ಆಲಮಟ್ಟಿಯ ರಾಕ್ ಉದ್ಯಾನದ ಸಿಲ್ವರ್ ಲೇಕ್ ನಲ್ಲಿ ದೋಣಿ ವಿಹಾರಕ್ಕೆ ಶನಿವಾರ ಮರು ಚಾಲನೆ ನೀಡಿ ಅವರು ಮಾತನಾಡಿದರು.

10 ವರ್ಷಗಳಿಂದ ಬಂದಾಗಿದ್ದ ದೋಣಿ ವಿಹಾರಕ್ಕೆ ಇದ್ದ ಎಲ್ಲಾ ತೊಡಕುಗಳನ್ನು ನಿವಾರಿಸಿ ಚಾಲನೆ ನೀಡಲಾಗಿದೆ, ಇದರಿಂದ ಪ್ರವಾಸಿಗರಿಗೆ ಅನುಕೂಲವಾಗಲಿದೆ, ಪ್ರತಿಯೊಬ್ಬರಿಗೂ 50 ರೂ ದಿಂದ 100 ರೂ ವರೆಗೆ ಪ್ರವೇಶ ದರವಿದೆ ಎಂದರು.
ನವ್ಹಂಬರ್ ನಿಂದ ಜೂನ್ ವರೆಗೂ ಆಲಮಟ್ಟಿಯಲ್ಲಿ ಸಹಸ್ರಾರು ಪ್ರವಾಸಿಗರು ಆಲಮಟ್ಟಿಗೆ ಬರುತ್ತಾರೆ, ಮೈಸೂರಿನ ಕೆಆರ್ ಎಸ್ ಬಿಟ್ಟರೇ ಉತ್ತರಕರ್ನಾಟಕಕ್ಕೆ ಆಲಮಟ್ಟಿ ಎಂದರು.
[video width="848" height="480" mp4="http://bharathvaibhav.com/wp-content/uploads/2026/01/VID-20260124-WA0006.mp4"][/video]
ಆಲಮಟ್ಟಿಯನ್ನು ಮನೋರಂಜನಾ ತಾಣದ ಜತೆಗೆ ವಿಜ್ಞಾನ ಕಾರ್ಕ್ ಇದ್ದು, ಇದು ಶೈಕ್ಷಣಿಕ ಪ್ರವಾಸಕ್ಕೂ ಅನುಕೂಲವಾಗಲಿದೆ.
ಪ್ರವಾಸಿ ತಾಣವಾಗಿ ರೂಪಗೊಳ್ಳಲು ಇನ್ನಷ್ಟು ಚಟುವಟಿಕೆಗಳು ಆರಂಭಿಸಲು ಉದ್ದೇಶಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಎಸ್.ಆರ್. ಪಾಟೀಲ, ಮುಖ್ಯ ಎಂಜಿನಿಯರ್ ಡಿ.ಬಸವರಾಜ, ಸೂಪರಿಂಟೆಂಡಿಂಗ್ ಎಂಜಿನಿಯರ್ ಅಭಿಮನ್ಯು, ತಾರಾಸಿಂಗ್ ದೊಡಮನಿ, ಡಿಎಫ್ ಓ ಎನ್.ಕೆ. ಬಾಗಾಯತ್, ಮಹೇಶ ಪಾಟೀಲ, ಅಸಿಸ್ಟಂಟ್ ಕಮಾಂಡೆಂಟ್ ಈರಪ್ಪ ವಾಲಿ, ಆಲಮಟ್ಟಿ ಜಲಾಶಯದ ಭದ್ರತಾ ಉಸ್ತುವಾರಿ ಶಿವಲಿಂಗ ಕುರೆನ್ನವರ, ಮತ್ತೀತರರು ಇದ್ದರು.
ವರದಿ : ಅಲಿ ಮಕಾನದಾರ

