ಈ ವೇಳೆ ಶಿಕ್ಷಣ ಇಲಾಖೆಯ ಅಧಿಕಾರಿ (ಸಿ ಆರ್ ಪಿ) ಹನುಮಂತಪ್ಪ ನವರು ಮಾತನಾಡಿ - ಶಾಲಾಭಿವೃದ್ಧಿ ಹಾಗೂ ಮೇಲುಸ್ತುವರಿ ಸಮಿತಿಯ ಜವಾಬ್ದಾರಿ ಮಹತ್ವದಾಗಿದೆ .

ಶಾಲೆಯ ಸರ್ವಾಂಗಣ ಪ್ರಗತಿಗೆ ಸಲಹೆ ಮಾಹಿತಿ ನೀಡುವ ಮೂಲಕ ಮಕ್ಕಳ ಪೋಷಕರಾಗಿ ಮಕ್ಕಳಿಗೆ ಯಾವುದೇ ರೀತಿಯ ಒತ್ತಡ ಹೇರದೆ ವಿದ್ಯಾರ್ಥಿಗಳ ಆಸಕ್ತಿಗೆ ಅಭಿರುಚಿಗೆ ಅನುಗುಣವಾಗಿ ಕಲಿಕೆ ಪ್ರೋತ್ಸಾಹಿಸಬೇಕು ಎಂದರು. ನಂತರ ಶಾಲೆಯ ಮುಖ್ಯ ಗುರುಗಳಾದ ಗುರುಬಸಪ್ಪ ಮಾತನಾಡಿ - ಎಸ್ ಡಿ ಎಂ ಸಿ. ಅಧ್ಯಕ್ಷ - ಉಪಾಧ್ಯಕ್ಷ- ಹಾಗೂ ಸದಸ್ಯರುಗಳು ಮಕ್ಕಳ ಕಲಿಕೆಗೆ ನೆರವಾಗುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ಮೂಲಕ ಶಾಲೆಯ ಸರ್ವಗೀಣ ಅಭಿವೃದ್ಧಿಗೆ ಶ್ರಮಿಸಬೇಕಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ - ಸಿಆರ್ಪಿ. ಹನುಮಂತಪ್ಪ.. ಶಾಲೆಯ ಮುಖ್ಯ ಗುರುಗಳಾದ.. ಗುರುಬಸಪ್ಪ..ಮುಖ್ಯ ಶಿಕ್ಷಕರಾದ ವೆಂಕನಗೌಡ ಅವರು ಸೇರಿದಂತೆ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗದವರು, ಸ್ಥಳೀಯರಾದ.ನರಸಪ್ಪ ಕಟ್ಟಿಮನಿ.. ನಾಗರಾಜ ಕವಿತಾಳ ಮಕ್ಕಳ ಪಾಲಕರು ಇನ್ನೂ ಅನೇಕರು ಇದ್ದರು..
ವರದಿ :ಬಸವರಾಜ ಬುಕ್ಕನಹಟ್ಟಿ

