
ಹುಕ್ಕೇರಿ ಮತ ಕ್ಷೇತ್ರದ ಶಾಸಕರಾದ ಶ್ರೀ ನಿಖಿಲ್ ಉಮೇಶ್ ಕತ್ತಿಯವರು ಮಾತನಾಡಿದರು ಈ ಪ್ರಚಾರ ಸಮಯದಲ್ಲಿ ತಮ್ಮ ಚಿಕ್ಕಪ್ಪನಿಗೆ ರಮೇಶ್ ಕತ್ತಿ ಅವರಿಗೆ ಚುನಾವಣೆ ಸ್ಪರ್ಧಿಸಲು ಟಿಕೆಟ್ ನೀಡಿಲವೆಂದು ನಮ್ಮೆಲ್ಲರಿಗೂ ಬಹಳ ನೋವಾಗಿದೆ ಆದರೂ ಕೂಡಾ ಯಾವುದೇ ಬೇರೆ ಪಕ್ಷಕ್ಕೆ ಹೋಗುವಂತ ಸನ್ನಿವೇಶವಿಲ್ಲ ಯಾಕೆಂದರೆ ನಮ್ಮ ದೇಶಕ್ಕಾಗಿ ಒಳ್ಳೆ ರೀತಿಯ ದುಡಿಯುವ ಪಕ್ಷವೆಂದರೆ ಭಾರತೀಯ ಜನತಾ ಪಕ್ಷ ಬರುವ ದಿನಗಳಲ್ಲಿ ನಮ್ಮ ಚಿಕ್ಕಪ್ಪರಾದ ರಮೇಶ್ ಕತ್ತಿ ಅವರಿಗೆ ಒಳ್ಳೆಯ ಸ್ಥಾನ ಮಾನ ನೀಡುತ್ತದೆ ಎಂದು ಪಕ್ಷದ ಮೇಲೆ ನಮ್ಮಗೆ ವಿಶ್ವಾಸವಿದೆ ಎಂದು ಹೇಳಿದರು.
ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಅಪಾರವಾದ ಕೊಡುಗೆ ನೀಡಿರುವುದು ಇವು ಎಲ್ಲವನ್ನು ಮತದಾರರಿಗೆ ತಿಳಿಸಿ ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳಿದರು.ಈ ಸಂದರ್ಭದಲ್ಲಿ ಸತೀಶ್ ಅಪ್ಪಾಜಿ, ರಾಜೇಶ್ ನೆರ್ಲಿ, ರಾಜೇಂದ್ರ ಪಾಟೀಲ್, ಗಜಾನಂದ ಕೊಳ್ಳಿ, ಸತ್ಯಪ್ಪಾ ನಾಯಿಕ, ಹಾಗೂ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.
ವರದಿ:-ಶಿವಾಜಿ ಎನ್ ಬಾಲೇಶಗೋಳ

