Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ನಂತರ ವೈದ್ಯರ ನಿರ್ಲಕ್ಷದಿಂದ....

Advertisement
ಸಿಂಧನೂರು :- ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹೆರಿಗೆ ನಂತರ ವೈದ್ಯರ ನಿರ್ಲಕ್ಷದಿಂದ ಮೂವರು ಬಾಣಂತಿಯಾರಾದ, ಆರ್ ಎಚ್. 3 ಕ್ಯಾಂಪಿನ ಮೌಸಂಬಿ ಮಂಡಲ್, ಉದ್ಬಾಳ್. ಜೆ. ಗ್ರಾಮದ ಚಂದ್ರಕಲಾ, ಅಂಕುಶದೊಡ್ಡಿಯ ರೇಣುಕಮ್ಮ, ಇವರು ಹೆರಿಗೆ ಬಳಿಕ ಸರಿಯಾದ ಚಿಕಿತ್ಸೆ ಸಿಗದೇ ಸಾವನಪ್ಪಿದ್ದ ಹಿನ್ನೆಲೆಯಲ್ಲಿ ವೈದ್ಯರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಮೃತರ ಕುಟುಂಬಕ್ಕೆ ಪರಿಹಾರ ನೀಡಬೇಕೆಂದು ನಮ್ಮ ಕರ್ನಾಟಕ ಸೇನೆ ಸಂಘಟನೆ ತಹಸೀಲ್ ಕಚೇರಿ ಮುಂಭಾಗದಲ್ಲಿ ನಡೆಸಿರುವ ಧರಣಿ ನಾಲ್ಕನೇ ದಿನಕ್ಕೆ ಮುಂದುವರೆದ ಹಿನ್ನೆಲೆ ಸೋಮವಾರ ಧರಣಿ ಸ್ಥಳಕ್ಕೆ ಲಿಂಗಸುಗೂರು ಸಹಾಯಕ ಆಯುಕ್ತ ಬಸಣ್ಣ ಕಲ್ ಶೆಟ್ಟಿ, ಹಾಗೂ ರಾಯಚೂರು ಡಿಎಚ್ಒ, ಬರುವುದಾಗಿ ತಿಳಿಸಿದರು ಅವರು ಬರುವ ಸಮಯ ಮೀರಿದ್ದರಿಂದ ಪ್ರತಿಭಟನಾಕಾರರು ರಸ್ತೆ ಗಿಳಿದು ವೈದ್ಯರ ವಿರುದ್ಧ ಘೋಷಣೆ ಕೂಗುತ್ತಾ ರಸ್ತೆ ಮಧ್ಯೆ ಪ್ರತಿಭಟನಾಕಾರರು ಕುಳಿತ ಹಿನ್ನೆಲೆ ಸ್ವಲ್ಪ ಸಮಯ ಟ್ರಾಫಿಕ್ ಜಾಮ್ ಕಂಡು ಬಂತು ಡಿವೈಎಸ್ಪಿ. ಬಿಎಸ್. ತಳವಾರ್. ಪಿ ಐ. ದುರ್ಗಪ್ಪ ನವರು ಪ್ರತಿಭಟನಾಕಾರರ ಮನವೂಲಿಸಿ ಧರಣಿ ಸ್ಥಳಕ್ಕೆ ಹೋಗಲು ಸೂಚಿಸಿದರು.



ಸ್ವಲ್ಪ ಸಮಯದಲ್ಲಿ ಸಹಾಯಕ ಆಯುಕ್ತ ಬಸಣ್ಣ ಕಲ್ ಶೆಟ್ಟಿ, ತಹಸಿಲ್ದಾರ್ ಅರುಣ್ ಎಚ್. ದೇಸಾಯಿ ಡಿಎಚ್ಒ. ಧರಣಿ ಸ್ಥಳಕ್ಕೆ ಬಂದು ರಾಜ್ಯ ಕಾರ್ಯಧ್ಯಕ್ಷರಾದ ಉಮೇಶ್ ಗೌಡ ಅರಳಹಳ್ಳಿ ಹಾಗೂ ತಾಲೂಕು ಘಟಕ ಅಧ್ಯಕ್ಷ ಮಂಜುನಾಥ್ ಗಾಣಿಗೇರ್ ಇವರ ಮೂಲಕ ಆಸ್ಪತ್ರೆ ಅವ್ಯವಸ್ಥೆ ವೈದ್ಯರ ನಿರ್ಲಕ್ಷ ತನ ಕೇಳಿ ಬಂತು ಧರಣಿಯಲ್ಲಿ ನಿರತರದ ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವುದರ ಮೂಲಕ ಮೃತರ ಕುಟುಂಬಕ್ಕೆ ಸ್ಥಳೀಯ ಶಾಸಕರ ಗಮನಕ್ಕೆ ತಂದು ಸೂಕ್ತವಾದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿ ಮೃತ ಬಾಣಂತಿಯರ ಸಾವಿಗೆ ಕಾರಣ ಯಾರೆಂದು ತನಿಖೆ ಮಾಡಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.



ಈ ಸಂದರ್ಭದಲ್ಲಿ ರಾಜ್ಯ ಕಾರ್ಯಧ್ಯಕ್ಷರಾದ ಉಮೇಶ್ ಗೌಡ ಅರಳಹಳ್ಳಿ, ತಾಲೂಕ ಘಟಕ ಅಧ್ಯಕ್ಷರಾದ ಮಂಜುನಾಥ್ ಗಾಣಿಗೇರ್, ಜಿಲ್ಲಾ ಸಂಚಾಲಕ ಹುಸೇನ್ ಬಾಷಾ, ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ, ಜಿಲ್ಲಾ ಯುವ ಘಟಕ ಪ್ರ ಕಾರ್ಯದರ್ಶಿ ಬೂದೇಶ್ ಮರಾಠ, ತಾಲೂಕು ಉಪಾಧ್ಯಕ್ಷ ಗದ್ಯಪ್ಪ, ಪ್ರವೀಣ್ ಧೂಮತಿ, ಮಂಜು, ಪ್ರಶಾಂತ.ಅಶೋಕ. ಮಹಮ್ಮದ್. ಸಂತೋಷ ಸ್ವಾಮಿ. ಸುರೇಶ್ ಅನೇಕರಿದ್ದರು,

 
ವರದಿ:-   ಬಸವರಾಜ ಬುಕ್ಕನಹಟ್ಟಿ
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ