Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಶ್ರೀ ಉಟಕನೂರು ಮರಿಬಸವಲಿಂಗ ತಾತನವರ ವೈಭವಯುತ ರಥೋತ್ಸವ

Advertisement
ಸಿರುಗುಪ್ಪ : -ತಾಲೂಕಿನ ನಿಟ್ಟೂರು ಗ್ರಾಮದಲ್ಲಿ ದವನದ(ಹಂಪಿ) ಹುಣ್ಣಿಮೆ ನಿಮಿತ್ತ ಶ್ರೀ ಉಟಕನೂರು ಮರಿಬಸವಲಿಂಗ ತಾತನವರ ರಥೋತ್ಸವವು ವಿವಿಧ ವಾದ್ಯಗಳ ನಾದದೊಂದಿಗೆ ಗ್ರಾಮದ ವೈಭವಯುತವಾಗಿ ಜರುಗಿತು.



ಜಾತ್ರಾ ನಿಮಿತ್ತ ದೇವಸ್ಥಾನದಲ್ಲಿ ವಿವಿಧ ಹೋಮಹವನಗಳು ಜರುಗಿದ್ದು, ಶ್ರೀ ಮರಿಬಸವಲಿಂಗಸ್ವಾಮಿಯ ಮೂರ್ತಿಗೆ ಪಂಚಾಮೃತಾಭಿಷೇಕ ಮಾಡಿ ಫಲಪುಷ್ಪಗಳು, ಆಭರಣಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.

ಪ್ರತಿ ವರ್ಷಕೊಮ್ಮೆ ನಡೆಯುವ ಜಾತ್ರಾ ನಿಮಿತ್ತ ಗ್ರಾಮದ ಎಲ್ಲಾ ಮನೆಗಳಲ್ಲಿ ಶ್ರೀ ಹನುಮಾನ್ ಜಯಂತಿ ಮತ್ತು ರಥೋತ್ಸವದ ಸಂಭ್ರಮ ಕಂಡುಬಂದಿತು. ಭಕ್ತರು ದೇವಸ್ಥಾನದಲ್ಲಿ ಎಡೆ ನೈವೇದ್ಯ ಅರ್ಪಿಸಿ ರಥಕ್ಕೆ ಹೂಹಣ್ಣು ಎಸೆದು ಭಕ್ತಿಯಿಂದ ನಮಿಸಿದರು.



 

ಕಳೆದ ಕೆಲವು ವರ್ಷಗಳ ಹಿಂದೆ ಗ್ರಾಮದ ಕೆಲವು ಮನೆಗಳಲ್ಲಿ ಹಸಿರು ಮತ್ತು ಕಂದು ಬಣ್ಣದಿಂದ ಕೂಡಿದ ಹಾಗೂ ನಿಧಾನಗತಿಯಲ್ಲಿ ಸಾಗುತ್ತಿರುವ ಚಿಕ್ಕದಾದ ಹಾವಿನ ಮರಿಗಳು ಹೆಚ್ಚಾಗಿ ಕಂಡುಬಂದ ನಂತರ ಗ್ರಾಮಸ್ಥರು ಕೆಲವು ಪಂಡಿತರಲ್ಲಿ ವಿಚಾರಿಸಿದಾಗ ಅವುಗಳನ್ನು ಹೊಡೆಯಬಾರದು, 21 ದಿನಗಳ ಕಾಲ ಪೂಜೆ ಸಲ್ಲಿಸಿ ಲಿಂಗೈಕ್ಯಗೊಂಡ ನಂತರ ಗದ್ದುಗೆಯೊಳಗೆ ಬಿಡಬೇಕೆಂದು ಸಲಹೆ ನೀಡಿದ್ದರು.

ಅದರಂತೆ ಗ್ರಾಮಸ್ಥರು ಗದ್ದುಗೆ ಸ್ಥಾಪಿಸಿ ಪೂಜೆ ಸಲ್ಲಿಸುತ್ತಾ ಬಂದಿದ್ದರಿಂದ ಗ್ರಾಮಕ್ಕೆ ಒಳಿತಾಗಿದೆ. ಕಾಲಕ್ರಮೇಣ ಉಟಕನೂರು ಶ್ರೀ ಮರಿಬಸವಲಿಂಗ ತಾತನವರ ಜಾತ್ರೆಯನ್ನು ನಡೆಸಿಕೊಂಡು ಬರಲಾಗುತ್ತಿದೆಂದು ಗ್ರಾಮಸ್ಥರು ತಿಳಿಸಿದರು.

ಸಾಯಂಕಾಲ 6ಕ್ಕೆ ಆರಂಭವಾಗುವ ರಥೋತ್ಸವದಲ್ಲಿ ಎಲ್ಲಾ ಜನಾಂಗದವರು ಭಾಗಿಯಾಗಿ ಶ್ರೀ ಎದುರು ಬಸವಣ್ಣ ದೇವಸ್ಥಾನದವರೆಗೆ ರಥವನ್ನು ಎಳೆದೊಯ್ಯುವ ಭಕ್ತರು ನಂತರ ದೇವಸ್ಥಾನ ಪಕ್ಕದಲ್ಲಿ ಸಮಾಪ್ತಿಗೊಂಡಿತು.

ವರದಿ ಶ್ರೀನಿವಾಸ ನಾಯ್ಕ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ