ನಗರದ ಪ್ರವಾಸಿ ಮಂದಿರದಲ್ಲಿರುವ ಶಾಸಕರ ಭವನದಲ್ಲಿ ಮಾದಿಗ ಸಮುದಾಯದ ಮುಖಂಡರ ಜೊತೆ ಸಭೆ ಏರ್ಪಡಿಸಿ, ಸ್ಥಳ ವೀಕ್ಷಣೆ ಮಾಡಿದ ಸಂದರ್ಭದಲ್ಲಿ ಮಾತನಾಡಿ ನಿಮ್ಮೆಲ್ಲರ ಬಹುದಿನದ ಬೇಡಿಕೆ ಈಡೇರಿದೆ ನಗರದ ರೈಲ್ವೆ ಸ್ಟೇಷನ್ ಹತ್ತಿರ ಇರುವ ಗಯಾರಾಣ ಭೂಮಿ ಸರ್ವೆ ನಂಬರ್ 643/1* ಕ್ಷೇತ್ರ 4 ಎಕರೆ ಜಮೀನಿನ ಪೈಕಿ 1-00 ಎಕರೆ ಜಮೀನನ್ನು ಬಾಬು ಜಗಜೀವನ್ ರಾಮ್ ಕಲ್ಯಾಣ ಭವನ ನಿರ್ಮಾಣಕ್ಕೆ ರಾಜ್ಯ ಸರ್ಕಾರ ದಿಂದ ಅಂದಾಜು 4 ಕೋಟಿ ರೂ ವೆಚ್ಚದಲ್ಲಿ ಕಲ್ಯಾಣ ಭವನ ನಿರ್ಮಾಣ ಮಾಡಲಾಗುತ್ತದೆ ಇದಕ್ಕೆ 1-00 ಎಕರೆ ಭೂಮಿ ಮಂಜುರಾಗಿದ್ದು ಆ ಕಾಮಗಾರಿಗೆ ಅತಿ ಶೀಘ್ರದಲ್ಲಿ ಚಾಲನೆ ನೀಡಬೇಕಾಗಿದೆ.

ಭವನದ ರೂಪರೇಶಗಳನ್ನು ಸಿದ್ದಪಡಿಸಿಕೊಳ್ಳಲಾಗುವುದು ಎಂದು ಮಾದಿಗ ಸಮುದಾಯದ ಮುಖಂಡರ ಜೊತೆ ಚರ್ಚಿಸಿ ಒಂದು ವೇಳೆ ಭವನ ನಿರ್ಮಾಣಕ್ಕೆ ಅನುದಾನ ಕೊರತೆ ಉಂಟಾದರೆ ಹೆಚ್ಚುವರಿ ಅನುದಾನ ಪಡೆದು ಭವನ ನಿರ್ಮಿಸಲಾಗುವುದು ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಾದಿಗ ಸಮುದಾಯದ ಮುಖಂಡರು ಶಾಸಕ ಹಂಪನಗೌಡರಿಗೆ ಗೌರವಪೂರ್ವಕವಾಗಿ ಸನ್ಮಾನಿಸಿದರು ಈ ಸಂದರ್ಭದಲ್ಲಿ: ಪಂಚ ಗ್ಯಾರಂಟಿ ಅಧ್ಯಕ್ಷ ಅನಿಲ್ ಕುಮಾರ್. ವೈ ಮುಖಂಡರಾದ ಅಲ್ಲಮಪ್ರಭು ಪೂಜಾರ್. ಅಂಬ್ರೋಸ್. ಡಿಎಚ್. ಪೂಜಾರ್. ವೆಂಕಟೇಶ್ ಗಿರಿಜಾಲಿ. ಹೆಚ್. ಸುಲಂಗಿ. ದುರುಗೇಶ್ ಬಾಲಿ. ಹನುಮಂತಪ್ಪ ಪನ್ನೂರು.ಅಶೋಕ ಮೆಗಲ್ಮನಿ. ಶೆಟ್ಟಿ ಬಾಬು ಇನ್ನು ಅನೇಕರು ಇದ್ದರು.
ವರದಿ:ಬಸವರಾಜ ಬುಕ್ಕನಹಟ್ಟಿ

