8 ಲಕ್ಷ ರೂಪಾಯಿಗಳ ಮೌಲ್ಯದ 16 ದ್ವಿಚಕ್ರ ವಾಹನಗಳು ವಶಕ್ಕೆ
ನಿಪ್ಪಾಣಿ : ಗ್ರಾಮೀಣ ಪೊಲೀಸ ಠಾಣೆಯ ಪೊಲೀಸರ ಕ್ಷಿಪ್ರ ಕಾರ್ಯಚರಣೆಯಿಂದ 8 ಲಕ್ಷ ರೂಪಾಯಿಗಳ ಮೌಲ್ಯದ 16 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಪ್ಪಾಣಿ ತಾಲೂಕಿನ ಗಡಿ ಗ್ರಾಮ ಮಾನಕಾಪುರ ಗ್ರಾಮದ ನಾಗೇಶ್ ತಾನಾಗಿ ಕೆಂಗಾರ್ ವಯಸ್ಸು 26 ಎಂಬುವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ಬೆಂಡೆತ್ತಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ಕುರಿತು ತಿಳಿದ ಅಧಿಕ ಮಾಹಿತಿಯಂತೆ ದಿನಾಂಕ 30 3 2026ರಂದು ಮಧ್ಯಾಹ್ನ 12:30ಕ್ಕೆ ಕೋಡ್ನಿ ಗ್ರಾಮದ ಹದ್ದಿನಲ್ಲಿಯ ಬೂದಿಹಾಳ ರಸ್ತೆಯಲ್ಲಿಂದ ದ್ವಿಚಕ್ರ ವಾಹನ ಕಳುವಾಗಿದೆ.

ಎಂದು ಆದಿತ್ಯ ಕೌಲೋಕರ್ ಅವರು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದರಿಂದ ಪ್ರಕರಣ ದಾಖಲು ಮಾಡಿಕೊಂಡು ಬೆಳಗಾವಿ ಎಸ್ ಪಿ ಕೆ ರಾಮರಾಜನ್ ಹೆಚ್ಚುವರಿ ಎಸ್ಪಿ ಆರ್ ಬಿ ಬಸರಗಿ ನಿಪ್ಪಾಣಿ ಸಿಪಿಐ ಬಿಎಸ್ ತಳವಾರ್ ಅವರ ಮಾರ್ಗದರ್ಶನದಲ್ಲಿ ಚಿಕ್ಕೋಡಿ ಉಪ ವಿಭಾಗದ ಡಿ ಎಸ್ ಪಿ ಗೋಪಾಲಕೃಷ್ಣ ಗೌಡರ ಮತ್ತು ನಿಪ್ಪಾಣಿ ಪಿಎಸ್ಐ ಶಿವರಾಜ್ ನಾಯಕವಾಡಿ ಗ್ರಾಮೀಣ ಪೊಲೀಸ್ ಠಾಣೆ ಸಿಬ್ಬಂದಿ ಆರ್ ವೈ ಮೇಲ್ಗಡೆ ,ಆರ್ ಬಿ ಪಾಟೀಲ, ಎಂ ಎಫ್ ನದಾಫ್ ಸೇರಿ ವಿಶೇಷ ತಂಡವನ್ನು ರಚಿಸಿ ಶನಿವಾರ ದಿನಾಂಕ 4 ರಂದು ನಿಪ್ಪಾಣಿ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯ ಕೋಡ್ನಿ ಗಾಯಕನವಾಡಿ ರಸ್ತೆಯಲ್ಲಿ ವಾಹನಗಳನ್ನು ಪರಿಶೀಲಿಸುವಾಗ ಆರೋಪಿ ನಾಗೇಶ ಕೆಂಗಾರ ನೋಂದಣಿಯಾಗಿದೆ ಇದ್ದ ಸ್ಪ್ಲೆಂಡರ್ ಪ್ಲಸ್ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದಾಗ ಪೊಲೀಸರನ್ನು ಕಂಡು ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಿಸಲಾಗಿ ದಾಖಲೆಗಳಿಲ್ಲದೆ ಇರುವುದು ಕಂಡುಬಂತು. ಈ ಸಮಯದಲ್ಲಿ ಆರೋಪಿಗೆ ಪೊಲೀಸರು ತಮ್ಮ ಸಮವಸ್ತ್ರ ತೋರಿದಾಗ 20 ದಿನಗಳ ಹಿಂದೆ ಕೋಡ್ನಿ ಗ್ರಾಮದ ಪರಿಸರದಲ್ಲಿಯ ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ನಂತರ ಹೆಚ್ಚಿನ ತನಿಖೆ ನಡೆಸಲಾಗಿ ಆರೋಪಿಗಳ ಬಳಿ ವಿವಿಧ ಕಂಪನಿಗಳ ಒಟ್ಟು 16 ಬೈಕುಗಳಿದ್ದು ಅದರ ಮೌಲ್ಯ ಬರೋಬರಿ 8 ಲಕ್ಷ ರೂಪಾಯಿ ಎಂದು ತಿಳಿದುಬಂದಿದೆ ಬೆಳಗಾವಿ ಎಸ್ ಪಿ ಕೆ ರಾಮರಾಜನ್ ಹಾಗೂ ಹೆಚ್ಚುವರಿ ಎಸ್ಪಿ ಆರ್ ಬಿ ಬಸರಗಿ ಅವರು ಸದರಿ ತನಿಖೆ ನಡೆಸಿದ ನಿಪ್ಪಾಣಿ ಪೊಲೀಸರ ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.
ವರದಿ : ಮಹಾವೀರ ಚಿಂಚಣೆ




