
ಕೋಲ್ಕತ್ತಾದ ಆರ್.ಜಿ.ಕರ್ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರತ ಯುವ ವೈದ್ಯೆಯ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಖಂಡಿಸಿ ದೇಶಾದ್ಯಂತ ಮಹಿಳಾ ಮೋರ್ಚಾ ವತಿಯಿಂದ ಪ್ರತಿಭಟನೆಗೆ ಬೆಂಬಲ ನೀಡಿ ಪ್ರತಿಭಟಸಿದರು.
ಆದರೆ ದಿ:-09.08.2024 ರಂದು ಪಶ್ಚಿಮ ಬಂಗಾಳದ ಕೋಲ್ಕತ್ತಾದ ಆರ್.ಜಿ.ಕರ್ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಯುವ ವೈದ್ಯೆಯವರನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಇಡೀ ವೈದ್ಯ ಸಮೂಹಕ್ಕೆ ಮಾಡಿದ ಘೋರ ಅಪರಾಧವಾಗಿದ್ದು ,ಕಾನೂನಿನ ವೈಫಲ್ಯವನ್ನು ಎತ್ತಿ ಹಿಡಿಯುತ್ತದೆ. ಅಲ್ಲದೇ ಈ ಪ್ರಕರಣವು ವೈದ್ಯರುಗಳ ಮನೋಸೈರ್ಯ ಕುಗ್ಗುವಂತೆ ಮಾಡಿದ್ದು. ಇದನ್ನು ಸರ್ಕಾರಿ ವೈದ್ಯಾಧಿಕಾರಿಗಳ ಸಂಘವು ಗಂಭಿರವಾಗಿ ಖಂಡಿಸಿದರು
ಈ ಸಂಧರ್ಭದಲ್ಲಿ ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷರಾದ ಶ್ರೀಮತಿ ಶಾಲಿನಿ ಶಿವರಾಜ್ ಈಳಿಗೇರ್, ಜಿಲಾ ಮಹಿಳಾ ಮೋರ್ಚಾ ಕಾರ್ಯದರ್ಶಿ ಆದ ಶ್ರೀಮತಿ ರಾಧಿಕಾ ಧೂತ್,ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಆದ ಶ್ರೀಮತಿ ಸುಮಿತ್ರಾ ಹಣಮಗೇರಿ,ಶ್ರೀಮತಿ ಸುನಿತಾ ತಿಮ್ಮನಗೌಡರ್, ಅಕ್ಷತಾ ನಂದರಗಿ, ಮಂಜುಳಾ ಲ್ಯಾವಿ, ಮಾದೇವಿ ಶಿರಸಂಗಿ, ಶೀಲಾ ಬಿಂಗೆ, ದೇವಕಮ್ಮ ದಂಡವತಿ, ಶೇಕಮ್ಮ ಕಲ್ಲೂರ್, ಗೋದಾವರಿ ಕಡಕೋಳ, ಡ್ರಾಕ್ಷಯಣಿ ಮುರುಡಿ, ತಿಪ್ಪವ್ವ ಹಕ್ಕಿ, ಶಂಕ್ರಮ್ಮ ನಂಜಿ, ಪಾರ್ವತಿ ನಂಜಿ, ಜಯಶ್ರೀ ಬೆನ್ನೂರ್ ಹಾಗೂ ಎಲ್ಲಾ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.
ವರದಿ:- ಮಂಜುನಾಥ ಕಲಾದಗಿ

