
ಸ್ವಲ್ಪ ಸಮಯದಲ್ಲಿ ಸಹಾಯಕ ಆಯುಕ್ತ ಬಸಣ್ಣ ಕಲ್ ಶೆಟ್ಟಿ, ತಹಸಿಲ್ದಾರ್ ಅರುಣ್ ಎಚ್. ದೇಸಾಯಿ ಡಿಎಚ್ಒ. ಧರಣಿ ಸ್ಥಳಕ್ಕೆ ಬಂದು ರಾಜ್ಯ ಕಾರ್ಯಧ್ಯಕ್ಷರಾದ ಉಮೇಶ್ ಗೌಡ ಅರಳಹಳ್ಳಿ ಹಾಗೂ ತಾಲೂಕು ಘಟಕ ಅಧ್ಯಕ್ಷ ಮಂಜುನಾಥ್ ಗಾಣಿಗೇರ್ ಇವರ ಮೂಲಕ ಆಸ್ಪತ್ರೆ ಅವ್ಯವಸ್ಥೆ ವೈದ್ಯರ ನಿರ್ಲಕ್ಷ ತನ ಕೇಳಿ ಬಂತು ಧರಣಿಯಲ್ಲಿ ನಿರತರದ ಮೃತರ ಕುಟುಂಬಕ್ಕೆ ಸಾಂತ್ವನ ಹೇಳುವುದರ ಮೂಲಕ ಮೃತರ ಕುಟುಂಬಕ್ಕೆ ಸ್ಥಳೀಯ ಶಾಸಕರ ಗಮನಕ್ಕೆ ತಂದು ಸೂಕ್ತವಾದ ಪರಿಹಾರ ಕೊಡಿಸುವುದಾಗಿ ಭರವಸೆ ನೀಡಿ ಮೃತ ಬಾಣಂತಿಯರ ಸಾವಿಗೆ ಕಾರಣ ಯಾರೆಂದು ತನಿಖೆ ಮಾಡಿ ಅವರ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ರಾಜ್ಯ ಕಾರ್ಯಧ್ಯಕ್ಷರಾದ ಉಮೇಶ್ ಗೌಡ ಅರಳಹಳ್ಳಿ, ತಾಲೂಕ ಘಟಕ ಅಧ್ಯಕ್ಷರಾದ ಮಂಜುನಾಥ್ ಗಾಣಿಗೇರ್, ಜಿಲ್ಲಾ ಸಂಚಾಲಕ ಹುಸೇನ್ ಬಾಷಾ, ಜಿಲ್ಲಾ ಉಪಾಧ್ಯಕ್ಷ ರಾಘವೇಂದ್ರ, ಜಿಲ್ಲಾ ಯುವ ಘಟಕ ಪ್ರ ಕಾರ್ಯದರ್ಶಿ ಬೂದೇಶ್ ಮರಾಠ, ತಾಲೂಕು ಉಪಾಧ್ಯಕ್ಷ ಗದ್ಯಪ್ಪ, ಪ್ರವೀಣ್ ಧೂಮತಿ, ಮಂಜು, ಪ್ರಶಾಂತ.ಅಶೋಕ. ಮಹಮ್ಮದ್. ಸಂತೋಷ ಸ್ವಾಮಿ. ಸುರೇಶ್ ಅನೇಕರಿದ್ದರು,
ವರದಿ:- ಬಸವರಾಜ ಬುಕ್ಕನಹಟ್ಟಿ

