ಬಿಸಿಲಿನ ತಾಪಕ್ಕೆ ಅತಿಯಾದ ದೇಹ ಅತೀಯಾಗಿ ಬೆವರುವುದರಿಂದ ನೀರಿನ ಕೊರತೆ ಉಂಟಾಗುತ್ತೆ. ಸಾಕಷ್ಟು ನೀರು ಕುಡಿದು ದೇಹದಲ್ಲಿ ನೀರಿನ ಕೊರತೆ ಕಡಿಮೆಯಾಗದಂತೆ ನೋಡುಕೊಳ್ಳಬೇಕು. ಇದರಿಂದ ರಕ್ತದೊತ್ತಡವನ್ನು ಕಡಿಮೆ ಆಗೋದನ್ನು ಸಹ ತಪ್ಪಿಸಬಹುದು. ಅಧೀಕ ನೀರಿನ ಸೇವನೆಯಿಂದ ದೇಹ ತಂಪಾಗಿಡುವುದು ಅಗತ್ಯ.
- ಅತೀಯಾದ ಬಿಸಿಲಿನಲ್ಲಿ ಹೋಗುವುದು ಹೃದಯ ರಕ್ತನಾಳದ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
- ಬೇಸಿಗೆಯಲ್ಲಿ ಅತಿಯಾಗಿ ಕರಿದ ಆಹಾರ ಪದಾರ್ಥಗಳನ್ನು ಮಿತವಾಗಿ ಬಳಸಿ, ಇವು ಹೆಚ್ಚುವರಿ ಕೊಬ್ಬನ್ನು ಒದಗಿಸುತ್ತದೆ, ಇದು ಹೃದಯದ ಸಮಸ್ಯೆಗೆ ಕಾರಣವಾಗುತ್ತದೆ.

- ಬೇಸಿಗೆಯಲ್ಲಿ ಸಂಪೂರ್ಣವಾಗಿ ವ್ಯಾಯಾಮ ಬಿಡುವುದು ನಿಮ್ಮ ಹೃದಯಕ್ಕೆ ಹಾನಿಕಾರಕ. ನಿಯಮಿತ ವ್ಯಾಯಾಮ ಹೃದಯದ ಸ್ಥಿತಿಯನ್ನು ಸುಧಾರಿಸುತ್ತದೆ.

- ಬೇಸಿಗೆಯಲ್ಲಿ ಸಾಮಾನ್ಯವಾಗಿ ಬೆವರಿನ ಮೂಲಕ ನೀರಿ ದೇಹದಿಂದ ಹೊರಹೋಗುತ್ತದೆ. ದೇಹಕ್ಕೆ ನೀರಿನ ಕೊರತೆಯಾಗದಂತೆ ನೊಡಿಕೊಳ್ಳಬೆಕು. ಇದು ದೇಹದ ಸಮತೋಲಿತ ರಕ್ತ ಪರಿಚಲನೆಗೆ ಅಡ್ಡಿಯಾಗಿ ಹೃದಯಾಘಾತದ ಸಂಭವಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ.

- ಬೇಸಿಗೆಯಲ್ಲಿ, ಅನೇಕರು ಅತಿಯಾದ ಬಿಯರ್ ಕುಡಿಯುತ್ತಾರೆ. ಇದು ರಕ್ತದೊತ್ತಡವನ್ನು ಹೆಚ್ಚಿಸಿ, ಹೃದಯರಕ್ತನಾಳದ ಸಮಸ್ಯೆಗಳಿಗೆ ಕಾರಣವಾಗಬಹುದು.
- ತಂಪಾದ ನೀರು ಕುಡಿದರೆ ನಮ್ಮ ದೇಹದಲ್ಲಿ ತ್ವರಿತ ಪ್ರತಿಕ್ರಿಯೆ ಉಂಟಾಗಬಹುದು, ಕೆಲವೇ ಕ್ಷಣಗಳಲ್ಲಿ ಹೃದಯಾಘಾತದಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ನೀವು ಬೆವರುತ್ತಿದ್ದರೆ ತಣ್ಣೀರು ಕುಡಿಯೋದನ್ನು ತಪ್ಪಿಸಬೇಕು. ತಣ್ಣಿರನ್ನು ಕುಡಿಯುವ ಮೊದಲು ದೇಹದ ತಾಪಮಾನವನ್ನು ಸಾಮಾನ್ಯಗೊಳಿಸಬೇಕು.

