Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಮುಧೋಳ್ ಗ್ರಾಮವನ್ನು ತಾಲೂಕ ಮಾಡುವಂತೆ ಸಚಿವ ಶರಣಪ್ರಕಾಶ ಪಾಟೀಲರಿಗೆ ಮನವಿ ಪತ್ರ.

Advertisement
ಸೇಡಂ:- ತಾಲೂಕಿನ ಮುಧೋಳ್ ಗ್ರಾಮ ಪಂಚಾಯಿತಿಯು ತಾಲೂಕಿನ ಅತಿ ದೊಡ್ಡ ಗ್ರಾಮ ಪಂಚಯತಿಯಾಗಿದ್ದು.ಈ ಗ್ರಾಮಕ್ಕೆ ಸುಮಾರು 56 ಹಳ್ಳಿಗಳು ಮತ್ತು 40 ತಾಂಡಗಳ ಜನರು ಈ ಮುಧೋಳ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುತ್ತವೆ.



ಈ ಗ್ರಾಮದಲ್ಲಿ ವಿಶೇಷ ತಹಶೀಲ್ದಾರರು ನೇಮಿಸಿದ್ದಾರೆ.ದೂರದ ಗ್ರಾಮಗಳಾದ, ಇಟ್ಕಲ್, ಬುರಗಪಲ್ಲಿ, ಯಾನಗುಂದಿ, ಕಾನಗಡ್ಡ, ಮೇದಕ್, ಶಕಲಾಸಪಲ್ಲಿ, ಮೋತಕಪಲ್ಲಿ, ಗಾಢದಾನ, ತೋಳಮಾಮಿಡಿ, ಕೊಲಕುಂದ, ರಿಬ್ಬನಪಲ್ಲಿ, ಲಿಂಗಂಪಲ್ಲಿ, ಜಾಕನಪಲ್ಲಿ, ಮತ್ತು ಇನ್ನಿತರ ತಾಂಡ ಕಂದಾಯ ಗ್ರಾಮಗಳು ಮತ್ತು ಗ್ರಾಮಗಳ ಜನರಿಗೆ ಸೇಡಂ ಹೋಗಿ ಬರಲು 120ಕಿಮೀ ಆಗುವುದರಿಂದ ಅನಾನುಕೂಲವಾಗಿದೆ.
ಸರಿಯಾದ ಸಮಯಕ್ಕೆ ವಾಹನಗಳ ವ್ಯವಸ್ಥೆ ಇರುವುದಿಲ್ಲ. ಆದ್ದರಿಂದ ಮುಧೋಳ್, ಆಡಕಿ, ಕೋಲಾಕುಂದ, ಮೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳನ್ನು ಒಳಗೊಂಡ ನಮ್ಮ ಮುಧೋಳ್ ಗ್ರಾಮಕ್ಕೆ ವಿಶೇಷ ತಹಶೀಲ್ದಾರರ ನೇಮಕಾತಿಯನ್ನು ಮಾಡಿ ನಮ್ಮ ಹಿಂದುಳಿದ ಗಡಿಭಾಗದ ಜನರಿಗೆ ಅನುಕೂಲ ಮಾಡಬೇಕು ಮತ್ತು ಮುಧೋಳ್ ಗ್ರಾಮ ಪಂಚಾಯಿತಿಯಲ್ಲಿ ಒಟ್ಟು 24 ಗ್ರಾಮ ಪಂಚಾಯಿತಿ ಸದಸ್ಯರಿದ್ದು ಇದನ್ನು ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೆ ಏರಿಸಬೇಕು ಎಂದು ತಾಲೂಕ ಹೋರಾಟ ಸಮಿತಿ ಅಧ್ಯಕ್ಷರಾದ ಅಶೋಕ್ ಪಿರಂಗಿ ಅವರ ನೇತೃತ್ವದಲ್ಲಿ ಮುಧೋಳ್ ನಲ್ಲಿ ಸಚಿವ ಡಾ.ಶರಣಪ್ರಕಾಶ್ ಪಾಟೀಲ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.

ಇದರಿಂದ ಸುತ್ತಮುತ್ತಲಿನ ಗ್ರಾಮಗಳಿಗೆ ಆಗುವ ಅನೇಕ ಹಕ್ಕೊತ್ತಾಯಗಳನ್ನು ಈ ಪಾತ್ರದಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ತಾಲೂಕ ಹೋರಾಟ ಸಮಿತಿ ಗೌರವ ಅಧ್ಯಕ್ಷರಾದ ಮಧುಸೂಧನ್ ರೆಡ್ಡಿ ಪಾಟೀಲ್, ಅಧ್ಯಕ್ಷರಾದ ಅಶೋಕ್ ಪಿರಂಗಿ, ಲಕ್ಷ್ಮೀಕಾಂತ್ ರಾವ್ ಕುಲ್ಕರ್ಣಿ, ಇಬ್ರಾಹಿಂ ಖಲೀಲ್, ರಾಘವೇಂದ್ರ ಕುಸುಮ, ಶ್ರೀನಿವಾಸ್ ರೆಡ್ಡಿ ಚಂದಾಪುರ, ವಿಠ್ಠಲ್ ಕುಂಬಾರ, ರಮೇಶ್ ದಾಮರಗಿದ್ದ, ಅಶೋಕ್ ಕೂನಿ, ದಲಿತ ಮಾದಿಗ ಸಮನ್ವಯ ಸಮಿತಿ ವಲಯ ಅಧ್ಯಕ್ಷರಾದ ಭೀಮು ಮುಧೋಳ್ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

ವರದಿ:- ವೆಂಕಟಪ್ಪ ಕೆ ಸುಗ್ಗಾಲ್.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ