Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಇಲ್ಲಿ ನಡೆಯುತ್ತೆ ಮಹಿಳೆಯರ ಮಾರಾಟ : ರೇಟ್ ಫಿಕ್ಸ್ ಮಾಡಿ ಖರೀದಿ ಮಾಡುತ್ತಾರೆ ಜನ 

Advertisement
ಭಾರತದಲ್ಲಿ ಮಹಿಳೆಯರ ಸುರಕ್ಷತೆಯು ಪ್ರಶ್ನಾರ್ತಕವಾಗಿರುವ ಸಮಯದಲ್ಲಿ, ದೇಶದ ಕೆಲವು ಭಾಗಗಳಲ್ಲಿ ಅನುಸರಿಸುತ್ತಿರುವ ಅನಿಷ್ಟ ಪದ್ಧತಿಗಳು ಮಹಿಳೆಯರನ್ನು ವಿಶೇಷವಾಗಿ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಪ್ರಯತ್ನಗಳನ್ನು ದುರ್ಬಲಗೊಳಿಸುತ್ತಿವೆ.

ಮಧ್ಯಪ್ರದೇಶದ ಶಿವಪುರಿ ಗ್ರಾಮದಲ್ಲಿ ಪ್ರಚಲಿತದಲ್ಲಿರುವ 'ಧಾಡಿಚಾ' ಎಂಬ ಅಂತಹ ಹೀನ ಅಭ್ಯಾಸವಿದೆ.ಇಲ್ಲಿ ಮಹಿಳೆಯರನ್ನು ಮಾರುಕಟ್ಟೆಯ ಸರಕುಗಳಂತೆ ಕೊಳ್ಳಲಾಗುತ್ತದೆ ಮತ್ತು ಮಾರಲಾಗುತ್ತದೆ.


‘ಡೀಲ್’ಗಳ ಆಧಾರದ ಮೇಲೆ ಮಹಿಳೆಯರನ್ನು ‘ಬಾಡಿಗೆ’ ಪಡೆಯಲು ದೂರದೂರುಗಳಿಂದ ಜನರು ಈ ಮಾರುಕಟ್ಟೆಗೆ ಬರುತ್ತಾರೆ. ಬಾಡಿಗೆ ಅವಧಿಯನ್ನು ಒಪ್ಪಂದದ ನಿಯಮಗಳಿಂದ ನಿರ್ಧರಿಸಲಾಗುತ್ತದೆ.


ಪುರುಷರು ತಾವು ಆಯ್ಕೆ ಮಾಡಿದ ಯಾವುದೇ ಮಹಿಳೆಗೆ ಬೆಲೆಯನ್ನು ನಿಗದಿಪಡಿಸಿದ ನಂತರ ಅವಳನ್ನು ನೋಡಿ , ಒಪ್ಪಿದ ಮೊತ್ತವನ್ನು ಪಾವತಿಸಿದ ನಂತರ ಕರೆದುಕೊಂಡು ಹೋಗುತ್ತಾರೆ. ಸಾಮಾನ್ಯವಾಗಿ ಬಡ ಕುಟುಂಬಗಳು ತಮ್ಮ ಮಹಿಳಾ ಸದಸ್ಯರನ್ನು ಮಾರಾಟ ಮಾಡಲು ಇಲ್ಲಿವೆ ಬರುತ್ತವೆ.


ಪುರುಷರು ವಿವಿಧ ಕಾರಣಗಳಿಗಾಗಿ ಈ ಮಾರುಕಟ್ಟೆಯಿಂದ ಮಹಿಳೆಯರನ್ನು ಖರೀದಿಸುತ್ತಾರೆ. ಕೆಲವರು ತಮ್ಮ ಮನೆಗಳಲ್ಲಿರುವ ವೃದ್ಧರನ್ನು ನೋಡಿಕೊಳ್ಳಲು ಖರೀದಿಸಿದರೆ, ಇನ್ನು ಕೆಲವರು ಸೂಕ್ತ ವಧು ಸಿಗದ ಕಾರಣ ಖರೀದಿ ಮಾಡುತ್ತಾರೆ. ವರದಿಗಳ ಪ್ರಕಾರ, ‘ಡೀಲ್’ ಅನ್ನು ನಿರಾಕರಿಸುವ ಹಕ್ಕು ಮಹಿಳೆಯರಿಗೆ ಇದೆ.


ಈ ಮಾರುಕಟ್ಟೆಯಿಂದ ಖರೀದಿಸಿದ ಯಾವುದೇ ಮಹಿಳೆಗೆ ಔಪಚಾರಿಕ ಒಪ್ಪಂದದ ಬೆಲೆಯನ್ನು ನಿಗದಿಪಡಿಸಲಾಗುತ್ತದೆ. ಕನಿಷ್ಠ 15,000 ರೂ.ಗಳಿಂದ ಲಕ್ಷಗಳವರೆಗೆ ಅವರ ಬೆಲೆ ಹೋಗಬಹುದು.


ಮಹಿಳೆಯರಿಗಿಂತ ಕನ್ಯೆಯರು ಹೆಚ್ಚಿನ ಬೆಲೆಯನ್ನು ಪಡೆಯುತ್ತಾರೆ. ಒಬ್ಬ ಪುರುಷನು ಮಹಿಳೆಯನ್ನು ಒಂದು ವರ್ಷ ಅಥವಾ ಕೆಲವು ತಿಂಗಳುಗಳಿಗೆ ಬಾಡಿಗೆಗೆ ಪಡೆಯಬಹುದು. ವರದಿಯಂತೆ 10 ರೂ.ನಿಂದ ಆರಂಭವಾಗುವ ಸ್ಟಾಂಪ್ ಪೇಪರ್ ಸೇರಿದಂತೆ ಕಾಗದ ಪತ್ರಗಳಲ್ಲಿ ಅಗ್ರಿಮೆಂಟ್ ಸಿದ್ಧಪಡಿಸಲಾಗುತ್ತದೆ.

Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ