಲಿದೆ. ಪೇ ೧ ರಂದು ಸಂಜೆ ೫ ಗಂಟೆಗೆ ಮೌನೇಶ್ವರರ ರಥೋತ್ಸವ ಭಕ್ತ ಸಮೂಹದೊಂದಿಗೆ ಅದ್ದೂರಿಯಾಗಿ ಜರುಗಲಿದೆ. ವಿವಿಧ ರಾಜ್ಯ ಮತ್ತು ಜಿಲ್ಲೆಗಳಿಂದ ಅಪಾರ ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಮೂಲಕ ಜಾತ್ರೆಗೆ ಆಗಮಿಸಿ ಕೃಷ್ಣಾ ನದಿಯಲ್ಲಿ ತೀರ್ಥ ಸ್ನಾನ ಗೈದು ನಂತರ ಮೌನೇಶ್ವರನ ದರ್ಶನ ಪಡೆಯುತ್ತಾರೆ.
ಪ್ರಶಾಂತಳಾಗಿ ಹರಿವ ಕೃಷ್ಣೆ ಜಗದ್ಗುರು ಮೌನೇಶ್ವರರು ಗುರು ಪುತ್ರ ಗಂಗಪ್ಪಯ್ಯನೊಂದಿಗೆ ವಿಚಾರಧಾರೆ ನಡೆಸುತ್ತಿರುವಾಗ ಕೃಷ್ಣಾ ನದಿಯು ತುಂಬಿ ಬೋರ್ಖರಯುತ ಪ್ರಭಾಸದಿಂದ ಹರಿಯುತ್ತಿತ್ತು ಗುರು ಶಿಷ್ಯರು ಮಾತನಾಡುವ ಮಾತುಗಳು ಸರಿಯಾಗಿ ಕೇಳಿಸಲಿಲ್ಲ ಆಗ ಮೌನೇಶ್ವರರು ಕೃಷ್ಣಾ ನದಿಯತ್ತ ಮುಖ ಮಾಡಿ ಸಿಟ್ಟಿನಿಂದ ಎಷ್ಟೊಂದು ಶಬ್ದ ನಿನ್ನದು ದೀರ್ಘಾವಧಿಯ ನಂತರ ತಂದೆ ಮಗ ಏನೋ ಮಾತನಾಡಬೇಕೆಂದು ಇಚ್ಚಿಸಿ ಕುಳಿತರೆ ನಿನ್ನ ಅಬ್ಬರವೇ ಕೇಳಿಸುತ್ತಿದೆ ಪ್ರಶಾಂತಳಾಗು ಎಂದು ಆಜ್ಞಾಪಿಸಿದಾಗ ತಕ್ಷಣ ಆರ್ಭಟ ಅಡಗಿ ಹೋಗಿ ನದಿಯ ಎಂದೆ ಒಂದು ಮೈಲಿ ಮುಂದೆ ಒಂದು ಮೈಲಿ ಶಬ್ದ ಮಾಡದೆ ಪ್ರಶಾಂತಳಾಗಿ ಹರಿಯ ತೊಡಗಿದಳು ಇದು ಜಗದ್ಗುರು ಮೌನೇಶ್ವರರ ಇತಿಹಾಸದಿಂದ ತಿಳಿದು ಬರುತ್ತದೆ

ವರದಿ: ಶೇಕಪ್ಪ ಮಾದರ
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ