Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ತವರು ಮನೆಗೆ ತೆರಳಿದ ದ್ಯಾಮವ್ವ : ಜಾತ್ರಾ ವಿಶೇಷ

Advertisement
 ಕುಷ್ಟಗಿ :- ಹನುಮಸಾಗರ ಗ್ರಾಮದಲ್ಲಿಅನಾದಿ ಕಾಲದಿಂದಲೂ ಮೂರು ವರ್ಷಗಳಿಗೊಮ್ಮೆ ನಡೆಸಿಕೊಂಡು ಬಂದಿರುವ ಗ್ರಾಮದೇವತೆ ದ್ಯಾಮವ್ವನ ಜಾತ್ರಾಮಹೋತ್ಸವ ಪ್ರಾರಂಭವಾಗಿದೆ. ಸೋಮವಾರ ರಾತ್ರಿ ಸಂತೆ ಬಜಾರದ ಗಂಡನ ಮನೆಯಿಂದ(ದ್ಯಾಮವ್ವನ ದೇವಸ್ಥಾನದಿಂದ) ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಕರಿಸಿದ್ದೇಶ್ವರ ಮಠದ ಮುಂದಿನ ರಸ್ತೆ ಕಲ್ಲೋಣಿಯ ತವರು ಮನೆಗೆ (ದ್ಯಾಮವ್ವನ ಕಟ್ಟೆಗೆ) ಡೊಳ್ಳು, ವಿವಿಧ ವಾದ್ಯ ವೈಭವ, ಬಾಣ ಬಿರುಸುಗಳೊಂದಿಗೆ ಕರೆ
ತರಲಾಯಿತು.

ಹನುಮಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಎಲ್ಲಾ ಜನಾಂಗದ ಎಲ್ಲಾ ಜನತೆ ಜಾತಿ, ಪಕ್ಷ ಬೇಧವಿಲ್ಲದೇ ಒಗ್ಗಟ್ಟಿನಿಂದ ಪಾಲ್ಗೊಂಡಿದ್ದರು.ಈ ಭಾಗದ ಸಂಸ್ಥಾನ ವಂಶಸ್ಥ ವೆಂಕಪ್ಪಯ್ಯ ಗೋಪಾಲಕೃಷ್ಣಪ್ಪಯ್ಯ ದೇಸಾಯಿ ಯಲಬುಣಚಿ ಕುಟುಂಬದವರು ಡೊಳ್ಳು, ವಾದ್ಯ ವೈಭವಗಳೊಂದಿಗೆ ಮರುದಿನ ಮಂಗಳವಾರ ಬೆಳ್ಳಿಗೆ ರೇಷ್ಮೆ ಸೀರೆ ಕುಪಸ, ನವಧಾನ ಹಣ್ಣು ಹಂಪಲುಗಳೊಂದಿಗೆ ತವರು ಮನೆಗೆ ತೆರಳಿ ಪೂಜೆ ನೆರವೇರಿಸಿ ದ್ಯಾಮವ್ವಗೆ ಉಡಿ ತುಂಬಿದರು.

ನಂತರ ಸುತ್ತಮುತ್ತಲಿನ ಗ್ರಾಮದ ಸಾರ್ವಜನಿಕರು, ಎಲ್ಲಾ ಸಮಾಜದ ಮಹಿಳೆಯರು ತಂಡೋಪತಂಡವಾಗಿ ಬಂದು ದ್ಯಾಮವ್ವಳ ಉಡಿ ತುಂಬುವ ಕಾರ್ಯ ಮಧ್ಯಾಹ್ನದ ವರೆಗೂ ಸಾಗಿತ್ತು. ಎಪ್ರಿಲ್ 10 ಶುಕ್ರವಾರದಂದು ನಂದಾದೀಪ ಹಾಕಲಾಗಿತ್ತು. ಸೋಮವಾರ ರಾತ್ರಿ ದ್ಯಾಮವ್ವಳನ್ನು ತವರು ಮನೆಗೆ ಕರೆದೊಯ್ದಿದ್ದು, ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗಿನ ಜಾವದವರೆಗೆ ಮೆರವಣಿಗೆ ಯೊಂದಿಗೆ ಮತ್ತೇ ಗಂಡನ ಮನೆಗೆ ಸಕಲ ವಾದ್ಯ ವೈಭವಗಳೊಂದಿಗೆ ಕರೆತರಲಾಯಿತು.

ಜಾತ್ರೆ ಪ್ರಾರಂಭವಾಗುತ್ತಿದ್ದಂತೆ ಒಂದು ವಾರ ಗ್ರಾಮದಲ್ಲಿ ಯಾರದೇ ಮನೆಯಲ್ಲಿ ಅಥವಾ ಗಿರಣಿಗಳಲ್ಲಿ ಕುಟ್ಟುವದು, ಬೀಸುವದನ್ನು ಮತ್ತು ರೊಟ್ಟಿ ಬಡಿಯುವದು, ಎತ್ತುಗಳ ಹೆಗಲಿಗೆ ಬಂಡಿ, ನೇಗಿಲು, ಗಳಿ ಕಟ್ಟುವದನ್ನೂ ಹಿಂದಿನ ಸಂಪ್ರದಾ ಯದ ಪ್ರಕಾರ ಸ್ಥಗಿತಗೊಳಿಸಲಾಗಿದೆ.ದಿ.16, ಗುರುವಾರ ದೇವಿಗೆ ಸಕಲ ಸದ್ಭಕ್ತರು ಪೂಜೆ ಸಲ್ಲಿಸಿ, ಕಾಯಿ, ಕರಪೂರ, ನೈವೇದ್ಯ ಅರ್ಪಿಸುವದು, ದಿ.17, ಶುಕ್ರವಾರ ಬೆಳಿಗ್ಗೆ 8-30 ಕ್ಕೆ ದೇವಿಯ ಉಡಿ ತುಂಬುವ ಕಾರ್ಯಕ್ರಮ ನೆಡೆಯಲಿದೆ.

ವರದಿ:- ಶಿವಕುಮಾರ ಕೆಂಭಾವಿಹಿರೇಮಠ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ