
ಇದೇವೇಳೆ ಜನಪ್ರಿಯ ಕುಚಿಪುಡಿ ಇದೊಂದು ಶಾಸ್ತ್ರೀಯ ನೃತ್ಯರೂಪ ಕಲೆಯಾಗಿದ್ದು, ಈ ಅಭೂತಪೂರ್ವ ಕಲೆಯನ್ನು ಕಣ್ತುಂಬಿಕೊಳ್ಳುವ ಅವಕಾಶ ನನಗೆ ಸಿಕ್ಕಿದ್ದು ಖುಷಿಯ ಸಂಗತಿ.ಕಲಾ ಬಳಗದ ಸಂಸ್ಥಾಪಕರು ಹಾಗೂ ನನ್ನ ಬಾಲ್ಯದ ಸ್ನೇಹಿತೆಯಾದ ಶ್ರೀಮತಿ ಜ್ಯೋತಿ ಗಲಗಲಿ ಕಳೆದ 38 ವರ್ಷಗಳಿಂದ ನೃತ್ಯ ಸೇವೆಯನ್ನು ಮಾಡುತ್ತಿದ್ದು ಅವರ ಕಾರ್ಯ ಪ್ರೇರಣಾದಾಯಕವಾಗಿದೆ. ಈ ಬಾರಿ ಅಕ್ಷತಾ ನಾಗರೆಡ್ಡಿ, ಭೂಮಿಕಾ ಚೌಗಲಾ,ಸ್ವಾತಿ ಶೆಟ್ಟೆಪ್ಪನ್ನವರ, ಹಾಗೂ ತ್ರಿಶಾ ಶೆಟ್ಟಿ 4 ವಿದ್ಯಾರ್ಥಿಗಳು ಕುಚಿಪುಡಿ ರಂಗ ಪ್ರವೇಶ ಮಾಡಿದ್ದು,ಅವರನ್ನು ಅಭಿನಂದಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಪ್ರಾಚಾರ್ಯರಾದ ಸೌ.ಭಾರತಿ ಶಾನಭಾಗ,ಡಾ.ಸುಪ್ರೀತಾ ಮಲ್ಲಿಕಾರ್ಜುನ ಲಗಲಿ,ತಿರುಪತಿಯ ಭಾರತೀಯ ನೃತ್ಯ ಸಂಸ್ಥೆ ಅಧ್ಯಕ್ಷರಾದ ಡಾ.ಆರ್.ಎನ್.ಪಿ. ಶ್ರೀನಾಥಪ್ರಸಾದ, ಗಣ್ಯರು, ಮುಂತಾದವರು ಉಪಸ್ಥಿತರಿದ್ದರು.
ವರದಿ:- ರಾಜು ಮುಂಡೆ

