Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬ ಆಚರಣೆ

Advertisement
*ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಂ ಹಬ್ಬ ಆಚರಣೆ*

ದೇವದುರ್ಗ:- ತ್ಯಾಗ ಮತ್ತು ಬಲಿದಾನದ ಪ್ರತೀಕವಾದ ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತವಾದ ಮೊಹರಮ್ ಹಬ್ಬವನ್ನು ಜಾತಿ ಮತ ಪಂಥ ಬೇಧವಿಲ್ಲದೆ ನಾವೆಲ್ಲರೂ ಒಂದೇ ಎನ್ನುವ ಮನೋಭಾವನೆಯನ್ನು ಹೊಂದಿರುವ ಮೊಹರಂ ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ತಾಲೂಕಿನ ಬೂದಿನಾಳ ಗ್ರಾಮದಲ್ಲಿ ಆಚರಿಸಲಾಯಿತು.

 

ಜೂಲೈ 14 ರಂದು ರಾತ್ರಿ ಇಮಾಮ್ ಖಾಸಿಂ ಸಾಬ್ ಮತ್ತು ಹಸೇನ್ ಹುಸೇನ್ ಭಾಷಾ ಸವಾರಿ ಅತ್ಯಂತ ಸಡಗರ ಸಂಭ್ರಮದಿಂದ ಜರುಗಿತು. ಇಮಾಮ್ ಖಾಸಿಂ ಸಾಬ್ ದೇವರನ್ನು ಮೋಹಿನುದ್ದಿನ್ ಸಾಬ್ ಪೂಜಾರಿ ದೇವರನ್ನು ಹಿಡಿದುಕೊಂಡಿದ್ದರೆ, ಹಸೇನ್ ಹುಸೇನ್ ಭಾಷಾ ಸವಾರಿ ಕರಿಯಪ್ಪ ಪೂಜಾರಿ ದೇವರನ್ನು ಹಿಡಿದುಕೊಂಡು ರವಿವಾರದಂದು ಸಾಯಂಕಾಲ ಸನಾಯ, ಹಲಗೆ ಗಳೊಂದಿ ಸಾಯಂಕಾಲ ಊರಿನ ದೇವರ ಭಾವಿ ಹತ್ತಿರ ಇರುವ ಹಜರತ್ ಗೋಕುಲ್ ಸಾಬ್ ದರ್ಗಾಕ್ಕೆ ಊರಿನ ಗುರು ಹಿರಿಯರು, ಎಲ್ಲಾರೂ ಸೇರಿಕೊಂಡು ಹೋಗಿ ಪೂಜೆ ಮಾಡಿಸಿದರು.

 

ರಾತ್ರಿಎಲ್ಲಾ ಯುವಕರು ಅಲಾಯ ಹೆಜ್ಜೇಗಳನ್ನು ಕುಣಿದರು, ಭವ್ಯ ಸಾಂಸ್ಕೃತಿಕ ಪರಂಪರೆಯಲ್ಲಿ ಹೆಸರುವಾಸಿಯಾದ ಕಳ್ಳರ ವೇಷ,ಸೀರೆಯನ್ನು ಉಟ್ಟುಕೊಂಡು, ಕರಡಿ ಕುಣಿತ ಮುಂತಾದ ರೀತಿಯಲ್ಲಿ ಆಲಯಾ ಕುಣಿದು ಕುಪ್ಪಳಿಸಿ ಸಂಬ್ರಮ ಮೆರೆದರು.

 

ಜುಲೈ 16 ರಂದು ಮೌಲಾಲಿ ಸಾಬ್ ಸವಾರಿ ರಾಜಸಾಬ್ ಸಾಬ್ ದೇವರನ್ನು ಹಿಡಿದರು,ಅತ್ಯಂತ ವಿಜೃಂಭಣೆಯಿಂದ ಕತಲ ರಾತ್ರಿ (ಗಂಧರಾತ್ರಿ) ಆಚರಿಸಲಾಯಿತು,ಮೊಹರಂ ಕೊನೆಯ ದಿನವಾದ ಬುಧವಾರ ಸಂಜೆ ದಫನ್ ಕಾರ್ಯಕ್ಕೆ ಆಲಂ ದೇವರುಗಳು ಅಪಾರ ಜನಗಳ ಮದ್ಯೆ ಅತ್ಯಂತ ಅದ್ದೂರಿಯಾಗಿ ಮೆರವಣಿಗೆ ಮೂಲಕ ತೆರೆ ಎಳೆಯಲಾಯಿತು.ಮೊಹರಂ ಹಬ್ಬವನ್ನು ವೀಕ್ಷಿಸಲು ಗ್ರಾಮದ ಸಹಸ್ರ ಸಂಖ್ಯೆಯಲ್ಲಿ ಗುರುಹಿರಿಯರು,ಪುರುಷರು,ಮಹಿಳೆಯರು,ಯುವಕರು ಹಾಗೂ ಚಿಕ್ಕ ಮಕ್ಕಳು ಹೊಸ ಹೊಸ ಬಟ್ಟೆಗಳನ್ನು ಹಾಕಿಕೊಂಡು ಆಗಮಿಸಿ ಆಲಂ ದೇವರುಗಳ ಕೃಪೆಗೆ ಪಾತ್ರರಾದರು.

 

ಈ ಮೊಹರಂ ಹಬ್ಬದ ಕಾರ್ಯಕ್ರಮದಲ್ಲಿ ಗ್ರಾಮದ ಗುರುಹಿರಿಯರು,ಊರಿನಪ್ರಮುಮುಖಂಡರು,ಗ್ರಾ.ಪಂ.ಅಧ್ಯಕ್ಷರು,ಸದಸ್ಯರು,ಯುವಕರ ಬಳಗದವರು,ಹಿಂದೂ ಮುಸ್ಲಿಂ ಭಾವೈಕ್ಯತೆಯ ನಾವೇಲ್ಲಾರು ಒಂದೇ ಎಂದು ಹಬ್ಬವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಿದರು,

 

ಈ ಸಂದರ್ಭದಲ್ಲಿ ಬಸವರಾಜಪ್ಪ ಗೌಡ ಪೋ ಪಾಟೀಲ,ಬಸನಗೌಡ ಮಾಲಿ ಪಾಟೀಲ, ಖಾಸಿಂ ಸಾಬ್, ನೂರಸಾಬ್ , ನಬೀಸಾಬ್, ಬಾವಸಾಬ್, ಫಕೀರ್ ಸಾಬ್,ಮಲ್ಲಿಕಾರ್ಜುನ ನಾಯಕ, ಶರೀಫ್ ಸಾಬ್, ಶಿವರಾಜ್ ನಾಯಕ, ಬಸವರಾಜ ಪೂಜಾರಿ,ಹನುಮಗೌಡ, ವೀರೇಶ್,ಇಮಾಮ್, ಮೌನೇಶ್ ,ಬಸಲಿಂಗಪ್ಪ ,ನಾಗಪ್ಪ ಮುಂತಾದವರು ಸೇರಿದಂತೆ ಗ್ರಾಮಸ್ಥರೆಲ್ಲರೂ ಭಾಗವಹಿಸಿದ್ದರು.

ವರದಿ : ಮಂಜುನಾಥ ರಜಪೂತ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ