Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಭಾರತದ ಹೊಡೆತಕ್ಕೆ ಐವರೂ ಕುಖ್ಯಾತ ಭಯೋತ್ಪಾದಕರೇ ಫಿನಿಷ್ 

Advertisement
ಪಾಕಿಸ್ತಾನ : ಪಹಲ್ಗಾಮ್‌ ಉಗ್ರರ ದಾಳಿಗೆ ಪ್ರತಿಯಾಗ ಭಾರತ ಆಪರೇಷನ್‌ ಸಿಂಧೂರ ಕಾರ್ಯಾಚರಣೆ ಘೋಷಿಸಿದೆ. ಮೇ. 7 ರಂದು ಕೈಗೊಂಡ ಈ ಕಾರ್ಯಾಚರಣೆಯಲ್ಲಿ ಮೃತರಾದ ಉಗ್ರರ ಗುರುತನ್ನ ಭಾರತ ಬಹಿರಂಗಪಡಿಸಿದೆ.

ಈ ಐವರೂ ಸಹ ಕುಖ್ಯಾತ ಭಯೋತ್ಪಾದಕರಾಗಿದ್ದು ವಿವಿಧ ಸಂಘಟನೆಗಳಿಗೆ ಸೇರಿದವರಾಗಿದ್ದಾರೆ.ಮುದಸ್ಸರ್‌ ಖಾದಿಯಾನ್‌ ಖಾಸ್‌ ಅಲಿಯಾಸ್‌ ಮುದಸ್ಸರ್‌ ಲಷ್ಕರೆ ತೈಬಾ ಸಂಘಟನೆಗೆ ಸೇರಿದ ಉಗ್ರನಾಗಿರುವ ಈತ ಜಾಗತಿಕ ಭಯೋತ್ಪಾದಕನೆಂದು ಕುಖ್ಯಾತನಾದ ಹಫೀಜ್‌ ಅಬ್ದುಲ್‌ ರೌಫ್‌ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ. ಈತನ ಸಾವಿಗೆ ಪಾಕ್‌ ಸೇನೆಯ ಲೆಫ್ಟಿನೆಂಟ್‌ ಜನರಲ್‌ ಮತ್ತು ಪಂಜಾಬ್‌ ಪೊಲೀಸ್‌ ಐಜಿ ಹಾಜರಾಗಿದ್ದರು.

ಹಫೀಜ್‌ ಮುಹಮ್ಮದ್‌ ಜಮೀಲ್‌ ಜೈಷ್‌ ಎ ಮುಹಮ್ಮದ್‌ ಸಂಘನೆಯ ಸದಸ್ಯ. ಈತ ಉಗ್ರ ಮೌಲಾನಾ ಮಸೂದ್‌ ಅಝರ್‌ ನ ಮೊದಲನೇ ಅಕ್ಕನ ಗಂಡ.

ಮೊಹಮ್ಮದ್‌ ಯೂಸುಫ್‌ ಅಝರ್‌ ಜೈಷ್‌ ಎ ಮೊಹಮ್ಮದ್‌ ಉಗ್ರ. ಈತನೂ ಸಹ ಮೌಲಾನಾ ಮಸೂದ್‌ ಅಝರ್‌ ನ ಭಾವ.ಐಸಿ-814 ಹೈಜಾಕಿಂಗ್‌ ಪ್ರಕರಣದಲ್ಲಿ ಭಾರತದಲ್ಲಿ ವಾಂಟೆಡ್‌.

ಖಾಲಿದ್‌ ಅಲಿಯಾಸ್‌ ಅಬು ಆಕಾಶ ಲಷ್ಕರೆ ತೈಬಾದ ಉಗ್ರ. ಜಮ್ಮು ಕಾಶ್ಮೀರದಲ್ಲಿ ನಡೆದ ಉಗ್ರ ದಾಳಿಗಳ ರೂವಾರಿ. ಅಕ್ರಮ ಶಸ್ತ್ರಾಸ್ತ್ರ ಸಾಗಣೆ ಪ್ರಕರಣದಲ್ಲಿ ಆಫ್ಗಾನಿಸ್ತಾನದಲ್ಲಿಯೂ ಸಹ ವಾಂಟೆಡ್‌. ಫೈಸಲಾಬಾದ್‌ ನಲ್ಲಿ ನಡೆದ ಈತನ ಅಂತ್ಯಸಂಸ್ಕಾರದ ವೇಳೆ ಪಾಕ್‌ ನ ಹಿರಿಯ ಸೇನಾಧಿಕಾರಿಗಳು ಹಾಗೂ ಫೈಸಲಾಬಾದ್‌ ನ ಡೆಪ್ಯುಟಿ ಕಮಿಷನರ್‌ ಭಾಗಿಯಾಗಿದ್ದರು.

ಮೊಹಮ್ಮದ್‌ ಹಸ್ಸನ್‌ ಖಾನ್‌ ಜೈಷ್‌ ಎ ಮುಹಮ್ಮದ್‌ ಸಂಘಟನೆಯ ಉಗ್ರ. ಪಿಒಕೆ ಭಾಗದ ಜೈಷ್‌ ಎ ಮುಹಮ್ಮದ್‌ ಸಂಘಟನೆಯ ಕಮಾಂಡರ್‌ ಮಫ್ತಿ ಅಸ್ಘರ್‌ ಖಾನ್‌ ಕಾಶ್ಮೀರಿಯ ಮಗ. ಜಮ್ಮು ಕಾಶ್ಮೀರದಲ್ಲಿ ಉಗ್ರರನ್ನು ನೆಲೆಯೂರಿಸುವ ಚಟುವಟಿಕೆಯಲ್ಲಿ ಈತ ಪ್ರಮುಖ ಪಾತ್ರ ವಹಿಸುತ್ತಿದ್ದ.
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ