Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಸಾವಯುವ ಕೃಷಿಗೆ ಸಾವಿಲ್ಲ ಮಹೇಶ್ ಪಾಟೀಲ

Advertisement
ಚಿಕ್ಕೋಡಿ:- ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ  ತಂತ್ರಜ್ಞಾನ ಹಾಗೂ ವೈಜ್ಞಾನಿಕ ಯುಗದಲ್ಲಿ ದಾಪುಗಾಲು ಇಡುತ್ತಿರುವ ರೈತರಿಗೆ ಸಾವಯುವ ಕೃಷಿ ಒಂದು ವರದಾನವಾಗಿದೆ.ಸಾವಯುವ ಕೃಷಿಗೆ ಸಾವಿಲ್ಲ ಎಂದು ನ್ಯಾಯವಾದಿ ಹಾಗೂ ಪ್ರಗತಿಪರ ಸಾವಯುವ ಕೃಷಿಕರಾದ ಮಹೇಶ್ ಪಾಟೀಲ್ ಹೇಳಿದರು.

ಅವರು ಕೆ ಎಲ್ ಇ ಪದವಿ ಮಹಾವಿದ್ಯಾಲಯ ಶಿರಗುಪ್ಪಿ ಎನ್ ಎಸ್ ಎಸ್ ಘಟಕದ ವತಿಯಿಂದ ಹಮ್ಮಿಕೊಂಡ ದತ್ತು ಗ್ರಾಮ ಇಂಗಳಿಯಲ್ಲಿ 5 ನೇ ದಿನದ ಶಿಬಿರದಲ್ಲಿ ಸಾವಯವ ಕೃಷಿ ಜಾಗೃತಿ ಅಭಿಯಾನ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.ಸಾಯುವ ಕೃಷಿ ಅತ್ಯಂತ ಸರಳ ಹಾಗೂ ಅಗ್ಗವಾಗಿದೆ. ಪರಿಸರ ಸಮತೋಲನವನ್ನ ಸರಿಪಡಿಸುವುದಲ್ಲದೆ ಸುಸ್ಥಿರ ಕೃಷಿ ವ್ಯವಸ್ಥೆಯಾಗಿದ್ದು ಅದು ಭೂಮಿಯನ್ನು ದೀರ್ಘಕಾಲಿಕವಾಗಿ ಫಲವತ್ತತೆಯನ್ನು ಕಾಪಾಡುತ್ತದೆ.



ವಿಷ ಮುಕ್ತ ಭಾರತ ನಿರ್ಮಾಣ ಮಾಡುವುದಾದರೆ ಎಲ್ಲರೂ ಸಾವಯುವ ಕೃಷಿಯ ಕಡೆಗೆ ಹೆಜ್ಜೆ ಹಾಕಬೇಕಾಗಿದೆ. ಇಂದಿನ ಒತ್ತಡದ ಬದುಕಿನಲ್ಲಿ ರೈತ ಬಹುಬೇಗ ಶ್ರೀಮಂತನಾಗಲು ಹಪಹಪಿಸುತ್ತಾನೆ.ಬಹುತೇಕ ಭೂಮಿಯು ಇಂದು ಸವಳು ಜವಳು ಅಧಿಕವಾಗಲು ರೈತರು ಬೇಕಾಬಿಟ್ಟಿಯಾಗಿ ಗದ್ದೆಗಳಲ್ಲಿ  ವಿಪರೀತ ನೀರು ಪೂರೈಸುವುದು ಅಧಿಕ ಕ್ರಿಮಿನಾಶಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ನಾಶಗೊಂಡು ನೀರಿಕ್ಷೆಗೆ ತಕ್ಕಂತೆ ಕೃಷಿಯಿಂದ  ಲಾಭ ಬಾರದೇ ಇರುವುದು ಒಂದು ಮುಖ್ಯ ಕಾರಣವಾಗಿದೆ.

ಕೃಷಿಯಲ್ಲಿ ಸಮಗ್ರ ಸುಧಾರಣೆ ತರಬೇಕಾದರೆ ಪ್ರಸ್ತುತ ಸಾವಯುವ ಕೃಷಿಯ ಕುರಿತು ನಾವೆಲ್ಲರೂ ವ್ಯಾಪಕವಾಗಿ ಅರಿತುಕೊಂಡು ಪ್ರಾಯೋಗಿಕವಾಗಿ ಅನುಷ್ಠಾನ ತರಬೇಕಾದ ಅಗತ್ಯ ಇದೆ ಎಂದು ವಿಸ್ತೃತವಾಗಿ ವಿಶ್ಲೇಷಣೆ ಮಾಡಿದರು.ರಾಯಬಾಗದ ಪತಂಜಲಿ ಕರ್ನಾಟಕ ಸ್ಟೇಟ್ ಹೆಡ್ ಕಿಸಾನ್ ಸೇವಾ ಸಮಿತಿಯ ರಾಯಬಾಗದ ಸಂಜಯ್ ಎಸ್ ಕುಷ್ಟಗಿಗಾರ ಅವರು ಪೀಠಿಕಾ ನುಡಿಯಾಡಿದರು.ಘನ ಅಧ್ಯಕ್ಷತೆ ವಹಿಸಿದ್ದ ಪದವಿ ಪೂರ್ವ ಮಹಾವಿದ್ಯಾಲಯದ ಉಪನ್ಯಾಸಕ ಪ್ರೊ ಬಿ ಆರ್ ನರವಾಡೆ ಮಾತನಾಡಿ  ಸಾವಯುವ ಕೃಷಿಕ ಮನಸ್ಸು ಮಾಡಿದರೆ ಜೀರೋದಿಂದ ಹೀರೊ ಆಗಬಹುದು.

ಇದರಲ್ಲಿ ವಿಪರೀತ ಬಂಡವಾಳ ಹಾಕದೆ ಯಥೇಚ್ಛವಾಗಿ ಹಾಗೂ ನೈಸರ್ಗಿಕವಾಗಿ ಸಿಗುವ ಸಂಪನ್ಮೂಲಗಳನ್ನು ಚೆನ್ನಾಗಿ ಸದುಪಯೋಗಪಡಿಸಿಕೊಳ್ಳುವ ಕಲೆ  ಒಂದಿದ್ದರೆ ಸಾವಯುವ ಕೃಷಿಯಲ್ಲಿ ಕ್ರಾಂತಿಕಾರಿ ಹೆಜ್ಜೆಗಳನ್ನಿರಿಸಲು ಸಾಧ್ಯ. ಸಾವಯುವ ಕೃಷಿಯನ್ನು ಎಲ್ಲಿಯವರೆಗೆ  ನಾವು ಚೆನ್ನಾಗಿ ಅಳವಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ  ಕೃಷಿಯಲ್ಲಿ ವಿಪರೀತ ಬದಲಾವಣೆ ಮಾಡಲು ಸಾಧ್ಯವಿಲ್ಲ.

ಸಾವಯುವ ಕೃಷಿಯನ್ನು ಚೆನ್ನಾಗಿ ಅಳವಡಿಸಿಕೊಂಡು ಇದರ ಲಾಭವನ್ನು ಪಡೆದಿದ್ದೇನೆ ಎಂದು ತಮ್ಮ ಸ್ವಾನುಭವಗಳನ್ನು ಸೊಗಸಾಗಿ ಅಭಿಮಾನದಿಂದ ಹಂಚಿಕೊಂಡರು.ಮಹಾವಿದ್ಯಾಲಯದ ಪ್ರಾಚಾರ್ಯರಾದ  ಪ್ರೊ. ಎಸ್ ಬಿ ಪಾಟೀಲ, ರಾಷ್ಟ್ರೀಯ ಸೇವಾ ಯೋಜನಾ ಘಟಕದ ಕಾರ್ಯಕ್ರಮ ಅಧಿಕಾರಿ ಎಂ ಎಸ್ ಕೌಲಗುಡ್ದ್ ವಾಣಿಜ್ಯ ವಿಭಾಗದ ಸಂಯೋಜಕರು ಹಾಗೂ ಚುಟುಕು ಕವಿ ಪ್ರೊ ಎಲ್ ಎಸ್ ವಂಟಮೂರೆ ವೇದಿಕೆಯ ಮೇಲೆ ಉಪಸ್ಥಿತರಿದ್ದರು.ಕು. ಸೌಜನ್ಯ ಮಗದುಮ್ ಹಾಗೂ ಸಂಗಡಿಗರು ಎನ್ಎಸ್ಎಸ್ ಗೀತೆ ಹಾಡಿದರು.ಕು.  ಸ್ವಾತಿ ಚರಾಟೆ ಹಾಗೂ ಸಂಗಡಿಗರು ಭಾವೈಕ್ಯತಾ ಗೀತೆ ಹಾಡಿದರು. ಕು ಸಮೀಕ್ಷಾ ಶಿರಗುಪ್ಪೆ ಸ್ವಾಗತಿಸಿದರು.ಕು ಸಂಧ್ಯಾ ಚೌಗಲೆ ನಿರೂಪಿಸಿದರು. ಕು. ಆಕಾಶ್ ಹವಾಲ್ದಾರ ಇವರು ವಂದಿಸಿದರು.

ವರದಿ :-ರಾಜು ಮುಂಡೆ 
Advertisement
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಜಿಂಬಾಬ್ವೆ ವಿರುದ್ಧ ಸುಲಭವಾಗಿ ಗೆದ್ದ ಭಾರತ ಕಾಂಗ್ರೆಸ್ ತಿಗಣೆಗಳು ಹೋಗಿ ಜಿರಳೆಗಳ ಜೊತೆ ಸೇರಿಕೊಂಡಿದ್ದಾರೆ : ಪ್ರತಾಪ್ ಸಿಂಹ ನಂದಿನಿ ತುಪ್ಪದ ಬೆಲೆ ಪ್ರತಿ ಕೆಜಿಗೆ 15 ರೂ. ಹಾಗೂ ಬೆಣ್ಣೆಯ ದರ ಪ್ರತಿ ಕೆಜಿಗೆ 22 ರೂ. ಹೆಚ್ಚಳ ಚೊಚ್ಚಲ ಪಂದ್ಯದ ಮೊದಲ ಎಸೆತದಲ್ಲಿಯೇ ಮಯಾಂಕ ಯಾದವ್‌ಗೆ ವಿಕೆಟ್  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಕೆರೆ ಅಂಗಳದಲ್ಲಿ ಗಿಡ ನಾಟಿ ಕಾರ್ಯಕ್ರಮ ಜಾತ್ರೆಗೆ ಹೋಗುವ ವಿಚಾರಕ್ಕೆ ದಂಪತಿ ನಡುವೆ ಜಗಳ : ದೂದಗಂಗಾ ನದಿಗೆ ಹಾರಿದ ಪತ್ನಿ ಸಾರ್ವಜನಿಕ ಸ್ಥಳಗಳಲ್ಲಿ ಪಾರಿವಾಳಗಳಿಗೆ ಆಹಾರ ಹಾಕುವಂತಿಲ್ಲ : ರಾಜ್ಯ ಸರ್ಕಾರ ಆದೇಶ ಹೆಣ್ಣು ಮಗು ಎಂಬ ಕಾರಣಕ್ಕೆ ನೀರಿನ ಸಂಪ್ ಗೆ ಎಸೆದು ಕೊಂದು ಪಾಪಿ ತಂದೆಸುಳ್ಳು ಸುದ್ದಿ ಪ್ರಕಟ : ಸಂಪಾದಕ ಆನಂದ್ ಕೌಶಿಕ್ 6 ತಿಂಗಳು ಸಜೆ ಮತ್ತು 1 ಲಕ್ಷ ರೂ. ದಂಡ ವಿಧಿಸಿದ ನ್ಯಾಯಾಲಯಬಾಗಲಕೋಟೆ ಬೇಕರಿ ತಪಾಸಣೆ ತಾಜಾ ಎಣ್ಣೆ ಬಳಸಿ : ಸಿಲಿಂಡರ್ ಹೊರಗಿಡಿ ಉಪಲೋಕಾಯುಕ್ತರ ಎಚ್ಚರಿಕೆ