ಐಗಳಿ: ಅಥಣಿ ತಾಲೂಕಿನ ಅಡಹಳ್ಳಿ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಡಾಕ್ಟರ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ೧೩೪ನೆಯ ಜನ್ಮದಿನದ ಅಂಗವಾಗಿ ಭೀಮವಾದ ದಲಿತ ಸಂಘರ್ಷ ಸಮಿತಿ ಆಶ್ರಯದಲ್ಲಿ ಏಪ್ರಿಲ್ 12ರಂದು ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಾ. ಬಿ ಆರ್ ಅಂಬೇಡ್ಕರ್ ಅವರ ಸಮಗ್ರ ಜೀವನ ಆಧಾರಿತ ವಿಷಯದ ಮೇಲೆ ರಸಪ್ರಶ್ನೆಗಳಿವೆ ಪದವಿಪೂರ್ವ ಮಟ್ಟದ ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶವಿದೆ ವಿಜೇತರಿಗೆ ಪ್ರಥಮ 7000 ಸಾವಿರ ರೂ. ದ್ವಿತೀಯ 5000 ಸಾವಿರ ರೂ.ತೃತೀಯ 3000 ಸಾವಿರ ರೂ. ಬಹುಮಾನ ವಿತರಿಸಲಾಗುವುದು ಎಂದು ದಲಿತ ಮುಖಂಡ ಚಿದಾನಂದ್ ತಳಕೇರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 97414 99643