ಘಟನಾ ಸ್ಥಳಕ್ಕೆ ಎಸ್ಪಿ ಪ್ರದೀಪ ಗುಂಟೆ,ತಹಸೀಲ್ದಾರ್ ಅಂಜುಮ್ ತಬಸುಮ,ಡಿವೈಎಸ್ಪಿ ಮಾಡೋಳಪ್ಪ,ಇಒ ದೀಪಿಕಾ ನಾಯ್ಕರ ಸೇರಿ ಅಧಿಕಾರಿಗಳ ತಂಡ ಆಗಮಿಸಿ ಘಟನಾ ಸ್ಥಳವನ್ನು ಪರಿಶೀಲನೆ ನಡೆಸುತ್ತಿದ್ದಾರೆ.
ಘಟನಾ ಸ್ಥಳದಲ್ಲಿ ಜನರು ಓಡಾಟ ಮಾಡದಂತೆ ಸುತ್ತಲೂ ಬ್ಯಾರಿಕೆಡ್ ಅಳವಡಿಸಲಾಗಿದೆ.ಬಾಂಬ್ ಡಿಸ್ಪೋಜಲ್ ಸ್ಕ್ವೇಡ್ ಅಧಿಕಾರಿಗಳು,ನ್ಯಾಯ ವಿಜ್ಞಾನ ಪ್ರಯೋಗಲಾಯ ಅಧಿಕಾರಿಗಳು,ಅಗ್ನಿ ಶಾಮಕ ದಳ ಸಿಬ್ಬಂದಿಗಳು,ಜೇಸ್ಕಾಂ ಅಧಿಕಾರಿಗಳು ಕೂಡ ಹಾಜರಿದ್ದು ಪರಿಶೀಲನೆಗೆ ಸಹಕಾರ ನೀಡುತ್ತಿದ್ದಾರೆ.

ಇದೇನು ಮೊದಲ ಬಾರಿಗೆ ನಡೆದ ಘಟನೆವೇನಲ್ಲ,ಈ ಹಿಂದೆ ಕೂಡ ಇದೆ ರೀತಿಯಲ್ಲಿ ಸ್ಫೋಟವಾಗಿತ್ತು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.
ಸಾಧ್ಯ ಸ್ಫೋಟಕ್ಕೆ ನಿಖರವಾದ ಮಾಹಿತಿ ಸಿಕ್ಕಿಲ್ಲ.ತನಿಖೆ ಮುಂದುವರಿದಿದೆ.ಮೊಳಕೇರಾ ಗ್ರಾಮದ ಜನರು ಸಾಧ್ಯ ಭಯಭೀತರಾಗಿದ್ದು,ಸಂಪೂರ್ಣ ತನಿಖೆಗೆ ಒತ್ತಾಯ ಮಾಡುತ್ತಿದ್ದಾರೆ.
ವರದಿ:ಸಜೀಶ ಲಂಬುನೋರ್

