Web Stories
Bharath Vaibhav
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ವಾದಿರಾಜ ಬಬಲಾದಿ ಕನ್ನಡದ ಮತ್ತೊಬ್ಬ ಅಧ್ಬುತ ಸ್ಯಾಡಪ್ ಕಲಾವಿದ

Advertisement
ಬೆಳಗಾವಿ :- ವಾದಿರಾಜ ಬಬಲಾದಿ ಕನ್ನಡದ ಮತ್ತೊಬ್ಬ ಅಧ್ಬುತ ಸ್ಯಾಡಪ್ ಕಲಾವಿದ. ಬೆಳಗಾವಿ ಜನರು ಇಂತಹ ಕಲಾವಿದರನ್ನು ಬೆಳಸಬೇಕು ಎಂದು ಉತ್ತರ ಕರ್ನಾಟಕದ ಸೋಷಿಯಲ್ ಮಿಡಿಯಾ ವಿಡಿಯೋ ಕ್ರಿಯೆಟರ್ಸ್ ಅಭಿಪ್ರಾಯ ಪಟ್ಟರು.

ಭಾನುವಾರ ನಗರದ ಕನ್ನಡ ಭವನದಲ್ಲಿ ಮ್ಯಾಗನೇಟ್ ಐಸ್ ಕ್ರೀಮ್ ಹಾಗೂ ಬಿ.ಎಸ್.ಸಿ ಟೆಕ್ಸಟೆಲ್ಸ್ ಸಹಭಾಗಿತ್ವದಲ್ಲಿ "18 ಆದ್ರಾವ್ ಬರ್ರೀ" ಎಂಬ ಕನ್ನಡ ಕಾಮಿಡಿ ಶೋ ಜರುಗಿತು. ವಾದಿರಾಜ ಬಬಲಾದಿ ಅವರ ಹಾಸ್ಯಭರಿತ ಮಾತುಗಳು ಕನ್ನಡ ಭವನದಲ್ಲಿ ಜರುಗಿದ್ದ ಜನರು ನಗೆ ಕಡಲಲ್ಲಿ ತೆಲುವಂತೆ ಮಾಡಿತು.

ಆಧುನಿಕ ಯುಗದಲ್ಲಿ ಜನರು ನಗುವುದನ್ನೇ ಮರೆತ್ತಿದ್ದಾರೆ. ಕೆಲಸ, ಕೆಲಸ ಎಂದು ನಗು ಮರೆತ್ತಿರುವ ಜನರ ಮನಸ್ಸಿಗೆ ಖುಷಿ ನೀಡುವ ಸಲುವಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ. ನಿರೀಕ್ಷೆಗೂ ಮೀರಿ‌ ಜನರ ಪ್ರತಿಕ್ರಿಯೆ ಸಿಕ್ಕಿರುವುದು ನನ್ನ ಭಾಗ್ಯ. ಜೊತೆಗೆ ಉತ್ತರ ಕರ್ನಾಟಕದ ಎಲ್ಲ ಸೋಷಿಯಲ್ ಮಿಡಿಯಾ ಕಂಟೆನರ್ಸ್ ಭಾಗಿಯಾಗಿರುವುದು ನನಗೆ ಆನೆ ಬಲ ಸಿಕ್ಕಂತಾಗಿದೆ ಎಂದು ವಾದಿರಾಜ ಬಬಲಾದಿ ತಿಳಿಸಿದರು.

300 ಜನರು ಕುಳಿತುಕೊಳ್ಳಬಹುದಾದ ಕನ್ನಡ ಭವನದಲ್ಲಿ ಸಾಕಷ್ಟು ಜನರು ಟಿಕೆಟ್ ಸಿಗದೇ ನಿರಾಶೆ ಅನುಭವಿಸಬೇಕಾಯಿತು‌. ಕುಟುಂಬ ಸಮೇತವಾಗಿ ಆಗಮಿಸಿದ್ದ ಜನರು ವಾದಿರಾಜ ಹಾಗೂ ಸಂಗಡಿಗರ ಹಾಸ್ಯಭರಿತ ಮಾತುಗಳಿಗೆ ಜೀವನದ ಜಂಜಾಟಗಳನ್ನು ಮರೆತು ಆನಂದಿಸಿದರು.

ಈ ವೇಳೆ ಜಿಪಂ ಸಿಇಒ ರಾಹುಲ್ ಶಿಂಧೆ ಕುಟಂಬಸಮೇತ ಆಗಮಿಸಿದ್ದರು. ಸಮಾಜ ಸೇವಕರಾದ ಶರತ್ ಕವಟಗಿಮಠ, ಮ್ಯಾಗನೇಟ್ ಐಸ್ ಕ್ರೀಮ್ ಕಂಪನಿಯ ವ್ಯವಸ್ಥಾಪಕ ಹಾಗೂ ಯುವ ಮುಖಂಡ ದಿಗ್ವಿಜಯ ಸಿದ್ನಾಳ, ಮಾಳಮಾರುತಿ ಠಾಣೆಯ ಪಿಎಸ್ಐ ಹೊನ್ನಪ್ಪ ತಳವಾರ, ಮಾರ್ಕೆಟ್ ಠಾಣೆಯ ಪಿಎಸ್ಐ ವಿಠ್ಠಲ ಹಾವನ್ನವರ ಸೇರಿದಂತೆ ಇತರರಿದ್ದರು.
Advertisement

Author
N. Prashant Rao
Bharath Vaibhav is Digital Online Newspaper, Publishing Platform From INDIA. Karnataka, National & International, Updates including Politics, Business, Crime, Education, Sports, Science, Current Affairs. Latest Breaking News From India & Around the World.
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ನಕಲಿ ಪತ್ರಕರ್ತರ ಹಾವಳಿ ತಪ್ಪಿಸುವಂತೆ  ಪೊಲೀಸ್ ಇಲಾಖೆಗೆ ದೂರುಮಗನ ಫಲಿತಾಂಶ ನೋಡಿ ಕಂಬನಿ ಮಿಡಿದ ಬಡ ಕುಟುಂಬಹಮಿದುಲ್ಲಾ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ರಾಜ್ಯಕ್ಕೆ 5ನೇ ರ್‍ಯಾಂಕ್ತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನ ಪ್ರಧಾನಿ ಮೋದಿ ಕುರಿತು ಖರ್ಗೆ ವಿವಾದಾತ್ಮಕ ಹೇಳಿಕೆ ಖಂಡಿಸಿ ಬಿಜೆಪಿಯಿಂದ ಪ್ರತಿಭಟನೆಎಸ್ ಡಿ ಎಂ ನಾರಾಯಣ ಹಾರ್ಟ್ ಸೆಂಟರ್ ನಲ್ಲಿ ಉತ್ತರ ಕರ್ನಾಟಕದ ಮೊದಲ ಲೀಡ್ ಲೆಸ್ ಡ್ಯುಯಲ್ : ಚೇಂಬರ್ ಪೇಸ್ ಮೇಕರ್ ಅಳವಡಿಕೆ ಯಶಸ್ವಿತಾಂವಶಿಯಲ್ಲಿ ಡಾ. ಎನ್. ಪ್ರಶಾಂತರಾವ್ ಅವರಿಗೆ ಅದ್ಧೂರಿ ಸನ್ಮಾನಇಂದು ಆರ್‌ಸಿಬಿಗೆ ಜಿ.ಟಿ. ಎದುರಾಳಿಮೇಲೆದ್ದು ಬರುತ್ತಿದೆ ಚೆನ್ನೆöÊ ಸೂಪರ್ ಕಿಂಗ್ಸ್ಒಳ ಮೀಸಲಾತಿ ಜಾರಿ ವಿಚಾರ : ಇಂದು ವಿಶೇಷ ಸಂಪುಟ ಸಭೆ