Ad imageAd image
- Advertisement -  - Advertisement -  - Advertisement - 

ಎರಡು ಭಾಗದಲ್ಲಿ ಭಾರತ ವೈಭವ ವರದಿ ಬೆನ್ನೆಲೆ ರಸ್ತೆ ಸರಿಪಡಿಸಿದ ಅಧಿಕಾರಿಗಳು

Bharath Vaibhav
ಎರಡು ಭಾಗದಲ್ಲಿ ಭಾರತ ವೈಭವ ವರದಿ ಬೆನ್ನೆಲೆ ರಸ್ತೆ ಸರಿಪಡಿಸಿದ ಅಧಿಕಾರಿಗಳು
WhatsApp Group Join Now
Telegram Group Join Now

ಹುಬ್ಬಳ್ಳಿ :-ಜುಲೈ 28 ರಂದು ಪ್ರಕಟವಾಗಿದ್ದ ರಸ್ತೆ ಡಾಂಬರೀಕರಣಕ್ಕೆ ಗ್ರಾಮಸ್ಥರ ಆಗ್ರಹ ಎಂಬ ವರದಿ ಭಾರತ ವೈಭವ ಪತ್ರಿಕೆಯಲ್ಲಿ ವರದಿ ಮಾಡಲಾಗಿತ್ತು.

ವರದಿ ತಿಳಿದ ಅಧಿಕಾರಿಗಳು ಕೂಡಲೇ ನವಲಗುಂದ ತಾಲ್ಲೂಕಿನ ಹಾಲಕುಸುಗಲ್‌ ಗ್ರಾಮದ ಪ್ರಮುಖ ರಸ್ತೆಗಳಾದ ಅಳಗವಾಡಿ ರಸ್ತೆ, ನವಲಗುಂದ ರಸ್ತೆ ಹಾಗೂ ಹುಬ್ಬಳ್ಳಿ ರಸ್ತೆಗೆ ಮಣ್ಣು ಹಾಕಿ ಬಸ್ ಸಂಚಾರಕ್ಕೆ ಹಾಗೂ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ಹಾಗೂ ಹುಬ್ಬಳ್ಳಿ ತಾಲ್ಲೂಕಿನ ರಾಯನಾಳ ಗ್ರಾಮದ ಬಡಿಗೇರ ಓಣಿ ಮತ್ತು ಬಸಮ್ಮ ಕಾಲೋನಿಗೆ ಹೊಂದಿಕೊಂಡಿರುವ ಗ್ರಾಮದ ಮುಖ್ಯ ರಸ್ತೆ ಮಳೆ ಬಂದು ಹಾಳಾಗಿದ್ದರ‌ ಬಗ್ಗೆ ಆಗಸ್ಟ್ 5 ರಂದು ನಮ್ಮ ಭಾರತ ವೈಭವ್ ಪತ್ರಿಕೆಯಲ್ಲಿ ವರದಿ ಪ್ರಕಟವಾಗಿತ್ತು.

ವರದಿ ನೋಡಿದ ಗ್ರಾಮ ಪಂಚಾಯತ ಅಧಿಕಾರಿಗಳು ರಸ್ತೆ ದುರಸ್ತಿ ದುರಸ್ತಿ ಮಾಡುವ ಮೂಲಕ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ.

ವರದಿ:- ನಿತೀಶಗೌಡ ತಡಸ ಪಾಟೀಲ್

WhatsApp Group Join Now
Telegram Group Join Now
Share This Article
error: Content is protected !!